ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನದಿಂದ ರಾಜೀನಾಮೆ ನೀಡುವಂತೆ , ಮಂಡಲ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಸಂವಿಧಾನದ ಬದಲಿಸುವ ಹೇಳಿಕೆ ಖಂಡಿಸಿ…!!!

Listen to this article

ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನದಿಂದ ರಾಜೀನಾಮೆ ನೀಡುವಂತೆ , ಮಂಡಲ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಸಂವಿಧಾನದ ಬದಲಿಸುವ ಹೇಳಿಕೆ ಖಂಡಿಸಿ..

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಗುರುವಾರ ರಂದು ಬಿಜೆಪಿ ಹತ್ತಾರು ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ರವರು ಮುಸ್ಲಿಂರಿಗಾಗಿ ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಡಿ ಕೆ ಶಿವುಮಾರ್ ಅವರ ಮಾತನ್ನು ಖಂಡಿಸಿ ರಾಜೀನಾಮೆ ನೀಡುವಂತೆ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳ ಕೂಗುವುದರ ಮೂಲಕ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನೆಯ ರ್ಯಾಲಿಯು ಮದಕರಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕಾಂಗ್ರೆಸ್ ಸರ್ಕಾರ ವಿರುದ್ದ ಅನೇಕ ಬಿಜೆಪಿ ಯ ಪ್ರಮುಖ ಮುಖಂಡರು ಮಾತನಾಡುತ್ತಾಡಿದರು .

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರ ಪರವಾಗಿ ಎಲ್ಲಾ ಸಮುದಾಯಗಳ ಪರವಾಗಿ ಎಂದು ಪ್ರಚಾರ ಮಾಡಿ ಕೊಂಡು ಬಂದು ಈಗ ಕೇವಲ ಮುಸ್ಲಿಂ ಸಮುದಾಯದಕ್ಕೆ ಮಾತ್ರ ಓಲೈಕೆಗೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಲು ಮುಂದಾಗಿರುವ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಅವರ ಹೇಳಿಕೆಯನ್ನು ಹಾಗೂ ಅಧಿವೇಶನದ ಸಂದರ್ಭದಲ್ಲಿ 18 ಜನ ಶಾಸಕರನ್ನು ಆರು ತಿಂಗಳ ಅಮಾನತುಗೊಳಿಸಿರುವ ವಿರುದ್ಧ ಬಿಜೆಪಿ ಕಾರ್ಯಕರ್ತರು ಡಿಕೆ ಶಿವಕುಮಾರ್ ಇವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ್ ರೆಡ್ಡಿ ಹಾಗೂ ಕೂಡ್ಲಿಗಿ ತಾಲೂಕು ಮಂಡಲ ಅಧ್ಯಕ್ಷರಾದ ಕಾಮಶೆಟ್ಟಿ ನಾಗರಾಜ್, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗದ ಸೂರ್ಯ ಪಾಪಣ್ಣ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದೀನಾ, ಬಿಜೆಪಿ ಎಸ್ಸಿ ಮೋರ್ಚದ ತಾಲೂಕ ಅಧ್ಯಕ್ಷರಾದ ಎಸ್ ದುರ್ಗೇಶ್, ರವರುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳಿಗಿರುವ ಅನುದಾನದ ಹಣವನ್ನು ಸರ್ಕಾರವು ಬೇರೆ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ ಎಸ್ಟಿ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಮಾತನಾಡುತ್ತಾ, ಡಿಕೆ ಶಿವಕುಮಾರ್ ನೀಡುತ್ತಿರುವಂತಹ ಹೇಳಿಕೆಯನ್ನು ಖಂಡಿಸಿ ಕೂಡಲೇ ಡಿಸಿಎಂ ಸ್ಥಾನದಿಂದ ರಾಜೀನಾಮೆ ನೀಡಬೇಕೆಂದು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ನಾಯಕ, ಮಹಿಳಾ ಮೋರ್ಚ ಮಂಡಲ ಅಧ್ಯಕ್ಷರಾದ ಶಾರದ ಕುಂಬಾರ, ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಗುರಿಕಾರ್ ರಾಘವೇಂದ್ರ, ಸಚಿನ್ ಕುಮಾರ್, ಸಿದ್ದೇಶ್ ಸೋಲ್ದಲ್ಲಿ ರಾಜಣ್ಣ ಎಲ್ ಪವಿತ್ರ ಬಾಯಿ ಲಕ್ಷ್ಮಿ ಬಾಯಿ ಶಿಲ್ಪ ಬಸವರಾಜ್ ನಾಗರತ್ನಮ್ಮ ಖಾನ ಮಡಗು ದುರ್ಗೇಶ್ ಫಕೀರಪ್ಪ ಶಾಂತನಳ್ಳಿ ವೀರಭದ್ರಪ್ಪ ಭರತ್, ವಾಗೇಶ್ ಮೂರ್ತಿ ಅಮ್ಲಾಪುರದ ಸುದರ್ಶನ್ , ಸುರೇಶ್ ಬೋರಣ್ಣ ಹಳ್ಳಿ ಬಸವರಾಜ್ ಇನ್ನು ಅನೇಕ ಮುಖಂಡರುಗಳು ಭಾಗವಹಿಸಿದರು…

ವರದಿ :- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend