ಛತ್ರಪತಿ ಶಿವಾಜಿ ಮಹಾರಾಜ ಪತ್ತಿನ ಸಹಕಾರ ಸಂಘದ ಉದ್ಘಾಟನೆ
,ಹೊನ್ನಾಳಿ: ಮರಾಠ ಸಮುದಾಯ ತೀರಾ ಹಿಂದುಳಿದಿದ್ದು, ಅದನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆ. ಮರಾಠರ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗ ಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ,ಡಾ, ಎಂ.ಜಿ. ಮೂಳೆ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಶನಿವಾರ ಹಿರೇ ಕಲ್ಮಠದ ಚನ್ನಪ್ಪ ಸ್ವಾಮಿ ಸಮುದಾಯ ಭವನದಲ್ಲಿನಡೆದ ಛತ್ರಪತಿ ಶಿವಾಜಿ ಮಹಾರಾಜರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಪತ್ತಿನ ಸಹಕಾರ ಸಂಘದ ಸ್ಥಾಪನೆ ಸುಲಭದ ಕೆಲಸವಲ್ಲ, ಬಹಳ ಎಚ್ಚರಿಕೆಯಿಂದ, ಪ್ರಾಮಾಣಿ ಕತೆಯಿಂದ ಸಂಘವನ್ನು ನಡೆಸಿಕೋಡು ಅಧ್ಯಕ್ಷರು, ನಿರ್ದೇಶಕರು ಕೆಲಸವನ್ನು ಮಾಡಬೇಕಾಗಿದೆ’ ಎಂದರು.
‘ಶಿವಾಜಿ ಅವರನ್ನು ಎಲ್ಲರೂ ನೆನೆಯುತ್ತಾರೆ. ಆದರೆ ಷಹಜಿ ಮಹಾರಾಜ್ ಅವರನ್ನು ನಾವೆಲ್ಲರೂ ಮರೆತುಬಿಟ್ಟಿದ್ದೇವೆ.ಅವರು ನಿಮ್ಮ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಹೊದಿಗೆರೆ ಯಲ್ಲಿ ಅವರ ಸಮಾಧಿಯನ್ನು ನಿರ್ಮಿಸಲಾಗಿದೆ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದರು ಸ್ವರಾಜ್ ಘೋಷಣೆಯನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಅವರ ಸಮಾಧಿಯ ಜೀರ್ಣೋದ್ಧಾರ ಮಾಡಬೇಕಾಗಿದೆ’ ಎಂದು ಹೇಳಿದರು.
‘ಸಂಘದ. ಸಾಲ ಪಡೆದವರು ಬಡ್ಡಿ ಸಹಿತ ಮರುಪಾವತಿ ಮಾಡಬೇಕು. ನಾವು ಸ್ವಾರ್ಥಕ್ಕಾಗಿ ಹೋರಾಟ ಮಾಡಿದವರಲ್ಲ, ದೇಶಕ್ಕಾಗಿ ಹೋರಾಟ ಮಾಡಿದವರು’ ದೇಶದಲ್ಲಿ ಹಿಂದುತ್ವ ಇದೆ ಎಂದರೆ ಅದಕ್ಕೆ ಕಾರಣ ಶಿವಾಜಿ ಮಹಾರಾಜರು ನಾವು 30 ವರ್ಷಗಳ ಹಿಂದೆ ಇದೇ ರೀತಿಯಾದ ಶ್ರೀ ಅಂಬಾಭವಾನಿ ಪತ್ತಿನ ಸಹಕಾರ ಸಂಘ ಆರಂಭ ಮಾಡಿದ್ದೆವು ದಾವಣಗೆರೆ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಹಕಾರ ಸಂಘ ಎಂದರೆ ಅದುವೇ ಶ್ರೀ ಅಂಬಾ ಭವಾನಿ ಪತ್ತಿನ ಸಹಕಾರ ಸಂಘ ಎಂದು ಹೇಳುತ್ತಾರೆ ಆ ಸಂಘದ ಅಧ್ಯಕ್ಷನಾಗಿ ನಿರ್ದೇಶಕನಾಗಿ ಸಾಕಟ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಪಕ್ಷ ಇಂದು ಬಂದರೆ ನಾವುಗಳು ಎಲ್ಲಾ ಪಕ್ಷದಲ್ಲಿ ಇದ್ದೇವೆ ಆದರೆ ಜಾತಿ ಎಂದು ಬಂದರೆ ಪಕ್ಷ ಭೇದ ಭಾವಗಳನ್ನು ಮರೆತು ನಮ್ಮ ಸಮಾಜಕ್ಕಾಗಿ ಸಮಾಜದ ಕೆಲಸವನ್ನು ಮಾಡಬೇಕು ನಮ್ಮ ಸಮಾಜದ ಬಾಂಧವರು ನಮ್ಮ ಸಂಘಕ್ಕೆ ಸದಸ್ಯರಾಗಿ ಹೆಚ್ಚು ಹೆಚ್ಚು ಅಭಿವೃದ್ಧಿಯನ್ನು ಹೊಂದಲಿ ಈ ಸಮಾಜವು ಉನ್ನತ ಶಿಖರಕ್ಕೆ ಏರಲ್ಲಿ ಸಾಲ ಪಡೆದಂತವರು ಸಕಾಲಕ್ಕೆ ಸಾಲ ತೀರಿಸಲಿ ಹೆಚ್ಚು ಅಭಿವೃದ್ಧಿಯನ್ನು ಹೊಂದಲಿ ಎಂದು ಮಾಜಿ ದೂಡ ದಾವಣಗೆರೆ ಜಿಲ್ಲೆ ಅಧ್ಯಕ್ಷರಾದ ಯಶವಂತರಾವ್ ಜಾಧವ್ ಹೇಳಿದರು.
