ಸಂಭ್ರಮದ ದಿಂಡಿ ಉತ್ಸವ ಮೆರವಣಿಗೆ
ಭಾವ ಸಾರಕ್ಷತ್ರೀಯ ಸಮಾಜದ ವಾರ್ಷಿಕ ಉತ್ಸವ ಶ್ರೀ ರುಕ್ಮಿಣಿ ಪಾಂಡುರಂಗ ದೇವರ 32 ನೇ ದಿಂಡೆ ಉತ್ಸವ ಭಕ್ತ ಸಡಗರ ಸಂಭ್ರಮಗಳೊಂದಿಗೆ ಇಲ್ಲಿನ ಪಾಂಡುರಂಗ ದೇವಸ್ಥಾನದಲ್ಲಿ 3 ದಿನಗಳ ಕಾಲ ನಡೆಯಿತು .
ಕೊನೆಯ ದಿನದ ದಿಂಡೆ ಉತ್ಸವದಲ್ಲಿ ಪಂಡರಾಪುರದ ಗುರುಗಳಾದ ತುಕರಾಮ್ ಪವರ್ ಗುರುಜಿಯಿಂ ದ ಕೀರ್ತನೆ ನಡೆದರೆ ಕೃಷ್ಣಮೂರ್ತಿ ಬಾಂಗಳಿ ಇವರಿಂದ ಪ್ರವಚನ ಮತ್ತು ಗೋಂದಲೇ ಸಮಾಜದ ಹುಬ್ಬಳಿ ಬಂಧವರಿಂದ ಮತ್ತು ಕಿರಣ್ ಕುಮಾರ್ ಗುರೂಜಿ ಸಂಘಟಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು .
ನಂತರ ಪಟ್ಟಣದ ಬೀದಿ ಗುಂಟ ಮೆರವಣಿಗೆ ನಡೆಯಿತು ಮೆರವಣಿಗೆಯಲ್ಲಿ ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಸವಣೂರು, ಹಾವೇರಿ, ಹರಪನಹಳ್ಳಿ, ಕೂಡ್ಲಿಗಿ ಗಳಿಂದ ನೂರಾರು ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಂಡಿದರು.
ಕೊಟ್ಟೂರು ತಾಲೂಕು ಕ್ಷತ್ರೀಯ ಸಮಾಜ ಅಧ್ಯಕ್ಷ ಪಿ.ಸೆ ಪ್ರಭುದೇವ್ , ಹವಳಿ ಕೊಟ್ರೇಶ್, ಡೋಂಗ್ರಿ ವಿಜಯಕುಮಾರ್ , ಲೋಕರೆ ವಾಸುದೇವ್ ರಾವ್ , ಸುಲಕೆ ಸುರೇಶ್ ರಾವ್, ಲೋಕರೆ ರಮೇಶ್ ರಾವ್ , ಮತ್ತಿತರರು ದಿಂಡೆ ಉತ್ಸವದ ನೇತೃತ್ವ ವಹಿಸಿದರು…
ವರದಿ. ವಿನಾಯಕ ಕೊಟ್ಟೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030