ಕೊಟ್ಟೂರು ಮಹಲ ಮಠದ ಸಂಸ್ತಾನ ಮಠಕ್ಕೆ,ಶ್ರೀ ಕ್ಷೇತ್ರಕ್ಕೆ ಹೂ ತರುವ ಕಾರ್ಯಕ್ಕೆ ಮುಂದಾಗುವೆ:ಶ್ರೀಮ.ನಿ ಸೋಮಶೇರ ಜಗದ್ಗುರುಗಳು…!!!

Listen to this article

ಶ್ರೀ ಪೀಠದ ಪರಂಪರೆಯಂತೆ,
ಕೊಟ್ಟೂರು ಮಹಲ ಮಠದ ಸಂಸ್ತಾನ ಮಠಕ್ಕೆ,ಶ್ರೀ ಕ್ಷೇತ್ರಕ್ಕೆ ಹೂ ತರುವ ಕಾರ್ಯಕ್ಕೆ ಮುಂದಾಗುವೆ:ಶ್ರೀಮ.ನಿ ಸೋಮಶೇರ ಜಗದ್ಗುರುಗಳು.

ಕೊಟ್ಟೂರು.
ಮಹಾಲ ಮಠದ ಲಿಂಗೈಕ್ಯ.ಶ್ರೀ.ಮ.ನಿ.ಜಗದ್ಗುರು ಶಂಕರ ಮಹಾಸ್ವಾಮಿಗಳು, ನಮ್ಮ ಪಟ್ಟಾಧಿಕಾರದ ಗುರುವಾರ್ಯರು ತೋರಿರುವ ಸನ್ಮಾರ್ಗ ಹಾಗೂ ಶ್ರೀ ಪೀಠದ ಪರಂಪರೆಯಂತೆ ಶ್ರೀ ಕ್ಷೇತ್ರಕ್ಕೆ, ಮಠಕ್ಕೆ ಹೂ ತರುವ ಕಾರ್ಯಕ್ಕೆ ಮುಂದಾಗುವೆ ಹೊರತು ಹುಲ್ಲು ತರುವ ಕಾರ್ಯಕ್ಕೆ ಮುಂದಾಗುವುದಿಲ್ಲ
ಎಂದು ಮಹಾಲ ಮಠ ಸಂಸ್ಥಾನ ಮಠದ ನೂತನ ಜಗದ್ಗುರುಗಳು ಶ್ರೀ‌.ಮ.ನಿ ಸೋಮಶೇಖರ ಮಹಾಸ್ವಾಮಿಗಳು ವಾಗ್ದಾನಮಾಡಿದರು.

ಗುರುವಾರ ಪಟ್ಟಣದ ಮಹಾಲ ಮಠದ ಲಿಂಗೈಕ್ಯ.ಶ್ರೀ.ಮ.ನಿ.ಜಗದ್ಗುರುಗಳು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಹಿರಿಯ ಕ್ರಿಯಾ ಮೂರ್ತಿಗಳು ಶಂಕರ ಮಹಾಸ್ವಾಮಿಗಳವರ ಪ್ರಥಮ ವರ್ಷದ ಪುಣ್ಯಾರಾಧನೆಗೆ ಆಗಮಿಸಿ ಈ ವೇಳೆ ಮಹಲ ಮಠದ ಪೀಠಾರೋಣ ಅಲಂಕರಿಸಿ ಆಶಿರ್ವಚನ ನೀಡಿದರು.

ಲಿಂಗೈಕ್ಯ ಶಂಕರ ಮಹಾಸ್ವಾಮಿಗಳು ಆಸ್ತಿ,ಪಾಸ್ತಿಗೆ ಆಪೇಕ್ಷಿಸಿದವರಲ್ಲ,ಬೋಳೆ ಶಂಕರನಂತಿದ್ದವರು ,ತಮ್ಮ 98 ವರ್ಷದ ಜೀವಿತಾವದಿಯೊಳಗೆ ಎಂದು ಜಗದ್ಗುರುಗಳೆಂದು ಬೀಗಿದವರಲ್ಲ,ಅವರಂತೆ ನಾವು ಕೂಡಾ ಇಲ್ಲಿನ ಗುರುಗಳು ಕ್ರಿಯಾಮೂರ್ತಿಗಳು ಕೊಟ್ಟೂರು ದೇವರು ಶಿವಪ್ರಕಾಶ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದುಕೊಳ್ಳುವುದಾಗಿ ತಿಳಿಸಿದರು.

ಎಂಎಂಜೆ ಹರ್ಷವರ್ದನ ಅವರು ಮಹಾಲ ಮಠದ ಸಮಸ್ತ ದೈವದವರು ಹಾಗೂ ಕಟ್ಟಿ ಮನಿ ದೈವದವರು ಅವರಂತೆ ತಮಗೂ ಸಹಕಾರ ನೀಡಿ, ಇಲ್ಲಿನ ಎಲ್ಲಾ ಕಾರ್ಯಗಳಲ್ಲಿ ನಾವು ಚಾಚು ತಪ್ಪದೆ ಪಾಲ್ಗೊಳ್ಳುವೆವು ಎಂದು ಆಶಿರ್ವಜನ ನೀಡಿದರು.

ಈ ವೇಳೆ ಉಜ್ಜಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಎಂಎಂಜೆ ಹರ್ಷವರ್ದನ,ನಂದಿಪುರದ ಮಹೇಶ್ವರ ಸ್ವಾಮಿಗಳು ಕ್ರಿಯಾ ಮೂರ್ತಿಗಳು ಕೊಟ್ಟೂರು ದೇವರು ಶಿವಪ್ರಕಾಶ ಸ್ವಾಮಿಗಳು ಸೇರಿದಂತೆ ಇತರರು ಮಾತನಾಡಿದರು.

ಈ ವೇಳೆ ನೀಲುಗುಂದದ ಶಿವಾಚಾರ್ಯರು,ಬೆಣ್ಣಿಹಳ್ಳಿ ಸ್ವಾಮಿಗಳು,ಗದ್ದಿಕೇರಿ ಸ್ವಾಮಿಗಳು,ಕಾರಿಕಟ್ಟಿಯ ಶಿವಾಚಾರ್ಯರು ಸೇರಿದಂತೆ ಮಹಲ ಮಠದ ಸಮಸ್ತ ದೈವಸ್ಥರು ಹಾಗೂ ಕಟ್ಟಿಮನಿ ದೈವದವರು ಹಾಜರಿದ್ದರು…

ವರದಿ. ವಿನಾಯಕ ಕೊಟ್ಟೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend