ಕ್ಯಾಸನಕೇರಿ ಗೊಲ್ಲರಹಟ್ಟಿ:ಒತ್ತುವರಿದಾರರಿಂದ ಹಲ್ಲೆ, ಹತ್ಯೆಗೆ ವಿಫಲ ಯತ್ನ,ಜೀವ ಬೆಧರಿಕೆ. ರಕ್ಷಣೆ ಕೋರಿದ ಬಾಲಮ್ಮ…!

Listen to this article

ಕ್ಯಾಸನಕೇರಿ ಗೊಲ್ಲರಹಟ್ಟಿ:ಒತ್ತುವರಿದಾರರಿಂದ ಹಲ್ಲೆ, ಹತ್ಯೆಗೆ ವಿಫಲ ಯತ್ನ,ಜೀವ ಬೆಧರಿಕೆ. ರಕ್ಷಣೆ ಕೋರಿದ ಬಾಲಮ್ಮ..

ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಚೌಡಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಕ್ಯಾಸನಕೇರಿ ಗೊಲ್ಲರಹಟ್ಟಿಯ ವಾಸಿ ಬಡ ರೈತ ಕೂಲಿ ಕಾರ್ಮಿಕಳಾದ ಬಾಲಮ್ಮ ಗಂಡ ಈರಪ್ಪ ಎಂಬ ಮಹಿಳೆ. ತನ್ನ ಮನೆಗೆ ಹೊಂದಿಕೊಂಡಿರುವ ತನ್ನದೇ ಖಾಲಿ ಜಾಗವನ್ನು, ಹತ್ತಿರದ ಮನೆಯ ಸಂಬಂಧಿಕರೇ ಆಗಿರುವವರು. ತಾವು ಊರಲ್ಲಿರದ ಸಂದರ್ಭದಲ್ಲಿ ಕಟ್ಟಡದ ಒಂದು ಭಾಗದ ಗೋಡೆಯನ್ನು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಿದ್ದಾರೆ. ಅದನ್ನು ಪ್ರೆಶ್ನಿಸಿ ತನ್ನ ಖಾಲಿ ಜಾಗವನ್ನು ತನಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಕ್ಕಾಗಿ, ಒತ್ತುವರಿದಾರರ ಮನೆಯ ಸದಸ್ಯರು ತನ್ನ ಮೇಲೆ ಏಕಾ ಏಕಿ ಹಲ್ಯೆ ಮಾಡಿದ್ದು. ಅವಾಶ್ಚ್ಯ ಶಬ್ದಗಳಿಂದ ನಿಂಧಿಸಿದ್ದು, ಮತ್ತೊಮ್ಮೆ ತನ್ನ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ. ಮತ್ತು ಅವರು ಮುಂದುವರೆದು ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ಚಕಾರ ಎತ್ತಿದರೆ, ಪ್ರಾಣ ಸಹಿತ ಬಿಡುವುದಿಲ್ಲ ಎಂದು ಒತ್ತುವರಿದಾರ ರ ಮನೆಯವರೆಲ್ಲರು, ತನಗೆ ಪ್ರಾಣ ಬೆಧರಿಕೆ ಹಾಕಿದ್ದಾರೆಂದು. ಒತ್ತುವರಿದಾರರಿಂದ ಹಲ್ಯೆಗೊಳಗಾಗಿರುವ ಹಾಗೂ ದೌರ್ಜನ್ಯಗೊಳಗಾಗಿರುವ, ನೊಂದ ಸಂತ್ರಸ್ತೆ ಬಾಲಮ್ಮಳು ಹೇಳಿಕೆ ನಿಡಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಪ್ರತಿ ವರ್ಷವೂ, ತಾವು ಕುಟುಂಬ ಸಮೇತ ದುಡಿಮೆ ಅರಸಿ ಹೊಟ್ಟೆ ಹೊರೆಯಲು. ಕಾಫಿ ಸೀಮೆ ಹಾಗೂ ಕಬ್ಬು ಕಡಿಯುವ ಕೆಲಸಕ್ಕೆಂದು ಬೇರೆ ಬೇರೆ ಜಿಲ್ಲೆಗಳಿಗೆ ತೆರಳುತ್ತಿದ್ದು. ಅದೇ ರೀತಿ 2024ರಲ್ಲಿ ಗುಳೇ ಹೋದಾಗ, ತಮ್ಮ ಗಮನಕ್ಕೆ ಬಾರದೇ ತನ್ನ ಪಕ್ಕದ ಮನೆಯವರು. ತನ್ನ ಮನೆಗೆ ಹೊಂದಿಕೊಂಡಿರುವ ತನ್ನದೇ ಆದ(ಮೂರು ಅಡಿ) ಖಾಲಿ ಜಾಗವನ್ನು, ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆ. ಅದು ತಾವು ಊರಿಗೆ ಮರಳಿ ಬಂದ ಮೇಲೆ ಖಚಿತವಾಗಿದೆ, ಕೂಡಲೇ ಊರಿನ ಪ್ರಮುಖರನ್ನು ಕರೆಸಿ ತನಗಾದ ಅನ್ಯಾಯ ಸರಿಪಡಿಸಲು ತಾನು ಕೋರಿಕೊಂಡಿದ್ದು. ಅವರೂ ಕೂಡ ಒತ್ತುವರಿದಾರರಿಗೆ ಬುದ್ದಿ ಹೇಳಿ, ಸೂಕ್ತ ಪರಿಹಾರ ನೀಡಿ ಅಥವಾ ಪರ್ಯಾಯ ಮಾರ್ಗ ಕಂಡುಕೊಳ್ಳಲು ಅವರಿಗೆ ಸೂಚಿಸಿದ್ದಾರೆ. ಆದರೆ ಅದ್ಯಾವುದಕ್ಕೂ ಮರ್ಯಾದೆ ಕೊಡದ ಒತ್ತುವರಿದಾರರು, ತನ್ನ ಮೇಲೆ ವಿನಾಕಾರಣ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. ಕೂಡಲೇ ಖಾನಾಹೊಸಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರುದಾಖಲಿಸಲು ತೆರಳಿದ್ದು, ಪೊಲೀಸರು ಹೇಳಿಕೆ ಪಡೆದು ನಮ್ಮ ಗ್ರಾಮದ ಮುಖಂಡರಿಗೆ ಕರೆಸಿ. ಸಮಸ್ಯೆ ಬಗೆಹರಿಸಿ ರಾಜಿ ಮಾಡಿಸಲು ಗ್ರಾಮದ ಮುಖಂಡರಿಗೆ ಜವಾಬ್ದಾರಿ ವಹಿಸಿದರು. ಅಕ್ರಮ ಒತ್ತುವರಿದಾರರು ನಡೆಸಿದ ಹಲ್ಲೆ, ದೌರ್ಜನ್ಯ, ಹತ್ಯೆಗೆ ಯತ್ನದ ದೂರು. ಪ್ರಾಣ ಬೆಧರಿಕೆ ಆರೋಪದ ಹೇಳಿಕೆಯ ದೂರು, ಮತ್ತು ತಮಗೆ ರಕ್ಷಣೆ ಕೋರಿರುವ ಕುರಿತು ಹೇಳಿಕೆ ನೀಡಿರುವ ನಮ್ಮ ದೂರನ್ನು. ಖಾನಾಹೊಸಹಳ್ಳಿ ಪೊಲೀಸರು ನಮ್ಮ ದಾಖಲಿಸಿಕೊಳ್ಳದೇನೆ, ನಮ್ಮನ್ನು ಹಾಗೇ ವಾಪಾಸು ಕಳುಹಿಸಿಕೊಟ್ಟಿರುತ್ತಾರೆಂದು ಬಾಲಮ್ಮ ಹೇಳಿಕೆ ನೀಡಿದ್ದಾಳೆ. *ಜವಾಬ್ದಾರಿ ಮರೆತ ಕ್ಯಾಸನ ಕೇರಿ ಗೊಲ್ಲರಹಟ್ಟಿ ಮುಖಂಡರು* ಖಾಲಿ(3ಅಡಿ)ನಿವೇಶನವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ತೆರವು ಗೊಳಿಸಿರೆಂದು ಒತ್ತುವರಿದಾರರನ್ನು ಕೇಳಿಕೊಂಡಿದ್ದು, ಈ ಸಂದರ್ಭದಲ್ಲಿ ಅಕ್ರಮ ಒತ್ತುವರಿದಾರರು. ತನ್ನ ಮೇಲೆ ಹಾಗೂ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ಜರುಗಿದ ದಿನದಂದು ಹಲ್ಲೆ ಮಾಡಿದವರ ವಿರುದ್ಧ, ಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು. ಆಗ ಗ್ರಾಮದ ಕೆಲವು ಮುಖಂಡರು ಮದ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು, ಮತ್ತು ದೂರು ನೀಡದಂತೆ ಮನವಿ ಮಾಡಿಕೊಂಡಿದ್ದರು. ಅವರ ಮಾತಿಗೆ ಗೌರವ ನೀಡಿ, ತಾನು ದೂರು ನೀಡಿರುವುದನ್ನು ಅಧೀಕೃತವಾಗಿ ದಾಖಲಿಸದೇ ಹಾಗೇ ಮರಳಿದ್ದೆನು. ಆದರೆ ಈಗ ಗ್ರಾಮದ ಮುಖಂಡರು ತಾವು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ, ಮುಖಂಡರ ಮಾತಿಗೆ ಒತ್ತುವರಿದಾರರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅವರಲ್ಲಿ ಕೆಲವರು ಒತ್ತುವರಿದಾರರ ಪರ ಒಕಾಲತ್ತು ವಹಿಸುತ್ತಿದ್ದಾರೆ, ಕೆಲವರು ಏನೂ ಮಾಡಲ‍ಾಗದವರಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಮುಖಂಡರು ತಮ್ಮ ಜವಾಬ್ದಾರಿ ಮರೆತು , ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಮುಖಂಡರು ಮಾತ್ರ, ನ್ಯಾಯ ಯುತವಾಗಿ ತನಗೆ ಸಹಕರಿಸುತ್ತಿದ್ದಾರೆಂದು ಬ‍‍ಾಲಮ್ಮ ವಿವರಿಸಿದ್ದಾಳೆ. *ಹಲ್ಲೆ, ಹತ್ಯಗೆ ಯತ್ನ, ಪ್ರಾಣ ಬೆಧರಿಕೆ ದೂರನ್ನು- ಗಂಭೀರವಾಗಿ ಪರಿಗಣಿಸದ ಹೊಸಹಳ್ಳಿ ಠಾಣಾಧಿಕಾರಿ*- ಅಕ್ರಮ ಒತ್ತುವರಿದಾರರು ತಾವು ಅಕ್ರಮವಾಗಿ, ತನ್ನ ಜಾಗದಲ್ಲಿ ಕಟ್ಟಿರುವ ಗೋಡೆಯನ್ನು, ತೆರವುಗೊಳಿಸದೇ ಇದ್ದು ವಿಚಾರಿಸಲಾಗಿ. ಅವರು ನಮ್ಮ ಶೀಟಿನ ಮನೆಯ ಮೇಲೆ ಭಾರೀ ಗಾತ್ರ ಕಲ್ಲು ಎತ್ತಿ ಹಾಕುವ ಮೂಲಕ ಮತ್ತೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಾರೆ. ಮತ್ತು ಒತ್ತುವರಿ ಪ್ರೆಶ್ನಸಿದ ದಿನದಿಂದ ಈ ಕ್ಷಣದ ವರೆಗೂ ಕೂಡ, ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದು ಧರ್ಪ ಮೆರೆಯುತ್ತಿದ್ದಾರೆ. ನಾವು ಏನೆ ಮಾಡಿದರೂ ಅರಗಿಸಿಕೊಳ್ಳಬಲ್ಲೆವು, ನಾವು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡಿದರೂ ನಮಗ್ಯಾರೂ ಏನೂ ಮಾಡಕಾಗಲ್ಲ. ನೀನು ಎಲ್ಲಿಗೇ ಹೋಗು ಅವರನ್ನು ನಾವು ಬುಕ್ ಮಾಡಿಕೊಳ್ತೀವಿ, ಎಲ್ಲಾ ಅಧಿಕಾರಿಗಳನ್ನು ರೊಕ್ ಕೊಟ್ಟು ಸರಿ ಮಾಡ್ಕಳ್ತೀವಿ. ಮನಸ್ಸು ಮಾಡಿದ್ರೆ ನಿಮ್ಮನ್ನೆಲ್ಲ‍ ಮುಗಿಸಬಲ್ಲೆವು ನಿಮ್ಗ್ಯಾರು ದಿಕ್ಕಿಲ್ಲ ದೆಸೆಯಿಲ್ಲ, ಎಂದು ಒತ್ತುವರಿದಾರರ ಮನೆಯ ಸದಸ್ಯರು ನಮಗೆ ಪ್ರಾಣ ಬೆಧರಿಕೆ ಒಡ್ಡಿದ್ದು. ಈ ಕುರಿತು ಖ‍ಾನಾಹೊಸಹಳ್ಳಿ ಠಾಣಾಧಿಕಾರಿ ಬಳಿ ಸಂತ್ರಸ್ತೆ ಬಾಲಮ್ಮ ದೂರಿದ್ದು, ಹೇಳಿಕೆ ಪಡೆದ ಠಾಣಾಧಿಕಾರಿ ಪರಿಸ್ಥಿತಿಯ ಗಂಭೀರತೆ ಅರಿತಿದ್ದೂ ಕೂಡ. ಸಂತ್ರಸ್ಥೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾನೂನು ರೀತ್ಯ ತಪಿತಸ್ಥರ ವಿರುದ್ಧ ಶಿಸ್ತು ಕ್ರಮಜರುಗಿಸದೇ, ಸೂಕ್ತ ರಕ್ಷಣೆಗೆ ಮುಂದಾಗದೇ ಗ್ರ‍ಾಮದ ಕೆಲ ಮುಖಂಡರನ್ನು ಅವರೇ ಕರೆಸಿ ಅವರ ಹೆಗಲಿಗೆ ಹೊಣೆ ಹೊರೆಸಿ ಕೈತೊಳೆದು ಕೊಂಡಿದ್ದಾರೆ. ಹೊಣೆಗೇಡಿತನ ತೋರಿದ್ದಾರೆಂದು ಬಾಲಮ್ಮ ಆರೋಪ ಮಾಡಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಹಲ್ಲೆ ನಡೆದಿದ್ದು ಹತ್ಯಗೆ ವಿಫಲ ಯತ್ನ ನಡೆದಿದೆ, ಒತ್ತುವರಿದಾರರು ತನಗೆ ಪ್ರಾಣ ಬೆಧರಿಕೆ ಒಡ್ಡಿರುವ ಬಗ್ಗೆ ಹೇಳಿಕೆ ನೀಡಿದ್ದು