ವಿಜಯನಗರ ಜಿಲ್ಲೆಯಲ್ಲಿ ಪ್ರತ್ಯೇಕ ಒಕ್ಕೂಟ ಸ್ಥಾಪನೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಕರೆ…!!!

Listen to this article

ಇತ್ತೀಚಿನ ದಿನಗಳಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟ ದಲ್ಲಿ ಬಳ್ಳಾರಿಯಲ್ಲಿ ಆಡಳಿತ ಕಚೇರಿ ಮತ್ತು ಡೈರಿ ಇದ್ದು ಸುಮಾರು 40 ವರ್ಷಗಳಿಂದ ಅಲ್ಲಿನ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕೇವಲ ಅಧಿಕಾರಕ್ಕಾಗಿ ಹಂಬಲಿಸುತ್ತ ಅಭಿವೃದ್ಧಿ ಕಡೆಗೆ ಗಮನ ಕೊಡದೆ ಮತ್ತು ಒಕ್ಕೂಟದ ಬೆಳವಣಿಗೆಗೆ ಯಾವುದೇ ರೀತಿಯ ಸಹಕಾರ ನೀಡದೆ ಇರುವುದರಿಂದ ವಿಜಯನಗರ ಜಿಲ್ಲೆಯ ಹಾಲು ಉತ್ಪಾದಕರು ಬೇಸತ್ತು ಪ್ರತ್ಯೇಕ ಒಕ್ಕೂಟ ರಚನೆಗೆ ಒತ್ತಾಯಿಸುತ್ತಿದ್ದಾರೆ ಒಕ್ಕೂಟದ ಆಡಳಿತ ಕಚೇರಿ ಬಳ್ಳಾರಿಯಲ್ಲಿದ್ದು ಆಡಳಿತ ಮಂಡಳಿಯವರಿಗೆ ಆಡಳಿತವನ್ನು ನಡೆಸಲು ಕೂಡ ಸಹಕಾರ ನೀಡದೆ ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದು ಮುತ್ತು ಅನೇಕ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವುದು ಮನಗಂಡು ವಿಜಯನಗರ ಜಿಲ್ಲೆಯಲ್ಲಿ ಸುಮಾರು ಒಂದು ದಿನಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ಲೀಟರ್ ಹಾಲನ್ನು ಕಳುಹಿಸುತ್ತಿದ್ದು ಬಳ್ಳಾರಿಯಲಿ ಕೇವಲ ಒಂಬತ್ತು ಸಾವಿರ ಲೀಟರ್ ಮಾತ್ರ ಹಾಲು ಉತ್ಪಾದನೆ ಆಗುತ್ತಿದ್ದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಿಂದ ಬಳ್ಳಾರಿಗೆ 210 ಕಿಲೋಮೀಟರ್ ದೂರ ಹಾಲನ್ನು ಸರಬರಾಜು ಮಾಡುತ್ತಿದ್ದು ಮತ್ತು ಕೂಡ್ಲಿಗಿ ತಾಲೂಕಿನಿಂದ ಸುಮಾರು ಕೊನೆಯ ಹಳ್ಳಿಯಿಂದ 200 ಕಿಲೋ ಮೀಟರ್ ಕೊಪ್ಪಳ ಜಿಲ್ಲೆಯ ಕೊನೆಯ ಗ್ರಾಮದಿಂದ 210 ಕಿಲೋಮೀಟರ್ ಇರುತ್ತದೆ ಕಳೆದ 40 ವರ್ಷಗಳಿಂದ ಒಕ್ಕೂಟದ ಕೇಂದ್ರ ಸ್ಥಾನ ಬಳ್ಳಾರಿ ಇದ್ದು ಬಳ್ಳಾರಿ ಜಿಲ್ಲೆಯ ನಾಲ್ಕು ಜನ ಅಧ್ಯಕ್ಷರಾಗಿ ಸುಮಾರು 25 