ಕೊಟ್ಟೂರು:- ಪಟ್ಟಣದ ರೈಲ್ವೆ ನಿಲ್ದಾಣ ಹಾಗೂ ಜೋಳದ ಕೂಡ್ಲಿಗಿ ರಸ್ತೆಯ ಮರೂರು ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ಕೂಗಾಡುತ್ತಿದ್ದ ಇಬ್ಬರ ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಪಿಎಸ್ ಐ, ಗೀತಾಂಜಲಿ ಶಿಂಧೆ ರವರು ಪ್ರಕರಣ ದಾಖಲಿಸಿದ್ದಾರೆ.
24-25 ವರ್ಷ ವಯಸ್ಸಿನ ಯುವಕರು ಗಾಂಜಾ ಸೇವನೆ ಮಾಡಿ ನಶೆಯಲ್ಲಿ ಕೂಗಾಡುತ್ತ ಸಾರ್ವಜನಿಕರೊಂದಿಗೆ ವಿನಃ ಕಾರಣ ಜಗಳ ಮಾಡುತ್ತಿರುವ ಬಗ್ಗೆ ಮಾಹಿತಿದಾರರ ದೂರವಾಣಿ ಮೂಲಕ ಖಚಿತ ಮಾಹಿತಿ ಬಂದ ಮೇರೆಗೆ ಇಲಾಖಾ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಸ್ಥಳಕ್ಕೆ ಪಿಎಸ್ ಐ, ಗೀತಾಂಜಲಿ ಶಿಂಧೆ, ಕೊಟ್ರುಗೌಡ,ಗುರುಬಸವರಾಜ್, ಪೊಲೀಸರು ಹೋಗಿ ಖಚಿತ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿಗಳಾದ ರಂಗಸ್ವಾಮಿ(20) ಗೌರಮ್ಮ ಐಟಿಐ ಕಾಲೇಜು ವಾಸ ಮತ್ತು ಭಾಷಾ(24) ಮುದುಕನಕಟ್ಟಿ ವಾಸ ಎಂಬುವವರ ವಿರುದ್ಧ ಕಲಂ:27(B) ಎನ್ ಡಿ ಪಿ ಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಕೋಟ್..
ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಹಾಗೂ ಸೇವಿಸುವುದು ಕಾನೂನು ರೀತಿಯಲ್ಲಿ ದೊಡ್ಡ ಅಪರಾಧವಾಗಿದ್ದು ಇದಕ್ಕೆ ಯುವಕರು ಹಾಗೂ ವ್ಯಸನಿಗಳು ಮಾರಿ ಹೋಗದೆ ಇರುವುದು ಉತ್ತಮ ನನ್ನ ಲಿಮಿಟ್ಸ್ ಒಳಗಡೆ ಏನಾದರು ಇಂತಹ ಘಟನೆಗಳು ಕಂಡು ಬಂದರೆ ನಿರ್ಧಾಕ್ಷಣವಾಗಿ ಕಾನೂನು ಕ್ರಮ ಜರಗಿಸಲಾಗುವುದು.
ಗೀತಾಂಜಲಿ ಶಿಂಧೆ
ಪೊಲೀಸ್ ಸಬ್ ಇನ್ಸ್ಪೆಕ್ಟರ್
ಪೊಲೀಸ್ ಠಾಣೆ – ಕೊಟ್ಟೂರು….
ವರದಿ, ವಿನಾಯಕ ಕೊಟ್ಟೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030