ಕೂಡ. ಠಾಣಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ, ಲಘುವಾಗಿ ಪರಿಗಣಿಸಿದ್ದು ನಿರ್ಲಕ್ಷ್ಯ ದೋರಣೆಯನ್ನು ಠಾಣಾಧಿಕಾರಿ ತಾಳಿದ್ದಾರೆಂದು ಸಂತ್ರಸ್ತೆ ಬಾಲಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಕಾರಣ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಠಾಣಾಧಿಕಾರಿಗೆ ಸೂಕ್ತ ನಿರ್ಧೇಶನ ನೀಡಬೇಕಿದೆ, ಸಂಬಂಧಿಸಿದ ಇಲಾಖೆ ನಮಗೆ ಸೂಕ್ತ ರಕ್ಷಣೆ ನೀಡಿ ಕ್ರಮ ಜರುಗಿಸಬೇಕಿದೆ. ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ನಾನು ನೀಡಿರುವ ವಾಸ್ತವಾಂಶದ ಹೇಳಿಕೆಯನ್ವಯ, ದೂರು ದಾಖಲಿಸಿಕೊಂಡು ತಪ್ಪಿತಸ್ಥ ಆರೋಪಿಗಳ ವಿರುದ್ಧ. ಸುಕ್ತಈ ಮೂಲಕ ಕೋರುವುದಾಗಿ ಬಾಲಮ್ಮ ತಿಳಿಸಿದ್ದಾಳೆ. *3ತಿಂಗಳುಗಳೇ ಕಳೆದರೂ ಕ್ರಮ ಜರುಗಿಸದ ಪಿಡಿಓ.!?*- ಒತ್ತುವರಿ ತೆರವುಗೊಳಿಸಿ ಕೊಂಡುವಂತೆ, ಸೂಕ್ತ ದಾಖಲಾತಿಗಳ ಸಮೇತ. ಬಾಲಮ್ಮ ರವರು 2024ರ ನವಂಬರ್ 14 ರಂದು, ಚೌಡಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿಕೊಂಡಿದ್ದು. ಕಳೆದ ಮೂರು ತಿಂಗಳುಗಳಿಂದ ತನ್ನನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆಂದು, ಸ್ಥಳಕ್ಕಾಗಮಿಸಿ ಸಮಸ್ಯೆ ಇತ್ಯಾರ್ಥ ಪಡಿಸುತ್ತಿಲ್ಲ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಒತ್ತುವರಿ ಆಗಿರುವುದು ಖಚಿತವಾಗಿದ್ದು, ಆ ಕುರಿತು ಲಿಖಿತ ವರದಿಯನ್ನು ತಮಗೆ ನೀಡುತ್ತಿಲ್ಲ ಎಂದು ಬಾಲಮ್ಮ ದೂರಿದ್ದಾಳೆ. ಅಕ್ರಮ ಒತ್ತುವರಿ ಮಾಡಿಕೊಂಡಿರುವುದಕ್ಕೆ ಬಾಲಮ್ಮಳ ಹತ್ತಿರ ಇರೋ ದಾಖಲಾತಿಗಳು ಸಾಬೀತು ಮಾಡುತ್ತಿವೆ. ಮತ್ತು ಸರ್ಕಾರಕ್ಕೆ ಗ್ರಾಮ ಪಂಚಾಯ್ತಿ ಯಿಂದ ತೆರಿಗೆ ಕಟ್ಟಿದ್ದಾರೆ, ಇಷ್ಟಿದ್ದರೂ ಕೂಡ ಗ್ರಾಮ ಪಂಚಾಯ್ತಿ ಅಧಿಕಾರಿ ಬಾಲಮ್ಮಳ ದಾಖಲಾತಿಗನುಗಣವಾಗಿ. ಖಾಲಿ ನಿವೇಶನದಲ್ಲಿ ಮೂರು ಅಡಿ ಒತ್ತುವರಿ ಮಾಡಿಕೊಂಡಿದ್ದು, ಬಂದೋಬಸ್ತು ಮಾಡಿಕೊಡುವಲ್ಲಿ ಮುಂದಾಗುತ್ತಿಲ್ಲ. ಅಭಿವೃದ್ಧಿ ಅಧಿಕಾರಿ ಅನಗತ್ಯ ವಿಳಂಬ ಮಾಡುತ್ತಿದ್ದು, ಯಾವುದೇ ಪೂರಕ ದಾಖಲಾತಿಗಳಿಲ್ಲದ ಒತ್ತುವರಿ ದಾರರ ಪರ ವಕಾಲತ್ತು ಮಾಡುತ್ತಿದ್ದಾರೆ. ಅಕ್ರಮ ಒತ್ತುವರಿದಾರರ ವಿರುದ್ಧ ಕಾನೂನಾತ್ಮಕ ಅಗತ್ಯ ಕ್ರಮ ಕೈಗೊಳ್ಳುವಲ್ಲಿ, ಅಧಿಕಾರಿ ಧೈರ್ಯ ಮಾಡುತ್ತಿಲ್ಲ ಬದಲಿಗೆ ಒತ್ತುವರಿದಾರರ ಪರ ಏಜೆಂಟ್ ತರ ವರ್ತಿಸುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮೌಕಿಕವಾಗಿ ಒತ್ತುವರಿದಾರರಿಗೆ ಹೇಳುತ್ತಾರದರೂ, ತೆರವಿಗೆ ಒಂದೇ ಒಂದು ನೋಟೀಸ್ ನೀಡದೇ ಪರೋಕ್ಷವಾಗಿ ಒತ್ತುವರಿದಾರರಿಗೆ ಅಭಿವೃದ್ಧಿ ಅಧಿಕಾರಿ ಕುಮ್ಮಕ್ಕು ನೀಡುತ್ತದ್ದಾರೆಂದು ಬಾಲಮ್ಮ ಗಂಭೀರವಾಗಿ ದೂರಿದ್ದಾಳೆ. ಒತ್ತುವರಿ ಜಾಗದಲ್ಲಿ ಮನೆಯ ಗೋಡೆಯೊಂದನ್ನು ನಿರ್ಮಿಸುತ್ತಿದ್ದು, ಅದನ್ನು ತಿಳಿದಾಕ್ಷಣವೇ ನಿರ್ಮಾಣ ಮಾಡದಂತೆ ತಾನು ಆಕ್ಷೇಪ ಮಾಡಿದ್ದು. ಆ ಸಂದರ್ಭದಲ್ಲಿ ಒತ್ತುವರಿದಾರರು ಮುಗ್ದೆ ಬಾಲಮ್ಮಳ ಮೇಲೆ, ಒತ್ತುವರಿದಾರರು ದೌರ್ಜನ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಅಭಿವೃದ್ಧಿ ಅಧಿಕಾರಿ ಸಮಕ್ಷಮದಲ್ಲಿಯೇ ಒತ್ತುವರಿದಾರರು, ತಾವು ಅಕ್ರಮ ಒತ್ತುವರಿ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದು. ಸ್ಥಳ ಪರಿಶೀಲನೆ ವೇಳೆ ತುಂಬಾ ಉದ್ಧಟತನದಿಂದ ದರ್ಪದಿಂದ ವರ್ತಿಸಿದ್ದು, ಒತ್ತುವರಿದಾರರು ತನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆಂದು ಬಾಲಮ್ಮ ದೂರಿದ್ದಾಳೆ. ಕಟ್ಟಡ ಕಟ್ಟುತ್ತೇವೆ ಯಾರೇನು ಮಾಡಿಕೊಳ್ಳಕಾಗಲ್ಲ, ನೀನು ಯಾರನ್ನು ಕಾಣುತ್ತೀಯೋ ಕ‍ಂಡಕೋ. ಅವರ್ಯಾರೇ ಆದರೂ ನಾವು