ವರ್ಷಗಳು ಅಧಿಕಾರ ಹೊಂದಿದ್ದರು ಸಹ ಜನಪ್ರತಿನಿಧಿಗಳು ಕೇವಲ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಮಾಡಿರುವುದಿಲ್ಲ ಇದರಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಒಕ್ಕೂಟದ ಒಟ್ಟು 828 ಸಂಘಗಳ ಪೈಕಿ ಕೇವಲ 69 ಸಂಘಗಳು ಮಾತ್ರ ಬಳ್ಳಾರಿ ಜಿಲ್ಲೆಯಲ್ಲಿ ಇದ್ದು ಮತ್ತು ಒಕ್ಕೂಟದ ಒಟ್ಟು ಹಾಲು ಶೇಖರಣೆ 2,25,000 ಲೀಟರ್ ಪೈಕಿ ಕೊಪ್ಪಳ ಜಿಲ್ಲೆಯಿಂದ 70,000 ವಿಜಯನಗರ ಜಿಲ್ಲೆಯಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಸರಬರಾಜ ಆಗುತ್ತಿದ್ದು ಈ ಹಾಲನ್ನು ಬಳ್ಳಾರಿಗೆ ಸಾಗಾಣಿಕೆ ಮಾಡುತ್ತಿದ್ದು ಇದಕ್ಕೆ ವರ್ಷಕ್ಕೆ ಕೋಟ್ಯಂತರ ರೂಪಾಯಿಗಳು ಸಾಗಾಣಿಕೆಗೆ ವೆಚ್ಚವಾಗುತ್ತಿದೆ ಇದರಿಂದಾಗಿ ಒಕ್ಕೂಟ ಅಧಿಕ ನಷ್ಟ ಉಂಟಾಗಲು ಕಾರಣವಾಗುತ್ತದೆ ಇಷ್ಟು ಇದ್ದರೂ ಸಹ ಒಕ್ಕೂಟದ ಸಂಪೂರ್ಣ ಅಧಿಕಾರ ಬಳ್ಳಾರಿ ಜಿಲ್ಲೆಯವರಿಗೆ ಇರಬೇಕು ಉಳಿದ ಮೂರು ಜಿಲ್ಲೆಗಳಲ್ಲಿ ಯಾರಾದರೂ ಅಧ್ಯಕ್ಷರಾದರೆ ಉತ್ತಮ ಆಡಳಿತ ಮಾಡಲು ಬಿಡದೆ ದೌರ್ಜನ್ಯ ಕಿರಿಕಿರಿ ಉಂಟು ಮಾಡಿ ಬೇಸತ್ತು ಅಧಿಕಾರ ತ್ಯಜಿಸಿ ಬಳ್ಳಾರಿಗೆ ಬರದಂತೆ ಮಾಡಲು ಹುನ್ನಾರ ಮಾಡುತ್ತಿದ್ದಾರೆ ಇದರಿಂದಾಗಿ ಕಳೆದ ಒಂದು ವರ್ಷದಿಂದ ಒಕ್ಕೂಟದ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿರುತ್ತದೆ ಬಳ್ಳಾರಿ ಹಾಲು ಒಕ್ಕೂಟದ ಪ್ರಾರಂಭವಾಗಿ ಸುಮಾರು 40 ವರ್ಷಗಳಾಗಿದ್ದು 35 ವರ್ಷಗಳಲ್ಲಿ ಆಗದ ಅಭಿವೃದ್ಧಿಯು ಕಳೆದ ಐದು ವರ್ಷಗಳಲ್ಲಿ ವಿಜಯನಗರ ಜಿಲ್ಲೆಯ ಶ್ರೀ ಎಲ್ ಬಿ ಪಿ ಭೀಮನಾಯ್ಕ್ ಅಧ್ಯಕ್ಷತೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗಿರುತ್ತದೆ ಕೇವಲ ಐದು ವರ್ಷಗಳಲ್ಲಿ ಭೀಮನಾಯಕ ಅಧ್ಯಕ್ಷರ ಮುಂದಾಳತ್ವದಲ್ಲಿ ಅಭಿವೃದ್ಧಿ ಆಗಿರುವುದನ್ನು ಸಹಿಸದೆ ಭ್ರಷ್ಟಾಚಾರ ತೊಲಗಿಸಿ ಒಕ್ಕೂಟ ಉಳಿಸಿ ಎಂದು ಬಳ್ಳಾರಿಯ ಕೆಲವು ನಾಯಕರ ಕುಮ್ಮಕ್ಕಿನಿಂದ ಹಾಲು ಉತ್ಪಾದಕರಲ್ಲದವರು ಹೋರಾಟ ಮಾಡುತ್ತಿರುವುದು ಹಾಸ್ಯಸ್ಪದವಾಗಿರುತ್ತದೆ ಈ ಹಿಂದಿನ ಆಡಳಿತ ಮಂಡಳಿಯವರು ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಆರು ತಿಂಗಳಷ್ಟು ಕಾಲ ಹಾಲಿನ ಧರವನ್ನು ಕಡಿಮೆ ಮಾಡಿ ಕೇವಲ ಮೂರು ತಿಂಗಳು ಮಾತ್ರ ಬೇಸಿಗೆಯಲ್ಲಿ ಹಾಲಿನ ದರವನ್ನು ಹೆಚ್ಚು ಮಾಡುತ್ತಿದ್ದರು ಪ್ರತಿವರ್ಷ ಹಾಲಿನ ದರವನ್ನು ಕಡಿಮೆ ಮಾಡಿದಾಗ ಯಾವ ರೈತರು ಸಹ ಹೋರಾಟವನ್ನು ಮಾಡಿರುವುದಿಲ್ಲ ಆದರೆ ಈಗ ಐದು ವರ್ಷಗಳ ಕಾಲ ಕೆ ಎಂಎಫ್ ಅಧ್ಯಕ್ಷರು ರಾ/ಬ/ಕೋ/ ಮತ್ತು ವಿಜಯ ನಗರ ಹಾಲು ಒಕ್ಕೂಟದಅಧ್ಯಕ್ಷರು ಆದ ಎಲ್. ಬಿ. ಪಿ. ಭೀಮನಾಯ್ಕ ಅವರ ಅಧ್ಯಕ್ಷತೆಯಲ್ಲಿ ಮತ್ತು ಈಗಿರುವ ಆಡಳಿತ ಮಂಡಳಿ ನೇತೃತ್ವದಲ್ಲಿ ಹಾಲಿನ ದರವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡದೆ ಅದರಲ್ಲೂ 2022 ರಲ್ಲಿ ಒಂದು ರೂಪಾಯಿ ಹಾಲಿನ ದರವನ್ನು ಹೆಚ್ಚು ಮಾಡಿರುತ್ತಾರೆ ರಾಜ್ಯದ ಎಲ್ಲಾ ಹಾಲು ಒಕ್ಕೂಟವು ನಷ್ಟಆ ದಾಗ ಹಾಲಿನ ದರವನ್ನು ಕಡಿಮೆ ಮಾಡುವುದು ವಾಡಿಕೆಯಾಗಿರುತ್ತದೆ ಆರು ವರ್ಷಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಹಾಲಿನ ದರವನ್ನು ಕಡಿಮೆ ಮಾಡಿದ್ದು ರೈತರ ಹಿತ ಕಾಪಾಡುವಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುತ್ತಾರೆ ಆದರೆ ಅಧಿಕಾರದ ಆಸೆಗಾಗಿ ಬಳ್ಳಾರಿಯವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ತೊಂದರೆ ಉಂಟು ಮಾಡುವುದು ಇತ್ತೀಚಿಗೆ ತುಂಬಾ ವಿಜಯನಗರ ಜಿಲ್ಲೆಗೆ ನುಂಗಲಾರದ ತುತ್ತಾಗಿದೆ ಆದ್ದರಿಂದ ಎಲ್ಲಾ ಹಾಲು ಉತ್ಪಾದಕರು ಸೇರಿ ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯಾಗಬೇಕು ಎಂದು ಒತ್ತಾಯಿಸಿ 17 4 2025 ರಂದು ಹೊಸಪೇಟೆಯಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಈ ಹೋರಾಟದಲ್ಲಿ ಅನೇಕ ಸಂಘ ಸಂಸ್ಥೆಗಳು