ಸ್ನೇಹಿತರ ಬಳಗ ಕೂಡ್ಲಿಗಿ 8ನೇ ವರ್ಷದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ತಪಾಸಣೆ ಶಿಬಿರ 01.02 .2025 ಹಿರೇಮಠ ಕಲ್ಯಾಣ ಮಂಟಪ ಕೂಡ್ಲಿಗಿ ಗುಡೆಕೋಟೆ ರಸ್ತೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಶಿಬಿರದಲಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ ಮತ್ತು ಅಖಿಲ್ ಮೌಲ್ವಿಸಾಬ್ ಸ್ವಾಮೀಜಿ ಮಾತನಾಡಿ ಸ್ನೇಹಿತರ ಬಳಗ ಜನ ಸಮುದಾಯಕ್ಕೆ ಸೇವೆ ಮಾಡುವ ಕೆಲಸ ಮಾಡುತ್ತಿದ್ದಾರೆ ಜನಸೇವೆಯೇ ಜನಾರ್ಧನ ಸೇವೆ ಅನ್ನುವ ನಿಟ್ಟಿನಲ್ಲಿ ಸೇವೆ ನೀಡುತ್ತಿದ್ದಾರೆ ಬಸವಣ್ಣನವರ ವಚನದಂತೆ ಸರ್ವೇ ಜನ ಸುಖಿನೋ ಭವಂತು ಅನ್ನುವ ಹಾಗೆ ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇದೇ ಸಂದರ್ಭದಲ್ಲಿ ಅಖಿಲ್ ಮೌಲಾನ ಸಾಬ್. ಮಾತನಾಡಿ ಅಲ್ಲಾಹ ಮಾನವನನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ. ಅಂತವರ ಸೇವೆ ಮಾಡುವುದು ಕೋಟಿ ಪುಣ್ಯಕ್ಕೂ ಹೆಚ್ಚು .ಎಂದು ಪ್ರವಾದಿಗಳ ಸಂದೇಶವನ್ನು ತಿಳಿಸಿದರು. ಚೋರ್ನೂರ್ ಅಡಿವಪ್ಪ ಮಾತನಾಡಿ ಎಲ್ಲಾ ಮುದಾಯವನ್ನು ಒಗ್ಗೂಡಿಸುವ ಸೇವೆ ಕೆಲಸ ಬಹಳ ದೊಡ್ಡ ಸೇವೆ ಎಂದು ಹೇಳಿದರು ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಕಾಂಟ್ರಾಕ್ಟರ್ ಇಸ್ಮಾಯಿಲ್ ಸಾಬ್ ನೇತೃಲಕ್ಷ್ಮಿ ವೈದ್ಯಾಲಯ ಅಶ್ವಿನಿ ಡಾಕ್ಟರ್ ಶ್ರೀನಿವಾಸ್ ಆರ್ ದೇಶಪಾಂಡೆ. ಇದೆ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ,ಡಾಕ್ಟರ್ ತಿಪ್ಪೇಸ್ವಾಮಿ ಹೃದಯ ರೋಗ ತಜ್ಞರು, ಡಾ. .ನಾಗರಾಜ್ ಮಹಿಳಾ ತಜ್ಞರು . ನ್ಯಾಯಾಧೀಶರು ಭುವನೇಶ್ವರಿ. ನ್ಯಾಯಾಧೀಶರು ಪ್ರಿಯಾಂಕ ಐಪಿಎಸ್ ವಿಜಯ್ ಕುಮಾರ್ . ಅಮೀನ್ ಉದ್ದಿನ್ ಬಾಷ್ಯ ಕಮಾಂಡೋ ಬ್ಲಾಕ್ ಕ್ಯಾಟ್.ಹಕ್ಕು ಪಂಚರ್ ಕಣ್ಣನ್ .ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಭಾಕರ್ .ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು ಉಸ್ಮಾನ್. ಸಾಬ್ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗುರುಸಿದ್ದನಗೌಡ .ಕರ್ನಾಟಕ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರು ಜಿಂಕಲ್ ನಾಗಮಣಿ. ಉದ್ಯಮಿ ಪಟ್ನಾ ಶೆಟ್ಟಿ ಪಂಪಣ್ಣ ಮಲ್ಲಾಪುರ ಭರಮಣ್ಣ ಅಂಗಡಿಗಣೇಶ್ ತಳವಾರ್ ಸುರೇಶ್ ಕ್ರೈಸ್ತ ಸಮುದಾಯದ ಫಾದರ್ ಡೇವಿಡ್ ಮತ್ತು ಸ್ನೇಹಿತರ ಬಳಗದ ಮಹಮ್ಮದ್ ಫಯಾಜ್ ಅಬ್ದುಲ್ ಜಬ್ಬಾರ್ ಅಬ್ದುಲ್ ವಾಹಿದ್ ಮಹೇಶ್ ಆತಿಫ್ ಆಸಿಫ್ ಹಾಗೂ ಡಿಪ್ಲೋಮಾ ಎನ್ಎಸ್ಎಸ್ ವಿದ್ಯಾರ್ಥಿಗಳು ಮತ್ತು ರಾಘವೇಂದ್ರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಗೃಹ ರಕ್ಷಕ ದಳ ಕೂಡ್ಲಿಗಿ . ಕಾರ್ಯ ಘಟಕ ಕೂಡ್ಲಿಗಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಕೂಡ್ಲಿಗಿ ಎನ್ಎಸ್ಎಸ್ ವಿದ್ಯಾರ್ಥಿಗಳು ಪೋಲೀಸ್ ಇಲಾಖೆ ಅಂತರ್ಜಾಲ ತಾಣ ಪತ್ರಿಕರ್ತ ಮಿತ್ರರು ಹಾಗೂ ಸಮಾನ ಮನಸ್ಕರು ಸಮಾಜ ಸೇವೆಗೆ ಕೈಜೋಡಿಸಿ ಯಶಸ್ವಿಗೊಳಿಸಿ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು ಅಧ್ಯಕ್ಷರು ಸ್ನೇಹಿತರ ಬಳಗ ಅಬ್ದುಲ್ ರಹಮಾನ್ ಹಾರೈಸಿದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030