ಸರಿಮಾಡಿಕೊಳ್ಳುತ್ತೇವೆ, ಎಂಬಿತ್ಯಾದಿ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ಬಾಲಮ್ಮ ಹೇಳಿಕೆ ನೀಡಿದ್ದಾಳೆ. ಒತ್ತುವರಿ ಸಮಸ್ಯೆ ಜಟಿಲವಾಗುವುದಕ್ಕೆ ಅಭಿವೃದ್ಧಿ ಅಧಿಕಾರಿ ಪರೋಕ್ಷವಾಗಿ ಸಹಕರಿಸಿದ್ದು, ಒತ್ತುವರಿ ತೆರವಿಗೆ ಹಾಗೂ ಸ್ಥಳ ಪರಿಶೀಲನೆಗೆ ಅಗತ್ಯ ಕ್ರಮ ಜರುಗಿಸದ ಅಭಿವೃದ್ಧಿ ಅಧಿಕಾರಿ ವಿರುದ್ಧ. ತಾನು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ, ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತದ ದೂರು ನೀಡಿದ್ದು. ವಿಜಯ ನಗರ ಜಿಲ್ಲಾ ಲೋಕಾಯುಕ್ತರಲ್ಲಿ, ನ್ಯಾಯ ಒದಗಿಸಿಕೊಡುವಂತೆ ಲಿಖಿತ ದೂರು ನೀಡಿರುವುದಾಗಿ ಬಾಲಮ್ಮ ತಿಳಿಸಿದ್ದಾರೆ. ಅಧಿಕಾರಿಗಳು ಕಾನೂನುರೀತ್ಯ ಕ್ರಮ ಜರುಗಿಸದಿದ್ದಲ್ಲಿ, ಕೋರ್ಟ್ ನಲ್ಲಿ ಅವರ ವಿರುದ್ಧ ಕೂಡ ಪ್ರಕರಣ ದಾಖಿಲಿಸಲಾಗುವುದು. ಮತ್ತು ಅತೀ ಶೀಘ್ರದಲ್ಲಿಯೇ ಮಹಿಳಾ ಆಯೋಗ , ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗುವುದೆಂದು ಬಾಲಮ್ಮ ಹೇಳಿಕೆ ನೀಡಿದ್ದಾರೆ. ಕೂಡ್ಲಿಗಿಯ ಪ್ರಗತಿ ಪರ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ, ತಾಲೂಕು ಪಂಚಾಯ್ತಿ ಅಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತೆ ಬಾಲಮ್ಮ ತಿಳಿಸಿದ್ದಾರೆ. *ಕೊಲೆ ಬೆಧರಿಕೆ ಒಡ್ಡಿದ್ದಾರೆ-ರಕ್ಷಣೆ ಕೊಡಿಸಿ ಸಾರ್.!? ಬಾಲಮ್ಮ ಅಳಲು*- ಒತ್ತುವರಿದಾರರು ತನಗೆ ಮತ್ತು ತನ್ನ ಮಗನಿಗೆ ಕೊಲೆ ಬೆಧರಿಕೆ ಒಡ್ಡಿದ್ದಾರೆ, ಮೊದಲು ಸೂಕ್ಷ್ಮ ಜಾಗಗಳಿಗೆ ಹಲ್ಲೆ ಮಾಡಿ ಕೊಲೆಗೆ ಯತ್ನ ನಡೆಸಿದ್ದರು. ನಂತರ ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ್ದಾಗ, ಮನೆಯ ಹಂಚಿನ ಮೇಲಿಂದ ಭಾರೀ ಗಾತ್ರದ ಕಲ್ಲನ್ನು ಎತ್ತಿ ಹಾಕೋ ಮೂಲಕ ಕೊಲ್ಲಲು ಯತ್ನಿಸಿದ್ದರು. ಆ ಸಂದರ್ಭದಲ್ಲಿ ಅದೃಷ್ಟ ವಶಾತ್ ಕಲ್ಲು ದಾಳಿಯಿಂದ ತಪ್ಪಿದಿಕೊಂಡಿದ್ದು, ಮತ್ತೊಮ್ಮೆ ಪಿಡಿಓರವರು ಸ್ಥಳ ಪರಿಶೀಲನೆ ವೇಳೆ ತನ್ನ ಮೇಲೆ ಹಾಗೂ ಮಗನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದೈ ಸಂದರ್ಭದಲ್ಲಿ ಒತ್ತುವರಿದಾರರು, ನೀನು ಹೀಗೆ ಮುಂದುವರೆದಿದ್ದಾರೆ ನಿನಗೊಂದು ಗತಿ ಕಾಣಿಸುತ್ತೆವೆ. ನಾವು ಏನೇ ಮಾಡಿಯಾರೂ ಅರಗಿಸಿಕೊಳ್ಳುತ್ತೇವೆ, ನಾವು ಯಾರನ್ನು ಬೇಕಾದರೂ ನಮ್ಮಂಗೆ ಬಗ್ಗಿಸಿಕೊಳ್ಳುತ್ತೇವೆ ಎಂದು ಕೊಲೆ ಬೆಧರಿಕೆ ಒಡ್ಡಿದ್ದು. ನನಗೆ ನನ್ನ ಮಕ್ಕಳಿಗೆ ಐನೇ ಅನಾಹುತವಾದರು, ಈ ಒತ್ತುವರಿದಾರರೇ ಕಾರಣವಾಗಿರುತ್ತಾರೆ. ಅವರಿಂದ ನಮಗೆ ಸೂಕ್ತ ರಕ್ಷಣೆ ಬೇಕಿದೆ, ಅವರಿಂದ ಜೀವ ಭಯವಿದ್ದು. ಈ ಕಾರಣಕ್ಕೆ ತಾನು ತನ್ನ ಸಹೋದರನ ಮನೆ, ಹಾಗೂ ತವರೂರಾದ ಶಿವಪುರ ಗೊಲ್ಲರಹಟ್ಟಿಯಲ್ಲಿ ತಂಗಿರುವುದಾಗಿ ಬಾಲಮ್ಮ ಅಳಲು ತೋಡಿಕೊಂಡಿದ್ದಾರೆ. *ರಾಜ್ಯ ಮಾನವ ಹಕ್ಕು ಮಹಿಳಾ ಹಕ್ಕು ಆಯೋಗಕ್ಕೆ ದೂರು& ವಿವಿದ ಇಲಾಖೆಗಳ ಜಿಲ್ಲಾಧಿಕಾರಿಗಳಿಗೆ ಮನವಿ* – ಪ್ರಕರಣ ಸಂಬಂಧಿಸಿದಂತೆ, ವಿಜಯನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. ವಿಜಯನಗರ ಪೊಲೀಸ್ ಜಿಲ್ಲಾ ವರಿಷ್ಠಾದಿಕಾರಿಗಳು. ವಿಜಯನಗರ ಲೋಕಾಯುಕ್ತ ಏಸ್ಪಿಯವರಲ್ಲಿ, ಸೂಕ್ತ ದಾಖಲಾತಿಗಳ ಸಮೇತ ಅಗತ್ಯ ಫೋಟೋ ವೀಡಿಯೋಗಳ ಸಮೇತ ದೂರು ಸಲ್ಲಿಸಿದ್ದು. ಅಗತ್ಯ ಕ್ರಮಕ್ಕಾಗಿ ಮನವಿ ಸಲ್ಲಿಸಿರುವುದಾಗಿ, ಮತ್ತು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದು. ರಾಜ್ಯ ಮಾನವ ಹಕ್ಕು ಆಯೋಗ ರಾಜ್ಯ ಮಹಿಳಾ ಹಕ್ಕು ಆಯೋಗ, ಜಿಲ್ಲಾ ನ್ಯಾಯಾಧೀಶರಲ್ಲಿ ರಕ್ಷಣೆ ಕೋರಿ ಮನವಿ ಮಾಡಿಕೊಂಡಿರುವುದಾಗಿ ಬಾಲಮ್ಮ ತಿಳಿಸಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend