ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಶೋಷಿತರಿಗೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲ…!!!

Listen to this article

ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಶೋಷಿತರಿಗೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲ…

ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮ ಪಂಚಾಯತಿಯ ಕಾನಾಮಡುಗು ಗ್ರಾಮದಲ್ಲಿ ದಲಿತ ಕಾಲೋನಿ ಗೆ ದಿನನಿತ್ಯ ಬಳಸುವಂತಹ ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಬಾರದೆ ಇರುವುದು, ಇಲ್ಲಿಯ ಜನರಿಗೆ ಜೀವನ ನಡೆಸುವುದಕ್ಕೆ ಬಹಳ ಕಷ್ಟಕರವಾಗಿದೆ, ಅದು ನೀರು ಗಂಟಿಯ ನಿರ್ಲಕ್ಷವೋ, ಪೈಪ್ ಲೈನಿನ ಸಮಸ್ಯೆಯೋ ಒಂದು ತಿಳಿಯದಂತಾಗಿದೆ, ಈ ಓಣಿ ಯಲ್ಲಿ 72ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಎಲ್ಲಾ ಕುಟುಂಬಗಳಿಗೂ ಇರುವುದು ಒಂದೆ ನೀರಿನ ಟ್ಯಾಂಕ್ ,
ನಮ್ಮ ಗ್ರಾಮದ ಎಲ್ಲಾ ಓಣಿಗಳಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರಿನ ಪೂರೈಕೆ ಮಾಡುತ್ತಾರೆ ಆದರೆ ದಲಿತ ಕಾಲೋನಿ ಗೆ ಸರಿಯಾದ ಸಮಯಕ್ಕೆ ಕುಡಿಯುವ ನೀರು ಬಿಡುತ್ತಿಲ್ಲ, ನಮ್ಮ ಕಾಲೋನಿಗೆ ಒಂದೇ ಟ್ಯಾಂಕ್ ಇದೆ, ಎಲ್ಲರೂ ಬಂದು ಇಲ್ಲೇ ನೀರು ಹಿಡಿಯುವ ಪರಿಸ್ಥಿತಿ ಒಂದು ಕಡೆಯಾದರೆ, ಬೀದಿ ನಲ್ಲಿಗಳಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಹಾಗೂ ಸದಸ್ಯರ ಗಮನಕ್ಕೂ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಪದೇ ಪದೇ ಇದೇ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಬಡ ಜನರು ಬದುಕೋದು ಹೇಗೆ ನಮ್ಮ ಕಾಲೋನಿಗೆ ಬೀದಿ ನಲ್ಲಿಗಳನ್ನು ಮಾಡಿಕೊಡಬೇಕು ಎಂದು ಈ ವೇಳೆ ದಲಿತ ಮುಕಂಡರಾದ ಹೇಚ್.ದುರುಗಪ್ಪ, ಏನ್. ಪಕೀರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಶೋಷಿತರಿಗೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಅಧಿಕಾರಿಗಳಿಗೆ ಚುನಾವಣೆಯೇ ಜಪವಾಗಿದೆ. ಜನ ಸಾಮಾನ್ಯರ ಕಡೆ ಗಮನಹರಿಸುತ್ತಿಲ್ಲ. ರೈತರ ಹೊಲದಲ್ಲಿರುವ ಕೊಳವೆಬಾವಿಗಳಿಂದ ನೀರು ಸಂಗ್ರಹಿಸುತ್ತಿದ್ದೇವೆ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎರಡು ದಿನಗಳಿಂದ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ತಿಳಿಯುತ್ತಿದ್ದಂತೆ ಕಾನಮಡಗು ಗ್ರಾಮಕ್ಕೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಕಾರ್ಯಾ ನಿರ್ವಹಣೆ ಅಧಿಕಾರಿಯಾದ ನರಸಪ್ಪ ಬೇಟಿನೀಡಿ ಇನ್ನು ಎರಡು ದಿನದಲ್ಲಿ ನೀರಿನ ಸಮಸ್ಯೆ ಬಗೆಹರೆಯಬೇಕು ಮತ್ತು ಅಂಬೇಡ್ಕರ್ ಸರ್ಕಲ್ ನಲ್ಲಿ ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಲು ತಾಲೂಕು ಕೆಇಬಿ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಚರಂಡಿ ವ್ಯವಸ್ಥೆ ಅಂದಾಜು ಪಟ್ಟಿ ತಯಾರು ಮಾಡಲು ತಮ್ಮ ಅದೀನ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾದೇವಿ ಅಂಜಿನಪ್ಪ. ಕಾನ ಮಡುಗು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ ದಿನೇಶ್. ಬಿ ಅಂಜಿನಪ್ಪ. ಮಂಜುನಾಥ್. ಬೋರಪ್ಪ. ಗಂಗಮ್ಮ ಶರಣಪ್ಪ. ಮಹಾದೇವಿ ಹನುಮಂತಪ್ಪ.ಆಲೂರು ಗ್ರಾಮ ಪಂಚಾಯತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ವಿನಯ್ ಕುಮಾರ್. ಮಂಜುನಾಥ ಎಂ ಟಿ. ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ. ದಲಿತ ಕೇರಿಯ ಮುಖಂಡರಾದ ಹೆಚ್. ದುರ್ಗಪ್ಪ. ಎನ್ ಪಕೀರಪ್ಪ. ಅಜ್ಜಪ್ಪ.ಮೈಲಾರಪ್ಪ. ಮಡಿವಾಳಪ್ಪ. ಮತ್ತು ಕಾನಮಡಗು ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು…

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend