ಕೇಂದ್ರದ ಕ್ಯಾಭಿನೇಟನಲ್ಲಿ 22 ಮಂದಿ ಬ್ರಾಹ್ಮಣ ಮಂತ್ರಿಗಳಿದ್ದಾರೆ 84 ಲಕ್ಷ ಬಹುಸಂಖ್ಯಾತರಾದ ಪಂಚಮಸಾಲಿಗಳಲ್ಲಿ ಒಬ್ಬ ಸದಸ್ಯರಿಲ್ಲ ಪಂಚಮಸಾಲಿಗಳ ದುರ್ದೈವ : ಸೋಮನಗೌಡ ಪಾಟೀಲ್ ವಿಷಾಧ…!!!

Listen to this article

ಕೇಂದ್ರದ ಕ್ಯಾಭಿನೇಟನಲ್ಲಿ 22 ಮಂದಿ ಬ್ರಾಹ್ಮಣ ಮಂತ್ರಿಗಳಿದ್ದಾರೆ 84 ಲಕ್ಷ ಬಹುಸಂಖ್ಯಾತರಾದ ಪಂಚಮಸಾಲಿಗಳಲ್ಲಿ ಒಬ್ಬ ಸದಸ್ಯರಿಲ್ಲ ಪಂಚಮಸಾಲಿಗಳ ದುರ್ದೈವ : ಸೋಮನಗೌಡ ಪಾಟೀಲ್ ವಿಷಾಧ.

ಕೊಟ್ಟೂರು.

ನರೇಂದ್ರ ಮೋದೀಜಿಯವರ ಆಡಳಿತದಿಂದ ದೇಶದ ಬದಲಾಣೆ ಕಲ್ಪನೆಯಲ್ಲಿ ನಾವಿದ್ದೇವೆ ಆದರೆ ದೇಶದ ಕ್ಯಾಭಿನೇಟ್ ನಲ್ಲಿ 22 ಮಂದಿ ಬ್ರಾಹ್ಮಣ ಮಂತ್ರಿಗಳಿದ್ದಾರೆ 84 ಲಕ್ಷ ಬಹುಸಂಖ್ಯಾತರಾದ ಪಂಚಮಸಾಲಿಗಳಲ್ಲಿ ಒಬ್ಬರೇ ಒಬ್ಬ ಸದಸ್ಯರು ಕ್ಯಾಭಿನೇಟಿನಲಿಲ್ಲ ಇದು ಪಂಚಮಸಾಲಿಗಳ ದುರ್ದೈವ ಎಂದು ಪಂ.ಸಾ.ಸಮಾಜದ ರಾಜ್ಯಾಧ್ಯಕ್ಷರು ಸೋಮನಗೌಡ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕು ಘಟಕ ಹಾಗೂ ವೀ.ಪ.ಸ.ಸಂಘ ಕೊಟ್ಟೂರು ಇವರ ಸಹಯೋಗದಲ್ಲಿ ಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಾಮಾಜಿಯ ವೃತ್ತ ನಾಮಕರಣ ಹಾಗೂ ವದು-ವರರಾನ್ವೇಷಣೆ ಕೇಂದ್ರ ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದರು.

ದಾರವಾಡ ಲೋಕಸಭಾ ಕ್ಷೇತ್ರದಲ್ಲಿ 3.50 ಲಕ್ಷ ಮತದಾರರು ಪಂಚಮಸಾಲಿಗಳಿದ್ದಾರೆ,ಒಂದು ಬಾರಿಯೂ ಲೋಕಸಭಾ ಸದಸ್ಯರಾಗಿಲ್ಲ,ಆದರೆ ಕೇವಲ ಶೇ.2 ರಷ್ಟಿರುವ ಬ್ರಾಹ್ಮಣರು 3 ಬಾರಿ ಆಯ್ಕೆಯಾಗಿ ಕೇಂದ್ರ ಮಂತ್ರಿಗಳಾಗಿದ್ದಾರೆ,ಈ ಬಗ್ಗೆ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಒಂದು ಕಡೆ ವಿಜೇಂದ್ರನ ಎತ್ತಕಟ್ಟೊದು,ಇನ್ನೊಂದು ಕಡೆ ಯತ್ನಾಳವರನ್ನು ಎತ್ತಕಟ್ಟುವ ಮೂಲಕ ಸಮಾಜದೊಂದಿಗೆ ಕೆಲವರು ಹೊಡೆದಾಳುವ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಈ ಬಗ್ಗೆ ಪಂಚಮಸಾಲಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಡಿ-14 ರಂದು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಸಾಮಾನ್ಯ ಸಭೆಯಲ್ಲಿ 2 ವರ್ಷದೊಳಗೆ 1 ಲಕ್ಷ ಪ.ಸಾ ಸದಸ್ಯತ್ವ,ಪೀಠದಲ್ಲಿ ನಿತ್ಯ ದಾಸೋಹ ಮತ್ತು ರಾಜ್ಯಾದ್ಯಾಕ್ಷ ಸ್ಥಾನದಿಂದ ಇಳುಯುವ ಒಳಗೆ 25 ಮಂದಿ ಶಾಸಕರನ್ನು ಪಂಚಮಸಾಲಿ ಸಮಾಜದಿಂದ ನೇಮಕಮಾಡಿಕಳಿಸುವ ಜವಾಬ್ದಾರಿ ಹಾಗೂ 18-25 ವರ್ಷದ ಪಂಚಮಸಾಲಿ ಹುಡುಗರ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೊಡಿಸುವಂತಹ ಪ್ರಮುಖ 4 ನಿರ್ಧಾರಗಳನ್ನು ಕೈಗೊಳ್ಳುವೆ ಎಂದರು.

