ಕಾಡಸಿದ್ದೇಶ್ವರ ಆದರ್ಶ ನಮಗೆಲ್ಲ ಮಾರ್ಗದರ್ಶಕ : ಅಭಿನವ ಕಾಡಸಿದ್ದೇಶ್ವರ ಶ್ರೀ
ಗುಳೇದಗುಡ್ಡ: ಇಲ್ಲಿನ ಮಠಗಳು ಸೌಹಾರ್ದಯುತ ಸಂಬಂಧಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಜಾತಿಜನಾಂಗಗಳು, ಹಲವಾರು ಮಠಮಂದಿರಗಳು ಇದ್ದರೂ ಎಲ್ಲರೂ ಭಾವ್ಯಕ್ಯತೆಯಿಂದ ಬದುಕುತ್ತಿದ್ದಾರೆ. ಆ ಪರಂಪರೆಯಲ್ಲಿ ಮರಡಿ ಮಠವೂ ತನ್ನದೇ ಆದ ಕೊಡೆಗೆ ನೀಡಿದೆ. ಮೌನಯೋಗಿ ಎಂದೆ ಪ್ರಸಿದ್ಧಿ ಪಡೆದ ಮರಡಿ ಮಠದ ಪೂಜ್ಯ ಲಿಂ. ಕಾಡಸಿದ್ದೇಶ್ವರ ಶಿವಾಚಾರ್ಯರು ತಮ್ಮ ಬದುಕಿನುದ್ದಕ್ಕೂ ಎಲ್ಲರನ್ನೂ ಸಮನವಾಗಿ ಕಂಡು, ಎಲ್ಲರ ಏಳಿಗೆಗೆ ಶ್ರಮಿಸಿದವರು ಎಂದು ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಅವರು ರವಿವಾರ ರಾತ್ರಿ ಪಟ್ಟಣದ ಚೌಬಜಾರದಲ್ಲಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಶ್ರೀ ಮರಡಿಮಠದ ಲಿಂ. ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳವರ ಐದನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಪ್ರಸಾಧ ಸೇವೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗುರುಪರಂಪರೆ, ಗುರುಭಕ್ತಿಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವಕರು ಸೇರಿದಂತೆ ಪ್ರತಿಒಬ್ಬರಲ್ಲಿಯೂ ಬರಬೇಕು. ಲಿಂ.ಕಾಡಸಿದ್ದೇಶ್ವರರ ಆದರ್ಶ ನಮೆಗೆಲ್ಲ ಮಾರ್ಗದರ್ಶಕವಾಗಿರಲಿ ಎಂದು ಹೇಳಿದರು.
ಇದಕ್ಕೂ ಮೊದಲು ಲಿ.ಕಾಡಸಿದ್ದೇಶ್ವರ ಶಿವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನಪ್ರಸಾದ ನಡೆಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪ್ರಕಾಶ ಮುರಗೋಡ, ಮಲ್ಲಿಕಾರ್ಜುನ ಹಿರೇಮಠ, ಚಂದ್ರಶೇಖರ ಹರವಿ, ಸಿದ್ದು ನಾಯನೇಗಲಿ, ಅಮರೇಶ ಯಳಮೇಲಿ, ಬಸವರಾಜ ಸಿಂದಗಿಮಠ, ಸೂರಜ ಮಲಜಿ, ಮಲ್ಲು ಹಡಗಲಿ, ಪ್ರವೀಣ ದೇವಗಿರಕರ, ಮುತ್ತು ಮೊರಬದ, ಶಾಂತವೀರಯ್ಯ ಹುಚ್ಚೇಶ್ವರಮಠ, ಮಹಾದೇವ ಗೌಳಿ, ಸಿದ್ದಯ್ಯ ರೇವಣಸಿದ್ದೇಶ್ವರಮಠ,ಗುರು ಹಂಡಿ ಮತ್ತಿತರರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030