ಕೂಡ್ಲಿಗಿ: ಪರೀಕ್ಷಾರ್ಥಿಗಳೇ ಭಯ ಬೇಡ, ಸ್ನೇಹಿತರ ಬಳಗದಿಂದ ಅಭಯ
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಸ್ನೇಹಿತರ ಬಳಗದವರಿಂದ, “ಪರೀಕ್ಷಾರ್ಥಿಗಳೇ ಪರೀಕ್ಷೆಯ ಭಯ ದೂರವಾಗಲಿ ಗೆಲುವಿನ ಅಭಯ ನಿಮ್ಮದಾಗಲಿ” ಎಂಬ ಘೋಷಣೆಯಡಿ. ಪ್ರಸಕ್ತ ಸಾಲಿನ ಡಾ॥SSLC ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಗೆ. ಪರೀಕ್ಷೆಗೆ ಮಾನಸಿಕ ಸಿದ್ಧತೆ ಕುರಿತಂತೆ ಪೂರ್ವ ತಯಾರಿ, ಪರೀಕ್ಷಾ ಭಯ ನಿವಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರೀಕ್ಷೆಗೆ ಪೂರ್ವ ತಯಾರಿ ಹಾಗೂ ಅನುಸರಿಸಬೇಕಾಗಿರುವ ಕ್ರಮಗಳ ಕುರಿತು, ವಿದ್ಯಾರ್ಥಿಗಳಿಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವನೇತ್ರಾವತಿ ಗ್ರೇಟ್ 2 ತಹಸಿಲ್ದಾರ್ ಹಾಗೂ ಸ್ನೇಹಿತರ ಬಳಗದ ಅಬ್ದುಲ್ ರಹೆಮಾನ್ ರವರ ನೇತೃತ್ವದಲ್ಲಿ, ಪರೀಕ್ಷೆಯ ಭಯ ಬೇಡ ಕಾರ್ಯಕ್ರಮವನ್ನು ಆಹಾ ಶಾಲೆಯಲ್ಲಿ ಜರುಗಿಸಲಾಯಿತು. ಕಾರ್ಯಕ್ರಮದ ನೇತ್ರಾವತಿ ಕೆಎಎಸ್ ಗ್ರೇಟ್2 ತಾಸಿಲ್ದಾರ್ ಸ್ನೇಹಿತರ ಬಳಗದ ಅಬ್ದುಲ್ ರಹಮಾನ್ ಮಾತನಾಡಿ, ವಿದ್ಯಾರ್ಥಿಗಳೇ ಭಯ ಅನ್ನೋದು ಅಜ್ಞಾನದ ಸಂಕೇತ, ಅದನ್ನು ಬಿಟ್ಟು ಹೊರಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಪರೀಕ್ಷೆಗಾಗಿ ವೈಜ್ಞಾನಿಕ ನಿಲುವಿನೊಂದಿಗೆ ಹಾಗೂ ಶಿಕ್ಷಕರ, ಅನುಭವಿಗಳ ಸಲಹೆ ಸೂಚನೆಗಳೊಂದಿಗೆ ಪೂರ್ವ ತಯಾರಿ ಮಾಡಿಕೊಂಡು ಸನ್ನದ್ಧರಾಗಿ ಹಿಂಜರಿಯದಿರಿ ಎಂದರು. ಧೈರ್ಯವೇ ಸರ್ವ ಸಾಧನೆಗೆ ಮೂಲಕ ಕಾರಣ, ಸಾಧಿಸಲು ನಿರಂತರ ಅಧ್ಯಯನಶೀಲತೆ ಛಲ ಅಗತ್ಯ ಎಂದರು. ನಂತರ ಅನುಭವಿ ಯಶಸ್ವೀ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಕುರಿತು ಮಾಹಿತಿ ನೀಡಲಾಯಿತು. ಸದಸ್ಯರಾದ ಫಯಾಜ್. ಅಬ್ದುಲ್ ವಾಹಿದ್. ರೈಲ್ವೆ ಇಲಾಖೆ ಅಬ್ದುಲ್ ಜಬ್ಬಾರ್ ಮಹೇಶ್, ಬಸವರಾಜ. ಹಾಗೂ ತಾಹ ಶಾಲೆಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಖಿಲ್ ಮೌಲಾನ ಮತ್ತು ಮುಖ್ಯ ಉಪಾಧ್ಯಾಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು…
ವರದಿ, ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030