ಬಂಡೆ ಬಸಾಪುರ ತಾಂಡದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಬಾಲಕ ಸಾವು…!!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂಡೆ ಬಸಾಪುರ ತಾಂಡದಲ್ಲಿ ಗುರುವಾರ ಸಂಜೆ 6.15 ಕ್ಕೆ ಮಳೆ ಪ್ರಾರಂಭವಾಗಿದ್ದು ಆ ಸಂದರ್ಭದಲ್ಲಿ ಚೌಡ ನಾಯ್ಕ್ ಇವರ ಮಗನಾದ ಪಾಂಡು ನಾಯ್ಕನು ತಮ್ಮ ಮನೆಯ ಮೇಲೆ ಒಣಗಿ ಹಾಕಿದ್ದ ಬೆಡ್ ಶೀಟ್ ನ್ನು ಮಳೆಯ ಬರುವ ಸಂದರ್ಭದಲ್ಲಿ ತೆಗೆದುಕೊಂಡು ಮನೆಯ ಒಳಗೆ ಬರುವ ಸಂದರ್ಭದಲ್ಲಿ ಒಮ್ಮೆಲೆ ಮನೆಯ ಮುಂದೆ ಸಿಡಿಲು ಬಡಿದು ಆತನು ಕುಸಿದು ಬಿಡುತ್ತಾನೆ, ನಂತರ ನಾವೆಲ್ಲರೂ ಓಡಿ ಹೋಗಿ ಕುಸಿದು ಬಿದ್ದಿರುವ ಪಾಂಡು ನಾಯ್ಕ್ ನನ್ನು ಕೂಡಲೇ ನಾವು ಆತನಿಗೆ ಮಾತನಾಡಿಸಿದರು ಪಾಂಡು ನಾಯ್ಕ್ ನು ಮಾತನಾಡಲಿಲ್ಲ ಆತನಿಗೆ ಏನಾಗಿದೆ ಎನ್ನುವುದ ನೋಡಲಾಗಿ ಆತನ ಎಡ ಭಾಗದ ಹಣೆಗೆ ಸಣ್ಣ ಗಾಯವಾಗಿರುವುದು ಕಂಡು ಬಂದಿದ್ದು ಹಾಗೂ ಕೂದಲು ಸುಟ್ಟಂತೆ ಆಗಿದ್ದು ಆತನು ಹಾಕಿಕೊಂಡಿದ್ದ ಶರ್ಟ್ ಬೆನ್ನಿನ ಮೇಲೆ ಸುಟ್ಟಂತೆ ಹಾಗಿರುವುದನ್ನು ಕಂಡು ಭಯಭೀತರಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಆಟೋ ಮುಖಾಂತರ ಕರೆದು ಕೊಂಡು ಬಂದು ಚಿಕಿತ್ಸೆಗೆ ದಾಖಲಾಗಿಸಿದಾಗ ವೈದ್ಯರು ಪರೀಕ್ಷಿಸಿದಾಗ ಪಾಂಡು ನಾಯ್ಕ ಮೃತ ಪಟ್ಟಿರುವುದು ಎಂಬುದಾಗಿ ತಿಳಿಸಿದ ವೈದ್ಯರು ನಂತರ ಚೌಡನಾಯಕ್ ಇವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ಮುಂದಿನ ಕ್ರಮ ಜರುಗಿಸಲು ಕೋರಿರುತ್ತಾರೆ ಚೌಡ ನಾಯಕ್ ಇವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ ಎಂದು ವರದಿಯಾಗಿದೆ…

ವರದಿ ಎಂ ಬಸವರಾಜ್ ಕಕ್ಕುಪ್ಪಿ

Leave a Reply

Your email address will not be published. Required fields are marked *