ಅಪ್ಪನ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ, ಅಭಿವೃದ್ಧಿಯ ಪರ ತಮ್ಮನ ಜೊತೆ, ಜೋಡು ಎತ್ತುಗಳಂತೆ ಕೆಲಸ ಮಾಡುತ್ತಿರುವ – ತಮ್ಮಣ್ಣ. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರ ಪರವಾಗಿ ಅವರ ಸಹೋದರರಾದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ತಮ್ಮಣ್ಣ ಎನ್. ಟಿ. ಅವರು ದಿ;14 -03-2025 ರಂದು, ಮಾಜಿ ಶಾಸಕರು ಹಾಗೂ ತಮ್ಮ ತಂದೆಯವರಾದ ಎನ್. ಟಿ. ಬೊಮ್ಮಣ್ಣನವರ ಹಾದಿಯಲ್ಲಿ ಮುನ್ನಡೆಯುತ್ತಾ, ತಮ್ಮ ಸಹೋದರರ ಕ್ಷೇತ್ರದ ಅಭಿವೃದ್ಧಿಯ ಪರವಾದ ಕೆಲಸ ಕಾರ್ಯಗಳಿಗೆ ಕೈ ಜೋಡಿಸಿ, ಕ್ಷೇತ್ರದ ಜೋಡು ಎತ್ತುಗಳಂತೆ ಹಗಲು ಇರುಳು ಎನ್ನದೇ ನಿತ್ಯ ಶ್ರಮಿಸುತ್ತಿರುವ ನಿಟ್ಟಿನಲ್ಲಿ, ಬಡವರ ಮೇಲಿನ ಕಾಳಜಿ ಮತ್ತು ಕ್ಷೇತ್ರದ ಜನರ ಮೇಲಿನ ಅಪಾರವಾದ ಅಭಿಮಾನವನ್ನು ನೆನಪಿಸಿಕೊಳ್ಳ ಬೇಕಾಗಿದೆ. ಹೀಗಾಗಿ, ಎಂದಿನಂತೆ ತಮ್ಮಣ್ಣ ಎನ್. ಟಿ. ಅವರು ಕೂಡ್ಲಿಗಿ ಕ್ಷೇತ್ರದಲ್ಲಿ ಕ್ರೀಯಾಶೀಲಾರಾಗುತ್ತಾ, ಅಮ್ಮನಕೆರೆ ಗ್ರಾಮದ ಬಾಪೂಜಿ ಪ್ರೌಢಶಾಲೆಯ ಶಾರದ ಪೂಜೆಯಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡುತ್ತಾ, ಈ ಬಾರಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳು, ಹೆಚ್ಚು ಶ್ರಮ ಪಟ್ಟು ಇರುವ ಸಮಯ ವ್ಯರ್ಥ ಮಾಡದೇ, ಆಸಕ್ತಿ ಮತ್ತು ಶಿಸ್ತಿನಿಂದ ತಮ್ಮ ಪಠ್ಯ ಕ್ರಮವನ್ನು ಅರ್ಥ ಆಗುವಂತೆ ಓದಿ, ಹೆಚ್ಚು ಅಂಕ ಗಳಿಸಿ, ಶಾಲೆಗೆ ಹೆಸರು ತರಬೇಕು. ನಿಮ್ಮ ಭವಿಷ್ಯ ರೂಪಿಸಿಕೊಂಡು, ನಮ್ಮ ಜಿಲ್ಲೆಗೆ ಕೀರ್ತಿ ತರುಬೇಕು ಎಂದೂ ಶುಭ ಹಾರೈಸಿದರು. ಇನ್ನೂ, ತಮ್ಮಯ್ಯನಗುಡ್ಡ ಗ್ರಾಮದ ಮಲಿಯಮ್ಮ ದೇವತೆ ಮತ್ತು ಹುರುಳಿಹಾಳ್ ಗ್ರಾಮದ ಶ್ರೀ ಹೊನ್ನಮ್ಮ ದೇವಿಯ ಜಾತ್ರೆಗಳಲ್ಲಿ ಭಾಗವಹಿಸಿದ, ತಮ್ಮಣ್ಣ ಎನ್. ಟಿ. ಅವರು ತಮ್ಮ ಕ್ಷೇತ್ರದ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿ, ಭಕ್ತಿ – ನಿಷ್ಠೆಯಿಂದ ಪ್ರಾರ್ಥಿಸಿದರು. ಹಾಗೆಯೇ, ಮುಖಂಡರು ಮತ್ತು ಊರಿನ ಹಿರಿಯರ ಯೋಗ ಕ್ಷೇಮವನ್ನು ವಿಚಾರಿಸಿದರು. ಈ ವೇಳೆ, ಮುಖ್ಯ ಶಿಕ್ಷಕರಾದ ಓಬಣ್ಣ, ಬಸೇಟಪ್ಪ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರೇವಣ್ಣ, ಎಪಿಎಂಸಿ ಕೊಟ್ಟೂರು ಉಪಾಧ್ಯಕ್ಷರಾದ ಬಸವೇಶ, ಗ್ರಾಮ ಪಂಚಾಯತಿ ಸದಸ್ಯರಾದ ಕೊಟ್ರೇಶ, ಬೋರಯ್ಯ, ಮುಖಂಡರಾದ ಮಹಾದೇವಪ್ಪ, ಗುಮ್ಮಣ್ಣ, ರಾಜಣ್ಣ, ಟೈಲರ್ ಬಸವರಾಜ, ಮಂಜಣ್ಣ, ಊರಿನ ಹಿರಿಯರು, ಗ್ರಾಮಸ್ಥರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030