ಉಜ್ಜಯಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ತೇರುಗಾಲಿ ಹೊರಗೆ
ಉಜ್ಜಿನಿ: ಮೇ 02 ಶುಕ್ರವಾರದಂದು ನಡೆಯಲಿರುವ ಉಜ್ಜಯಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಗುರುವಾರ ತೇರುಗಾಲಿಯನ್ನು ಹೊರ ಹಾಕಲಾಯಿತು.
ಬೆಳಿಗ್ಗೆ 10.30 ಕ್ಕೆ ಸುಮಾರಿಗೆ ಸಕಲ ವಾದ್ಯ ಮೇಳಗಳೊಂದಿಗೆ ಭಕ್ತರ ಜಯ ಘೋಷದೊಂದಿಗೆ ರಥದ ಗಡ್ಡೆವನ್ನು ತೇರು ಮನೆಯಿಂದ ಎಳೆದು ತಂದು ರಥ ಕಟ್ಟುವ ಸ್ಥಳದಲ್ಲಿ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ಭಕ್ತರು ಹಾಗೂ 9 ಪಾದಗಟ್ಟೆಗಳ ಭಕ್ತಾದಿಗಳು ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಇದ್ದರು.
ಮೇ 02 ರಂದು ಶ್ರೀ ಜಗದ್ಗುರು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ನಡೆಯಲಿದ್ದು, ಮೇ 03ರಂದು ಶಿಖರಕ್ಕೆ ತೈಲಾಭಿಷೇಕ ನೆರವೇರಲಿದೆ. ಮೇ 07 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿವೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030