ಉಜ್ಜಿನಿ : ಶ್ರದ್ಧೆ ಭಕ್ತಿಗೆ ಸಾಕ್ಷಿಯಾದ ಶಿಖರ ತೈಲಾಭಿಷೇಕ
ಶ್ರೀ ಕ್ಷೇತ್ರ ಉಜ್ಜಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಶಿಖರಕ್ಕೆ ಶನಿವಾರ ನಡೆದ ತೈಲಾಭಿಷೇಕವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಭಾರತದಲ್ಲಿಯೇ ವಿಶಿಷ್ಟ ಆಚರಣೆಯಾದ ಶಿಖರಕ್ಕೆ ಎಣ್ಣೆ ಎರೆಯುವ (ತೈಲಾಭಿಷೇಕ) ಕಾರ್ಯಕ್ರಮ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ಗ್ರಾಮದ ಪಾಳೆಗಾರರು ಕಳಿಸಿಕೊಟ್ಟ ತೈಲದ ಕುಂಬವನ್ನು ಮಧ್ಯಾಹ್ನ ಗ್ರಾಮದ ಪ್ರಥಮ ಪಾದದ ಬಳಿ ದೇವಸ್ಥಾನದ ಸಂಪ್ರದಾಯದಂತೆ ಸ್ವಾಗತ ಮಾಡಿಕೊಳ್ಳಲಾಗಿತ್ತು. ನಂತರ ಸಕಲ ವಾಧ್ಯಗಳೊಂದಿಗೆ ತೈಲದ ಕುಂಬವನ್ನು ದೇವಸ್ಥಾನದ ಆವರಣಕ್ಕೆ ತಂದು, ದೇವಸ್ಥಾನ ಪ್ರದಕ್ಷಿಣೆ ಹಾಕಿ ತೈಲ ತುಂಬಿದ ಕುಂಬವನ್ನು ಶಿಖರದ ಮೇಲೆ ತೆಗೆದುಕೊಂಡು ಹೋಗಿ ಪ್ರಥಮಾರ್ಥವಾಗಿ ಶಿಖರಕ್ಕೆ ಅಭಿಷೇಕ ಮಾಡಲಾಯಿತು. ನಂತರ ಭಕ್ತರು ತಾವು ತಂದಿದ್ದ ಎಣ್ಣೆಯನ್ನು ಶಿಖರಕ್ಕೆ ಹಾಕಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದರಿಂದ ಶಿಖರದ ಮುಡಿಯಿಂದ ಅಡಿಯವರೆಗೂ ತೈಲ ಹರಿಯಲಾರಂಭಿಸಿತು. ನೆರೆದಿದ್ದ ಲಕ್ಷಾಂತರ ಭಕ್ತರು ಮತ್ತು
ಬಿ ಶ್ರೀರಾಮುಲು ಮಾಜಿ ಸಚಿವರು , ವಿ ಸೋಮಣ್ಣ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರು ಭಾರತ ಸರ್ಕಾರ ಸಂಸದರು ತೈಲ ಅಭಿಷೇಕವನ್ನು ನೋಡಿ ಪುನಿತರಾದರು. ಭಕ್ತ ಸಾಗರವನ್ನು ಕಂಡು ಆಶ್ಚರ್ಯ ಚಕಿತರಾದ ಕೇಂದ್ರ ಸಚಿವರು ಇಂತಹ ಅದ್ಭುತ ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾದ ನಾನೇ ಧನ್ಯ ಎನ್ನುವ ಭಕ್ತಿಪರಶ ಮಾತುಗಳನ್ನಾಡಿ ಮರಳು ಸಿದ್ದೇಶ್ವರರ ಭಕ್ತರಿಗೆ ಸದಾ ಒಳಿತಾಗಲಿ ಎಂದು ಹರಸಿದರು
ಇದೇ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್ ಟಿ ಶ್ರೀನಿವಾಸ್ ಬಳ್ಳಾರಿ ಸಂಸದರಾದ ಇ ತುಕಾರಾಂ ಕೆಎಂಎಫ್ ಅಧ್ಯಕ್ಷರಾದ ಭೀಮ ನಾಯಕ್ ಬಿಡಿಸಿಸಿ ಉಪಾಧ್ಯಕ್ಷರಾದ ಐ ದ್ವಾರಕೇಶ್ ಉಪಸ್ಥಿತರಿದ್ದರು…
ವರದಿ ಎಂ ಮಲ್ಲಿಕಾರ್ಜುನ್ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030