ಮತ್ತು ವಿಜಯನಗರ ಜಿಲ್ಲೆಯ 369 ಸಂಘಗಳಿಂದ ಹಾಲು ಉತ್ಪಾದಕರು ಮತ್ತು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಎಲ್ಲರೂ ಒಗ್ಗೂಡಿ ಪ್ರತ್ಯೇಕ ಒಕ್ಕೂಟ ರಚನೆಗೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಬೇಡವೇ ಬೇಡ ಬಳ್ಳಾರಿಯವರ ಸಹವಾಸ ಎಂದು ಓಕ್ಕೂರಲ್ಲಿನಿಂದ ಎಲ್ಲಾ ಹಾಲು ಉತ್ಪಾದಕರು ಮತ್ತು ವಿವಿಧ ಸಂಘಟನೆಗಳು ಸೇರಿ ಹೋರಾಟಕ್ಕೆ ಚಾಲನೆ ಕೊಟ್ಟಿದ್ದು ಈ ಹೋರಾಟವು ವಿಜಯನಗರ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಈ ದಿನ ಪತ್ರಿಕಾಗೋಷ್ಠಿಯಲ್ಲಿ ಎಂ ಬಸವರಾಜ್ ವಿಜಯನಗರ ಜಿಲ್ಲಾಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿತರಕ್ಷಣ ಸಮಿತಿ ಮತ್ತು ಅಖಿಲ ಕರ್ನಾಟಕ ಜಾಗೃತಿ ಸಂಘದ ಜಿಲ್ಲಾಧ್ಯಕ್ಷರಾದಂತಹ ದಾಸರ ವೆಂಕಟೇಶ್ ಮತ್ತು ಜಿಲ್ಲಾ ಕೋಶಅಧ್ಯಕ್ಷರು ಲಕ್ಷ್ಮಣ ಜಿಲ್ಲಾ ಸಹಕಾರ್ಯದರ್ಶಿ ಸೋಮಪ್ಪ ತಾಲೂಕು ಗೌರವಅಧ್ಯಕ್ಷ ಕಾಲೇಶಪ್ಪ ಮತ್ತು ಪಕ್ಕೀರಪ್ಪ ಮಹಿಳಾ ಅಧ್ಯಕ್ಷರಾದಂತಹ ಉಷಾ ಕಂಪ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೋಣಿಬಸಪ್ಪ ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಉಪಾಧ್ಯಕ್ಷರಾದಂತಹ ಖಾದರ್ ಸಾಹೇಬ್ ಹಾಗೂ ಹೆಚ್ ಮರಳಸಿದ್ದಪ್ಪ ನಿರ್ದೇಶಕರು ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ಇವರು ಮಾತನಾಡಿ ನಾವು ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲು ಹೊರಟಿದ್ದು ಬಳ್ಳಾರಿಯಿಂದ ನಮಗೆ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ ಆದ್ದರಿಂದ ಆಡಳಿತ ನಡೆಸಲು ಕೂಡ ಆಗುತ್ತಿಲ್ಲ ಬಳ್ಳಾರಿಗೆ ಮೀಟಿಂಗ್ ಮಾಡಲು ಹೋದಾಗ ಯಾವಾಗ ಹೋದರು ಕೂಡ ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದು ದೌರ್ಜನ್ಯಮಾಡುವ ಮೂಲಕ ಬಳ್ಳಾರಿಯಲಿ ಮೀಟಿಂಗ್ ಮಾಡಲು ಸಹವಾಸವೇ ಬೇಡ ಎಂದು ನಮಗೆ ಅನಿಸುತ್ತಿದೆ ಎಂದು ಹೇಳಿದರು ಈಗಾಗಲೇ ಅನೇಕ ರೀತಿಯಲ್ಲಿ ಕೋರ್ಟಿಗೆ ಅಲೆದಾಡಿಸುತ್ತಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲಶ್ರೀ ಭೀಮನಾಯಕ ಅವರ ಅಧ್ಯಕ್ಷರಾದಂತಹ ಸಂದರ್ಭದಲ್ಲಿ ಅನೇಕ ಜನಪರ ಕಾಳಜಿಯನ್ನು ಹೊಂದಿರುವ ಒಕ್ಕೂಟದ ಅಭಿವೃದ್ಧಿಗಾಗಿ ಶ್ರಮಿಸಿ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಬಳ್ಳಾರಿಯ ಸಹವಾಸವೇ ಬೇಡ ಎಂದು ಈಗ ನಮಗೆ ಅನಿಸುತ್ತಿದ್ದು ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟದ ರಚನೆ ಮಾಡಲು ನಮಗೂ ಕೂಡ ಒಳ್ಳೆಯ ವಿಚಾರ ಎಂದು ಅನಿಸುತ್ತಿದ್ದು ಬಳ್ಳಾರಿಗೆ ಹಾಲು ಸರಬರಾಜು ಮಾಡಲು ಆಗುವ ದೂರ ನೋಡಿದರೆ ಇದರಿಂದ ಸಾಗಾಣಿಕೆ ವೆಚ್ಚ ಅತಿ ಹೆಚ್ಚು ಆಗುತ್ತಿದ್ದು ಒಕ್ಕೂಟ ನಷ್ಟವಾಗಲು ಇದು ಒಂದು ಕಾರಣ ಎಂದು ಹೇಳಿದರು ಆದ್ದರಿಂದ ಎಲ್ಲದಕ್ಕೂ ಸೆಂಟ್ರ ಪಾಯಿಂಟ್ ಆಗಿರುವಂತಹ ವಿಜಯನಗರ ಜಿಲ್ಲೆಯಲ್ಲಿ ಒಕ್ಕೂಟ ಸ್ಥಾಪನೆ ಯಾದರೆ ಹಾಲಿನ ದರವನ್ನು ಇನ್ನೂ ಹೆಚ್ಚು ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ನಾವು ಎಲ್ಲಾ ರೀತಿಯ ಸಹಕಾರ ಕೊಡುವದಾಗಿ ತಿಳಿಸಿದರು ದಿನಾಂಕ 17ನೇ ತಾರೀಖಿನಂದು ಸುಮಾರು 5000ಕ್ಕೂ ಹೆಚ್ಚು ಹಾಲು ಉತ್ಪಾದಕರು ಪ್ರತ್ಯೇಕ ಒಕ್ಕೂಟ ರಚನೆಗೆ ಬೀದಿಗೆ ಇಳಿದಿದ್ದು ಜಿಲ್ಲಾಧಿಕಾರಿಗಳ ಮುಖಾಂತರ ಹೊಸಪೇಟೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಅಧ್ಯಕ್ಷರ ಸಲಹೆ ಮೇರೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒಕ್ಕೂಟವನ್ನು ಪ್ರತ್ಯೇಕ ಮಾಡಿ ಎಂದು ನಾವು ಕೂಡ ಕಾನೂನಾತ್ಮಕವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂದು ತೀರ್ಮಾನಿಸುತ್ತೇವೆ ಎಂದು ಹೇಳಿದರು…

ವರದಿ. ಎಂ, ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend