ಅಕಾಲಿಕ ಮಳೆಗೆ 3 ಎಕರೆ ಪಪಾಯಿ ತೋಟಗಾರಿಕೆ ಬೆಳೆ ಸಂಪೂರ್ಣ ನಾಶ, ಬಿಕ್ಕಿಬಿಕ್ಕಿ ಅಳುತ್ತಾ ಕಣ್ಣೀರ ಹಾಕಿದ ರೈತ…!!!

Listen to this article

ಅಕಾಲಿಕ ಮಳೆಗೆ 3 ಎಕರೆ ಪಪಾಯಿ ತೋಟಗಾರಿಕೆ ಬೆಳೆ ಸಂಪೂರ್ಣ ನಾಶ, ಬಿಕ್ಕಿಬಿಕ್ಕಿ ಅಳುತ್ತಾ ಕಣ್ಣೀರ ಹಾಕಿದ ರೈತ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16ರಂದು ಬುಧವಾರ ಸಾಯಂಕಾಲ 5.45ರ ಸಮಯದಲ್ಲಿ ಗುಡುಗು ಮಿಂಚು ಬಿರುಗಾಳಿ ಸೇರಿ,ಸುರಿದ ಭಾರಿ ಮಳೆಗೆ ಪಿ.ಯಮನೂರು ಸಾಬ್ ಇವರು 3 ಎಕ್ಕರೆ ಪಪಾಯಿ ತೋಟಗಾರಿಕೆ ಬೆಳೆಯನ್ನು ಬೆಳೆದಿದ್ದು ಈ ರೈತನ ಜಮೀನು , ಕುಪ್ಪನಕೇರಿ ಕಂದಾಯ ಗ್ರಾಮಕ್ಕೆ ಸೇರಿದ್ದು ಸರ್ವೆ ನಂಬರ್ 360 ಆಗಿದ್ದು,

ಈ ಜಮೀನಿನಲ್ಲಿ ಬೆಳೆಯ ಫಲವು ಬಂದಿದ್ದು ಕೈ ಸೇರುವ ಹಂತದಲ್ಲೇ ಪ್ರಕೃತಿಯ ವಿಕೋಪಕ್ಕೆ ನಾಶ ಆಗಿರುವುದಕ್ಕೆ ಯಮನೂರು ಸಾಬ್ ರೈತನು ತಾನು ಬೆಳೆದ ಫಲಕ್ಕೆ ಸರಿಸುಮಾರು 4 ರಿಂದ 5ಲಕ್ಷ ಕ್ಕೂ ಹೆಚ್ಚಾಗಿ ಬೆಳೆಗೆ ಖರ್ಚು ಮಾಡಿದ್ದೇನೆ ಹಾಗೂ 3 ಎಕ್ಕರೆ ಜಮೀನಲ್ಲಿ ಕನಿಷ್ಠ 2500 ಗಿಡಗಳನ್ನು ನೆಟ್ಟಿದ್ದು ಪ್ರತಿ ಗಿಡದಿಂದ ಕನಿಷ್ಠ 1.50 ಕ್ವಿಂಟಲ್ ನಷ್ಟು ಫಲ ಬಂದಿದ್ದು, ಬುಧುವಾರ ರಂದು ಸುರಿದ ಗಾಳಿ ಮಳೆಗೆ ಸಂಪೂರ್ಣವಾಗಿ 2500 ಪಪಾಯಿ ಗಿಡಗಳು ನೆಲಕುರುಳಿ ಎಲ್ಲಾ ಪಲವು ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎನ್ನುವ ಗಾದೆಯಂತೆ, ಈ ಬಡ ರೈತನ ಕೊರಳಿಗೆ ಪ್ರಕೃತಿಯಿಂದ ಸಂಪೂರ್ಣ ವಾಗಿ ಪಪಾಯಿ ತೋಟವು ನಾಶವಾಗಿರುವುದಕ್ಕೆ ಯಮನೂರ್ ಸಾಬ್ ಹಾಗೂ ಕುಟುಂಬಸ್ಥರು ಹೊಲದಲ್ಲಿ ಬೆಳೆದ ಪಪಾಯ ನೆಲಕ್ರುಳಿರುವ ಗಿಡಗಳನ್ನು ಕಂಡು ಕಣ್ಣೀರು ಇಡುತ್ತಾ ತಮ್ಮ ಹಳಲನ್ನು ನಮ್ಮ ಸುದ್ದಿ ವಾಹಿನಿಯ ಮೂಲಕ ತಿಳಿಸಿರುತ್ತಾರೆ.
ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರದ ವತಿಯಿಂದ ಪ್ರಕೃತಿ ವಿಕೋಪದ ಅಡಿಯಲ್ಲಿ ನಾಶವಾಗಿರುವ ಈ ಪಪ್ಪಾಯಿ ತೋಟಕ್ಕೆ ಸರ್ಕಾರದಿಂದ ಪರಿಹಾರ ಕೊಡುವಂತೆ ತಮ್ಮ ಹಳಲನ್ನು ಹೇಳಿ ಕೊಂಡಿರುತ್ತಾರೆ.
ಹಾಗೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಈಡಿಗರ ಸಂತೋಷ್ ಇವರು ಸಹ ಈ ರೈತರ ಪರಿಸ್ಥಿತಿಯನ್ನು ತಮ್ಮ ಗ್ರಾಮದ ರೈತರ ಕುರಿತು ನಮ್ಮ ಪತ್ರಿಕಾ ವರದಿಗೆ ತಿಳಿಸಿರುತ್ತಾರೆ.
ಈ ವಿಷಯವನ್ನು ತಿಳಿದ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಭೂಮಿಯಲ್ಲಿ ನೀವು ಬೆಳೆದ ಫಲವು ನಷ್ಟ ವಾಗಿರುವ ಕುರಿತು ಮೇಲಿನ ಅಧಿಕಾರಿಗಳಿಗೆ ತರುವುದಾಗಿ ತಿಳಿಸಿದರು, ಹಾಗೆ ಪರಿಶೀಲಿಸಿ ಕಚೇರಿಗೆ ಪರಿಹಾರದ ಅರ್ಜಿ ಸಲ್ಲಿಸುವಂತೆ ತಿಳಿಸಿರುತ್ತಾರೆ,ಹಾಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಹ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪಾಪಯಿ ಗಿಡಗಳು ನೆಲಕ್ಕೆ ಉರುಳಿರುವ ಹಾಗೂ ಮಳೆ ಗಾಳಿಗೆ ನಷ್ಟದ ಕುರಿತು ಬರೆದು ಕೊಂಡು ಹೋಗಿದ್ದಾರೆ, ಎಂದು ಯಮನೂರು ಸಾಬ್ ರೈತನು ತಿಳಿಸಿರುತ್ತಾರೆ,
ಆದರೆ ಅದು ಏನೇ ಇರಲಿ ಮಾನ್ಯ ವಿಜಯನಗರ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಮೀರ್ ಅಹ್ಮದ್ ಖಾನ್ ರವರು ಸಂಬಂಧಪಟ್ಟಂತಹ ಸಚಿವರ ಸಮ್ಮುಖದಲ್ಲಿ ಚರ್ಚಿಸಿ ಹಿಂದುಳಿದ ತಾಲೂಕಿನ ಬಡ ರೈತರ ಕಣ್ಣುರಿಸುವ ಕೆಲಸ ಹಾಕಬೇಕಾಗಿದೆ ಆದ್ದರಿಂದ ರೈತರ ಸಂಕಷ್ಟವನ್ನು ಹರಿತು ಕೂಡ್ಲಿಗಿ ತಾಲೂಕಿನ ಮಾನ್ಯ ಶಾಸಕರಾದ ಎನ್ ಟಿ ಶ್ರೀನಿವಾಸ್ ರವರು ಈ ಪ್ರಕೃತಿ ವಿಕೋಪದಿಂದ ನಾಶವಾಗಿರುವ ಪಪಾಯಿ ಹಣ್ಣಿನ ಗಿಡಗಳ ನಷ್ಟವನ್ನು ಸರ್ಕಾರದೊಂದಿಗೆ ಚರ್ಚಿಸಿ ಈ ಬಡ ರೈತರಿಗೆ ಪರಿಹಾರ ಸಿಗಲಿ ಎನ್ನುವುದು ರೈತರ ಬೇಡಿಕೆಯಾಗಿದೆ…

ವರದಿ :- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend