ಕೂಡ್ಲಿಗಿ:ಸಮಾಜ ಸೇವಕಿ ಹಣ್ಣಿನ ವ್ಯಾಪರಿ, ಗೌರಮ್ಮ ಸಿಂಧೆಯರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ, ಪೊಲೀಸ್ ವಸತಿ ವಸತಿ ಸಮುಚ್ಚಯಗಳ ಹತ್ತಿರ. ಹಣ್ಣಿನ ವ್ಯಾಪಾರ ಮಾಡೋ ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆಯವರಿಗೆ, ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ಕೊಡಮಾಡಲ್ಪಡುವ. 2024ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಡಿ25ರಂದು ಬೆಂಗಳೂರಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಸಮಾಜ ಸೇವಕಿ ಶ್ರೀಮತಿ ಗೌರಮ್ಮ ಸಿಂಧೆ, ಹಾಗೂ ಅವರ ಪತಿ ಮಹಂತೇಶ ಸಿಂಧೆ ದಂಪತಿಗಳಿಬ್ಬರು. ತಮ್ಮ ಜೀವನ ನಿರ್ವಹಣೆಗೆ ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ರಸ್ತೆ ಬದಿಯಲ್ಲಿ, ಗೂಡಂಗಡಿಯೊಂದರಲ್ಲಿ ವಿವಿದ ಬಗೆಯ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದಾರೆ. ಅವರು ಪ್ರತಿ ದಿನದ ತಮ್ಮ ಅಮೂಲ್ಯವಾದ ಒಂದೆರೆಡು ತಾಸುಗಳನ್ನು, ತಮ್ಮ ಪ್ರವೃತ್ತಿಯಾದ ಸಮಾಜ ಸೇವೆ ಹಾಗೂ ಕಲಾ ಕ್ಷೇತ್ರದ ಸೇವೆಗೆಂದೇ ಮುಡುಪಾಗಿಸಿಕೊಂಡಿದ್ದಾರೆ. ಈ ದಂಪತಿಗಳಿಗೆ ಪೂರಕವಾಗಿ, ಅವರ ಮಕ್ಕಳೂ ಸಹ ಇವರೊಟ್ಟಿಗಿದ್ದು ಸಹಕರಿಸುತ್ತಿದ್ದಾರೆ. ಸೇವಕಿಯಾಗಿ ಕಲಾ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ, ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆರವರು ತಮ್ಮ ಬಾಲ್ಯ ಜೀವನದಿಂದಲೂ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಮತಿ ಗೌರಮ್ಮ ಮಹಂತೇಶ ರವರ ಪರಿಚಯ:- ಅವರ ಪೂರ್ಣ ಹೆಸರು ಶ್ರೀಮತಿ ಗೌರಮ್ಮ.ಸಿ, ಅವರ ಪತಿ ಹಣ್ಣಿನ ವ್ಯಾಪಾರಿ ಮಹಂತೇಶ ಸಿಂಧೆ. ವಿಳಾಸ: ಬಡೆಲಡಕು ಗ್ರಾಮ, (ಹಾಲಿ ವಾಸ ಕೂಡ್ಲಿಗಿ ಪಟ್ಟಣದ ಆಜಾದ್ ನಗರ) ಕೂಡ್ಲಿಗಿ (ತಾ) ವಿಜಯನಗರ (ಜಿ) pin code :-583135. ಗೌರಮ್ಮರವರ ಮೊ ನಂ 73376 95126 ಅವರ ಮೂಲ ವೃತ್ತಿ ಹಣ್ಣಿನ ವ್ಯಾಪಾರವಾಗಿದೆ. ಅವರು ಹುಟ್ಟಿದ್ದು ಶಿಳ್ಳೇಕ್ಯಾತರ ಸಮುದಾಯದ ಮದ್ಯಮ ವರ್ಗದ, ಕೃಷಿಕ ಕುಟುಂಬದಲ್ಲಿ ಜನಿಸಿ ಬೆಳೆದು ಬಂದವರು. ಅವರು ಪ್ರಾಥಮಿಕ ಶಾಲೆಗೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಆಡಿರುವ ಅಪರೂಪದ ಪ್ರತಿಭಾವನ್ವಿತರು. ಗುರುತಿಸಿಕೊಂಡಿರುವ ಕ್ಷೇತ್ರಗಳು ಹಾಗೂ ಪದನಾಮಗಳು-
:- ಅಧ್ಯಕ್ಷರು – ಶ್ರೀ ಮಾಯಮ್ಮದೇವಿ ತೊಗಲುಗೊಂಬೆ ಕಲಾ ಟ್ರಸ್ಟ್ ಬಡೆಲಡಕು, ಅಧ್ಯಕ್ಷರು – ಶಿಳ್ಳೆಕ್ಯಾತರ ಮಹಿಳಾ ಕ್ಷೇಮ ಭಿವೃದ್ಧಿ ಸಂಘ,
ಉಪಾಧ್ಯಕ್ಷರು – ಕೂಡ್ಲಿಗಿಯ ಬೀದಿ ಬದಿ ವ್ಯಾಪಾರಿಗಳ ಮಹಿಳಾ ಮಹಾಮಂಡಲ.
ಹವ್ಯಾಸಗಳು- ನಾಡಿನ ಉತ್ಸವಗಳಲ್ಲಿ, ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದು. ತಮ್ಮ ಪೂರ್ವಜರು ಕೊಟ್ಟಿರುವ ಕುಲ ಕಸುಬು ಹಚ್ಚೆ ಹಾಕೋದು, ತೊಗಲು ಗೊಂಬೆಯಾಡಿಸುವುದು. ಕೊರೋನಾದಂತಹ ಸಂಕಷ್ಟ, ಪ್ರಾಕೃತಿಕ ವಿಪತ್ತುಗಳ ಸಂದರ್ಭಗಳಲ್ಲಿ. ನೊಂದವರಿಗೆ ಅಗತ್ಯ ನೆರವು ನೀಡೋ ಮೂಲಕ, ಸಮಾಜ ಸೇವೆ. ಕುಟುಂಬ ಕಲಹಗಳು ಗುಂಪು ಘರ್ಷಣೆಗಳ ನ್ಯಾಯ ಪಂಚಾಯ್ತಿಯಲ್ಲಿ ಭಾಗಿ, ಶೋಷಿತರ ಪರ ಹೋರಾಟ ಮಾಡುವುದು. ನೊಂದವರ ಕಣ್ಣೀರ ಒರೆಸುವಲ್ಲಿ ತೋಡಗಿಸಿಕೊಳ್ಳುವುದು, ಸಮುದಾಯಕ್ಕೆ ಗ್ರಾಮಕ್ಕೆ ಸರ್ಕಾರದಿಂದ ಮೂಲಭೂತ ಸೌಕರ್ಯ, ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಹೋರಾಟಗಳು.ನಾಡು ನುಡಿ ಉಳಿವಿಗಾಗಿ ಹೋರಾಟಗಳಲ್ಲಿ ಭಾಗಿ, ದಲಿತಪರ ನಿಲುವಿನೊಂದಿಗೆ ಶೋಷಣೆ ವಿರುದ್ಧ ಹೊಾರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಗ್ರಾಮೀಣಾಭಿವೃದ್ಧಿಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವುದು. ಅನಾಥ ಮಹಿಳೆಯರಿಗೆ ಆಶ್ರಯ ನೀಡುವುದು. ಮಹಿಳೆಯರಲ್ಲಿ ಸಂಘಟನೆ, ಹೋರಾಟ ಮನೋಭಾವನೆ ಜಾಗೃತಿ ಮೂಡಿಸುವುದು.
ತೊಗಲುಗೊಂಬೆ ಜಾನಪದ ಕಲಾವಿದರು
ಸಮಾಜ ಸೇವಕರು. ಸಂಘಟನೆ ಕರಾರು. ಹವ್ಯಾಸಿ ಬರಹಗಾರರು (ಹಾಡು. ಕವನ ) ಸೊಬನೇ ಹಾಡುಗಳು
ಜಾನಪದ ಹಾಡುಗಳು. ಅಕ್ಷರ ದಾಸೋಹ ಹಾಡುಗಳು, ಆಶುಕಾವ್ಯ ಹಾಗೂ ಚುಟುಕು ಪದ್ಯ ರಚನೆ.
ಜಾಗತಿಕ ವಿದ್ಯಾಮಾನಗಳು, ಬರೆ ನೆರೆ ಸಾಮಾಜಿಕ ಪಿಡುಗುಗಳು. ಪ್ರಭಾವ ಬೀರುವ ಪ್ರಮುಖ ಸಂದರ್ಭಗಳು, ಭಾವನಾತ್ಮಕ ಸನ್ನಿವೇಶಗಳ ಕುರಿತು ಸ್ಥಳದಲ್ಲಿಯೇ ಪದಕಟ್ಟಿ ಹಾಡುವ ಹಾಡುಗಳ ರಚನೆ. ಸೇರಿದಂತೆ ಅನೇಕ ಪ್ರತಿಭೆಗಳಲ್ಲಿ ಹಿಡಿತ ಹೊಂದಿರುವ ಬಹು ಮುಖ ಪ್ರತಿಭೆಯಾಗಿದ್ದಾರೆ. ಜನಪರ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳ ಅಯೋಜನೆ. ಇತ್ಯಾದಿ ಸೇವಾ ಕಾರ್ಯಗಳಲ್ಲಿ, ಸಮಾಜದ ಮಹಿಳೆಯರೊಡಗೂಡಿ ಪಾಲ್ಗೊಳ್ಳುವುದು. ವಿವಿದ ಸನ್ಮಾನ ಬಿರುದಾವಳಿಗಳು, ಗೌರಮ್ಮರವರ ಸೇವಾ ಮನೋಭಾವ ಪರಿಗಣಿಸಿ ಅವರ ಮುಡಿಯನ್ನು ಸೇರಿವೆ. ನಾಡ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿದ ಜಿಲ್ಲಾ ತಾಲೂಕು ಸ್ಥಳೀಯ ಸಂಘ ಸಂಸ್ಥೆಗಳು, ಗೌರಮ್ಮ ರ ಸೇವಾ ಮನೋಭಾವಕ್ಕೆ ಮನ್ನಣೆ ನೀಡಿ ಸನ್ಮಾನಿಸಿ ಗೌರವ ಸಲ್ಲಿಸಿವೆ. ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ನವರು, 2024ರ ಕರ್ನಾಟಕ ರಾಜ್ಯೋತ್ಸವ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದು. ಶ್ರೀಮತಿ ಗೌರಮ್ಮ ಮಹಂತೇಶ ಸಿಂಧೆಯವರಿಗೆ, ಕಿರೀಟಪ್ರಾಯವಾಗಿ ಕಂಗೊಳಿಸಲಿದೆ….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030