ಮರಾಠ ಸಮುದಾಯದ ಗುರುಗಳಾದ ಮಂಜುನಾಥ್ ಭಾರತಿ ಸ್ವಾಮೀಜಿಯವರು ಭಾಗವಹಿಸಿದ್ದರು, ಹಿರೇಕಲ್ಮಠದ ಡಾ,ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ. ಆಶೀರ್ವಚನ ನೀಡಿದರು
ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸಂಘದ ಅಧ್ಯಕ್ಷ ಎಚ್.ಬಿ. ದೇವರಾಜ್ ನೆಲಹೊನ್ನೆ, ವೀರ ಶಿವಾಜಿ ಸೇನೆ ರಾಜ್ಯ ಅಧ್ಯಕ್ಷರಾದ ಕಮಲೇಶ್ರಾವ್, ಮರಾಠ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ,ಎ.ಆರ್. ಚಂದ್ರಶೇಖರ್ ರಾವ್ ರಾಮಚಂದ್ರಪ್ಪ, ಲಿಂಗಾಪುರ ಸುರೇಶ್,ನಿರುಪಣೆ ಯೋಗಿತಾ ಹೊನ್ನಾಳಿ ಕೀರುತೇರೆಯ ನಟಿ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಭಾಗವಹಿಸಿದ್ದರು.
ಸಮಾಜದ ಅಧ್ಯಕ್ಷರಾಗಿ ದೇವರಾಜ್ ನೆಲಹೊನ್ನಿ ಅಧ್ಯಕ್ಷರು ಛತ್ರಪತಿ ಶಿವಾಜಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ನಮ್ಮ ಸಮಾಜದ ಬಾಂಧವರು ತಿಳಿಸುವುದೇನೆಂದರೆ ಎಲ್ಲಾ ಬಾಂಧವರು ನಮ್ಮ ಸಂಘದಲ್ಲಿ ಸದಸ್ಯತ್ವವನ್ನು ಹೊಂದಬೇಕು ನಮ್ಮ ಸಮಾಜದ ಬಂಧುಗಳಿಗೆ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಸಮಾಜದ ಬಂಧುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಇನ್ನೂ ಅನೇಕ ಯೋಜನೆಗಳು ನಮ್ಮಲ್ಲಿವೆ ನಾವು ಗಳು ಎರಡು ವರ್ಷಗಳಿಂದಲೂ ಪಟ್ಟಂತ ಶ್ರಮ ಈಗ ಕೈಗೂಡಿದೆ ಎಲ್ಲಾ ಸಹಕಾರದಿಂದ ಸಂಘವು ಉದ್ಘಾಟನೆಯಾಗಿದೆ ಇದನ್ನು ಎಲ್ಲರೂ ಸದ್ ವಿನಿಯೋಗ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು
ಕಾರ್ಯಕಾರಿ ಮಂಡಳಿಯ ಸದಸ್ಯರು
ಅಧ್ಯಕ್ಷರು : ಶ್ರೀ ಹೆಚ್.ಬಿ. ದೇವರಾಜ್, ನೆಲಹೊನ್ನೆ
ಉಪಾಧ್ಯಕ್ಷರು : ಸುರೇಶ್ ಕೆ. (ಮಾಸ್ತರ್) ಅಂಗಾಪುರ
ನಿರ್ದೇಶಕರು : ಶ್ರೀ ನವೀನ್ ಸಿ.ಎನ್. ಹನುಮನಹಳ್ಳಿ
ಶ್ರೀ ಮೋಹನ್ಕುಮಾರ್ ಬಾಗವಾಡಿ
ಶ್ರೀ ನಾಗೇಶರಾವ್ ಎನ್. ಸೊರಟೂರು
ಶ್ರೀ ದುಶ್ಯಂತ್ ಎಸ್ ಶುರುವ
ಶ್ರೀ ವಿಶ್ವನಾಥ ಎ. ಹರಳಹಳ್ಳಿ
ಶ್ರೀ ಪ್ರಕಾಶ್ ರಾವ್ ಎಂ.ಎಸ್. ಹಿರೇಗೋಣಿಗೆರೆ
ಶ್ರೀ ಅಣ್ಣಪ್ಪ ಕೆಂಗನಹಳ್ಳಿ
ಶ್ರೀ ಮಂಜುನಾಥ ಬನ್ನಿಕೋಡು
ಶ್ರೀ ಈಶೋಜಿರಾವ್ ಹೊನ್ನಾಜಿ
ಶ್ರೀ ಹಾಲೇಶಪ್ಪ ಬಿ. ಹೊಸ ಹನುಮನಹಳ್ಳಿ
ಶ್ರೀ ನಾಗರಾಜ್ರಾವ್ (ಮಟ್ಟಿಮನೆ) ಮಲಗೊರಜನಹಳ್ಳಿ
ಶ್ರೀಮತಿ ಜೆ.ಆರ್. ನಿರ್ಮಲ ರಂಗನಾಥ ರಾವ್ ಯರೇಹಳ್ಳಿ
ಶ್ರೀಮತಿ ದೀಪಿಕಾ ಕೆ. ಹರೀಶ್ ಎಂ. ಬೇಲಿಮಲ್ಲೂರು
ಕಾನೂನು ಸಲಹೆಗಾರರು :
ಶ್ರೀ ಹರೀಶ್ರಾವ್ ಯರೇಹಳ್ಳಿ
ಕಚೇರಿ ಕಾರ್ಯದರ್ಶಿ :
ಶ್ರೀ ಎಂ.ಟಿ. ಅಶೋಕ, ಹಿರೇಗೋಣಿಗೆರೆ..
ವರದಿ ಪ್ರಭಾಕರ್ ಡಿ ಎಂ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030