” ಸ್ವಚ್ಛ ಸಮಾಜಕ್ಕಾಗಿ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಅರ್ಥಪೂರ್ಣ ವಾರ್ಷಿಕೋತ್ಸವ ಆಚರಿಸಿದ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ದಿನಾಂಕ 15.12.2024ನೇ ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಅನೇಕ “ವಿಶೇಷತೆಗಳಿಗೆ ಹಾಗೂ ಶ್ರೇಷ್ಠ ಸಮಾಜ ಸುಧಾರಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು”
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ನಿವೃತ್ತ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯ ಮತ್ತು ಲೋಕಾಯುಕ್ತ ಕರ್ನಾಟಕ ಶ್ರೀಯುತ ಸಂತೋಷ್ ಹೆಗಡೆ ಅವರು ನೆರವೇರಿಸಿ ಸ್ವಚ್ಛ ಸಮಾಜಕ್ಕಾಗಿ ಮಾಹಿತಿ ಹಕ್ಕು ವೇದಿಕೆ ಸ್ಥಾಪನೆ ಸಮಾಜಕ್ಕೆ ಮಾದರಿಯಾಗಲಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಹಾಗೂ ಭ್ರಷ್ಟಾಚಾರದ ಹೋರಾಟದಲ್ಲಿ ವೇದಿಕೆಯ ಕಾರ್ಯಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಂತೋಷಕ್ಕೆ ಸರ್ ಮುಂದಿನ ಹೋರಾಟಗಳಿಗೆ ನಮ್ಮ ಮಾರ್ಗದರ್ಶನ ಇರುತ್ತದೆ ಎಂದು ಮಾತನಾಡಿದರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬ ರೆಡ್ಡಿ ಮಾತನಾಡಿ ಕಾನೂನಾತ್ಮಕವಾಗಿ ಹೋರಾಟದಲ್ಲಿ ನಮ್ಮ ಬೆಂಬಲವಿದೆ ಎಂದು ವೇದಿಕೆಗೆ ಧೈರ್ಯವನ್ನು ತುಂಬಿದರು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ್ ತಗಡೂರು ಮಾತನಾಡಿ ರಾಜ್ಯದಾದ್ಯಂತ ಪತ್ರಕರ್ತರ ಸಂಘವು ಸಹ ವೇದಿಕೆಗೆ ಬೆಂಬಲವಾಗಿ ನಿಲ್ಲುವುದು ಎನ್ನುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ವೇದಿಕೆಯ ಪ್ರಾರಂಭದಿಂದಲೂ ಮಾಹಿತಿಗಳನ್ನ ನೀಡುವ ಮೂಲಕ ವೇದಿಕೆಗೆ ಬೆನ್ನೆಲುಬಾಗಿ ನಿಂತಿದ್ದ ವೀರೇಶ್ ಬೆಳ್ಳೂರು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಬೆಂಗಳೂರು ಇವರು ಹಾಗೂ ಹೆಚ್ಎಂ ವೆಂಕಟೇಶ್ ರಾಜ್ಯಾಧ್ಯಕ್ಷರು ನೈಜ ಹೋರಾಟಗಾರರ ಸಂಘ ಬೆಂಗಳೂರು ಇವರುಗಳ ಸುದೀರ್ಘ ಮಾತುಗಳು ಹಾಗೂ ರಾಜ್ಯದಾದ್ಯಂತ ಬಂದಿದ್ದ ಮಾಹಿತಿ ಹಕ್ಕು ವೇದಿಕೆಯ ಎಲ್ಲಾ ಸದಸ್ಯರುಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಚರ್ಚೆ ವಿಮರ್ಶೆಗಳ ಮೂಲಕ ಪ್ರಶ್ನೋತ್ತರ ವೇಳೆಯಲ್ಲಿ ಅವರು ನಡೆಸಿದ ಅಮೋಘ ಮಾತುಕತೆಗಳು ನೆರೆದಿದ್ದ ಸರ್ವರಲ್ಲೂ ಕೂಡ ಜ್ಞಾನದ ಸಲಹೆಯನ್ನ ಉಂಟು ಮಾಡಿತು ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಹೇಮಂತ್ ನಾಗರಾಜು ಮಾತನಾಡಿ ಸಮಾಜವನ್ನು ಸ್ವಚ್ಛವಾಗಿಡಲು ನಮ್ಮ ವೇದಿಕೆ ಸದಾ ಸಿದ್ಧವಾಗಿದ್ದು ಉತ್ತಮ ಸಮಾಜ ನಿರ್ಮಾಣ ಮಾಡಲು ನಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಹಾಗೂ 10 ಜಿಲ್ಲೆಗಳಿಗೆ ಸೀಮಿತವಾಗಿದ್ದ ವೇದಿಕೆ ಇದೇ ಸಂದರ್ಭದಲ್ಲಿ ಇನ್ನು ಐದು ಜಿಲ್ಲೆಗಳ ಜಿಲ್ಲಾ ಘಟಕಗಳು ಉದ್ಘಾಟನೆಗೊಳ್ಳುವ ಮೂಲಕ ವೇದಿಕೆಗೆ ಇನ್ನಷ್ಟು ಬಲಬಂದಂತಾಗಿದೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಘಟಕಗಳನ್ನ ಸ್ಥಾಪನೆ ಮಾಡಿ ಎಲ್ಲಾ ಕಚೇರಿಗಳಲ್ಲಿ ಸ್ವಚ್ಛ ಸಮಾಜದ ತಿರುಳನ್ನ ಹೊಸರಿಸುವ ಮೂಲಕ ವೇದಿಕೆ ಕಾರ್ಯನಿರ್ವಹಿಸಲಿದೆ ಎನ್ನುವ ಸಂದೇಶವನ್ನು ಸಾರಿದರು ಬೆಂಗಳೂರು ಮೈಸೂರು ಕೋಲಾರ ಕೊಪ್ಪಳ ದಾವಣಗೆರೆ, ಮಂಡ್ಯ ರಾಮನಗರ ಧಾರವಾಡ ಹಾವೇರಿ ರಾಯಚೂರು ಶಿವಮೊಗ್ಗ ಚಿತ್ರದುರ್ಗ ವಿಜಯನಗರ ವಿಜಯಪುರ ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲೆಯ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಹಾಗೂ ವೇದಿಕೆಯ ಎಲ್ಲಾ ಸದಸ್ಯರನ್ನ ಹುರಿದುಂಬಿಸುವ ಮುಖಾಂತರ ಸಂಘಟನೆಯನ್ನು ರಾಜ್ಯದ 31 ಜಿಲ್ಲೆಗಳಿಗೆ ವ್ಯಾಪಿಸುವ ಗುರಿಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು ಒಂದು ವರ್ಷದ ಅವಧಿಯಲ್ಲಿ ವೇದಿಕೆ ನಿರಂತರ ಕಾರ್ಯಗಳನ್ನು ಮಾಡುವ ಮೂಲಕ 15 ಜಿಲ್ಲೆಗಳಲ್ಲಿ ಸಂಘಟಿತವಾಗಿ ಪ್ರಾರಂಭವಾಗಿದ್ದು ಮುಂದಿನ ಒಂದೇ ವರ್ಷದಲ್ಲಿ 31 ಜಿಲ್ಲೆಗಳಲ್ಲೂ ವೇದಿಕೆ ತನ್ನ ಕಾರ್ಯವನ್ನು ಪ್ರಾರಂಭಿಸಲಿದೆ ಎನ್ನುವ ಸಂದೇಶವನ್ನು ನೀಡುವ ಮುಖಾಂತರ ತಮ್ಮ ಅಧ್ಯಕ್ಷೀಯ ಭಾಷಣವನ್ನು ನುಡಿದರು ಇದೇ ಸಂದರ್ಭದಲ್ಲಿ ಮಧು ಕೆ ಟಿ ರಾಜ್ಯ ಉಪಾಧ್ಯಕ್ಷರು ನವೀನ್ ಕುಮಾರ್ ಹೆಚ್ ಪಿ ಪ್ರಧಾನ ಕಾರ್ಯದರ್ಶಿಗಳು ಆಂಥೋನಿ ಆಲ್ಬರ್ಟ್ ಎಂ ರಾಜ್ಯ ಸಹಕಾರಿದರ್ಶಿಗಳು ನಂದಕುಮಾರ್ ರಾಜ್ಯ ಲೆಕ್ಕ ಪರಿಶೋಧಕರು ಶ್ರೀಮತಿ ದೀಪು ರಾಜ್ಯಕಜಾಂಚಿ ಮೊಹಮದ್ ಸಫೀರ್ ರಾಜ್ಯ ಸಂಚಾಲಕರು ಐ ಚೇತನ್ ಕುಶಾಲಪ್ಪ ರಾಜ್ಯ ಸಹ ಸಂಚಾಲಕರು ಉಪಸ್ಥಿತರಿದ್ದರು ಶ್ರೀಯುತ ಉಮೇಶ್ ಪ್ರಧಾನ ಕಾರ್ಯದರ್ಶಿಗಳು ಶಿವಮೊಗ್ಗ ಇವರು ಸ್ವಾಗತಿಸಿದ್ದು ಸಬ್ಜಲಿ ಪ್ರಧಾನ ಕಾರ್ಯದರ್ಶಿಗಳು ರಾಯಚೂರು ಪ್ರಸ್ತಾವಿಕ ನುಡಿಗಳನ್ನು ಹಾಗೂ ಶ್ರೀಯುತ ಎಂ ಮಲ್ಲಿಕಾರ್ಜುನ್ ಪ್ರಧಾನ ಕಾರ್ಯದರ್ಶಿಗಳು ವಿಜಯನಗರ ಜಿಲ್ಲೆ ಕಾರ್ಯಕ್ರಮ ನಿರೂಪಿಸಿದರು…
ವರದಿ. ಎಂ, ಮಲ್ಲಿಕಾರ್ಜುನಯ್ಯ ಕೊಟ್ಟೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030