ಗುಡೇಕೋಟೆ ಹಾವು ಹಿಡಿಯುವುದರಲ್ಲಿ ಚತುರ ಗಸ್ತುಪಾಲಕ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಅರಣ್ಯ ವಲಯದ ಗಸ್ತು ಪಾಲಕರಾದ ಬಿಎಸ್ ಶ್ರೀಧರ್ ರವರು ಗುಡೆಕೋಟೆ ಮೋಟ್ ಪಾಲಯ್ಯನ ಹೊಲದ ಮೆಣಸಿನಕಾಯಿ ರಾಶಿಯಲ್ಲಿ 3-4 ದಿನಗಳಿಂದ ಅಡಗಿ ಕುಳಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಮತ್ತು ಗುಡೇಕೋಟೆ ನೀರುಗಂಟಿ ರಹಮತ್ ಇವರ ಮನೆಯ ಹತ್ತಿರಇದ್ದ ನಾಗರಹಾವನ್ನು ಹಿಡಿದಿದ್ದರೆ ಇದೇತರಹ ಸುಮಾರು 50 ಕ್ಕಿಂತ ಹೆಚ್ಚಿನ ಹಾವುಗಳನ್ನು ಹಿಡಿದು ಸುರಕ್ಷಿತವಾದ ಸ್ಥಳಕ್ಕೆ ಬಿಟ್ಟಿದ್ದಾರೆ ಹಾವು ಎಂದರೆ ಯಾರಿಗೆ ಭಯ ಇಲ್ಲಹೇಳಿ ಹಾವು ಬುಸುಗುಟ್ಟುವ ಸದ್ದಿಗೆ ನಾವು ಗಾಬರಿ ಯಾಗುತ್ತೇವೆ ಆದರೆ ಗುಡೇಕೋಟೆ ಅರಣ್ಯ ಗಸ್ತು ಪಾಲಕರಾದ ಬಿ.ಎಸ್.ಶ್ರೀಧರ್ ಹಾವು ಗಳನ್ನು ಹಿಡಿದು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಇವರ ಕಾರ್ಯಕ್ಕೆ ಗುಡೇಕೋಟೆ ಅರಣ್ಯ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…
ವರದಿ: ಶಿವಕುಮಾರ್ ಸಿ.ಎಸ್.ಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030