ಕೊಟ್ಟೂರು ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚೆನ್ನಾಮಾಜಿ ವೃತ್ತ ನಾಮಕರಣಕ್ಕೆ ಸಹಕರಿಸಿದ ಪಪಂ ಅಧ್ಯಕ್ಷರು ಬದ್ದಿ ರೇಖಾ ರಮೇಶ,ಪಪಂ ಉಪಾಧ್ಯಕ್ಷ ಸಿದ್ದಯ್ಯ ಹಾಗೂ ಸರ್ವಸದಸ್ಯರಿಗೂ ,ಮುಖ್ಯಾಧಿಕಾರಿಗಳಿಗೂ,ಡಿಎಸ್ಎಸ್ ಮುಖಂಡರು ಬದ್ದಿ ಮರಿಸ್ವಾಮಿ ಅವರಿಗರ ಅಭಿನಂದನೆ ತಿಳಿಸಿದರು.

ಪಂಚಮಸಾಲಿ ವಿಜಯನಗರ ಜಿಲ್ಲಾಧ್ಯಕ್ಷರು ಪ್ರಕಾಶ ಪಾಟೀಲ್ ಪ್ರಾಸ್ತಾವಿಕ ನುಡಿಗಳಾಡಿದರು,ಪಂ.ತಾ.ಅಧ್ಯಕ್ಷರು ಚಾಪಿ ಚಂದ್ರಪ್ಪ, ಡಿ.ಎಸ್.ಎಸ್ ಮುಖಂಡರು ಬದ್ದಿ ಮರಿಸ್ವಾಮಿ,ವೀ.ಪ.ಸ.ಸಂಘದ ಅಧ್ಯಕ್ಷರು ಕೆ. ವಿವೇಕನಂದ, ನಿವೃತ್ತ ಪ್ರೋಪೇಸರ್ ಮಹಾಭಲೇಶ್ವರಪ್ಪ,ವೀ.ಪ.ಸ.ಸಂಘದ ಉಪಾದ್ಯಕ್ಷರು ಗಾಯಿತ್ರಿ ಅಶೋಕ,ಪಪಂ ಸದಸ್ಯರು ವೀಣಾವಿವೇಕನಂದ ಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ,ಪಪಂ ನ ನಾಮನಿರ್ದೇಶಿತ ಸಮಾಜ ಬಾಂದವರನ್ನ,ಸ.ನೌ.ಸಂ ಚುನಾಯಿತ ಪ್ರತಿನಿಧಿಗಳನ್ನ ಹಾಗೂ ಸಮಾಜದ ಸಾದಕರನ್ನ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪಂ.ಸ.ತಾ.ಕಾರ್ಯದರ್ಶಿ ಹಳ್ಳಿ ಅಶೋಕ ,ಬಸಾಪುರ ಪಂಪಾಪತಿ ಮಹಾದೇವ ಇಟ್ರನ್ಯಾಷನಲ್ ಸ್ಕೂಲ್ ವ್ಯವಸ್ಥಾಪಕರು,ಪಪಂ ಸದಸ್ಯರಾದ ಕೆಂಗರಾಜ್,ವಿದ್ಯಾಶ್ರೀ ಮೇಘರಾಜ್, ಡಾ.ರಾಕೇಶ್,ನಿಂಬಳಗೇರಿ ಕಲ್ಲೇಶಪ್ಪ, ಮುಕೇಶ್ ವಿ ಟಿ .ಕಂದಗಲ್ಲು ನೀಲಕಂಠಪ್ಪ ಸೇರಿದಂತೆ ನೂರಾರು ಸಮಾಜದ ಮುಖಂಡರು ಹಾಜರಿದ್ದರು…

ವರದಿ, ವಿನಾಯಕ ಕೊಟ್ಟೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend