ಹಿರೇಹೆಗ್ಡಾಳ್ ಗ್ರಾಮದಲ್ಲಿ ೫ನೇ ಸಾಂಸ್ಕೃತಿಕ ಕಲೋತ್ಸವ ಹರ,ಗುರು,ಚರಮೂರ್ತಿಗಳ ಸಂಗಮ ಕಲಾಭಾರತಿ ಕಲಾ ಸಂಘದಿಂದ ಸಾಧಕರಿಗೆ ಪ್ರಶಸ್ತಿ ಆದರ್ಶ ದಂಪತಿಗಳಿಗೆ ಸನ್ಮಾನ…!!!

Listen to this article

ಹಿರೇಹೆಗ್ಡಾಳ್ ಗ್ರಾಮದಲ್ಲಿ ೫ನೇ ಸಾಂಸ್ಕೃತಿಕ ಕಲೋತ್ಸವ ಹರ,ಗುರು,ಚರಮೂರ್ತಿಗಳ ಸಂಗಮ ಕಲಾಭಾರತಿ ಕಲಾ ಸಂಘದಿಂದ ಸಾಧಕರಿಗೆ ಪ್ರಶಸ್ತಿ ಆದರ್ಶ ದಂಪತಿಗಳಿಗೆ ಸನ್ಮಾನ .

ತಾವರೆನಾಡಿನಲ್ಲಿ….ಕಲಾಭಾರತಿ ಕಲಾ ಸಂಘದ ಕಲರವ.

ಕೂಡ್ಲಿಗಿ: ಕಲಾವಿದನಿಂದ ಕಲಾವಿದರಿಗಾಗಿ ಕಲೆಗಳಿಗೋಸ್ಕರ ರಚಿತವಾಗಿರುವ ಕಲಾಭಾರತಿ ಕಲಾ ಸಂಘ, ಹಿರೇಹೆಗ್ಡಾಳ್ ಗ್ರಾಮದ ಹವ್ಯಾಸಿ ರಂಗಕಲಾವಿದ ಬಣಕಾರ ಮೂಗಪ್ಪ ೨೦೧೬ರಲ್ಲಿ ಹುಟ್ಟಿಹಾಕಿದರು. ಅಂದಿನಿಂದ ನಿರಂತರವಾಗಿ ಹರಿಯುವ ನೀರಿನಂತೆ, ಪ್ರತಿ ವರ್ಷವೂ ವೈವಿಧ್ಯಮಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸಾಧಕರನ್ನು ಗುರತಿಸಿ ಸನ್ಮಾನವನ್ನು ನೆರವೇರಿಸಿ, ಬಿರುದಾವಳಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ನಡೆದುಬಂದಿದೆ. ಒಬ್ಬ ಕಲಾವಿದನಾಗುವ ಮೂಲಕ ತೆರೆಯ ಹಿಂದೆ, ಮುಂದೆ, ನಂತರದ ಕಷ್ಟಗಳನ್ನು ಬಹು ಸೂಕ್ಷ್ಮವಾಗಿ ಅರಿತಿರುವ ಮೂಗಪ್ಪ ಮಾತಿಗೆ ಇಳಿದರೆ, ಜಲಪಾತದಂತೆ ಒಬ್ಬ ಕಲಾವಿದರ ಕಡು ಕಷ್ಟಗಳನ್ನು ಲೀಲಾಜಾಲವಾಗಿ ವಿವರಿಸುತ್ತಾನೆ. ಪರಕಾಯ ಪ್ರವೇಶ ಮಾಡಿ ಅಭಿನಯ ನೀಡುವ ಅತ್ಯಅಧ್ಬುತ ಕಲಾವಿದರು ರಾಜ್ಯದಲ್ಲಿ ಸಾಕಷ್ಟು ಮಂದಿ ಇದ್ದರೂ, ಅವರು ಎಲೆಮರೆಕಾಯಿಯಂತಾಗಿದ್ದಾರೆ. ಅವರನ್ನು ಗುರುತಿಸುವ ಮೂಲಕ, ತಾನೇ ಸಂಸ್ಥಾಪಕ ಅಧ್ಯಕ್ಷನಾದ ಕಲಾಭಾರತಿ ಕಲಾ ಸಂಘದ ವೇದಿಕೆಯಿಂದ ಬಣಕಾರ ಮೂಗಪ್ಪ ಅನೇಕ ಕಲಾವಿದರಿಗೆ ಅವರ ಪಾತ್ರಭಿನಯದಲ್ಲಿ ಗುರುತಿಸಿಕೊಂಡಿರುವವರೆಗೆ ಸಮಾನಾಗಿ ಬಿರುದಾವಳಿಗಳನ್ನು ನೀಡಿ, ಸನ್ಮಾನ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಅಭೂತಪೂರ್ವ ಕಾರ್ಯಕ್ರಮ: ೨೩ಡಿಸೆಂಬರ್೨೦೨೪ರ ಸೋಮವಾರ ಅಕ್ಷರಶಃ ಹಿರೇಹೆಗ್ಡಾಳ್ ಗ್ರಾಮ ಮಠಾಧೀಶರಿಂದ, ಶರಣರಿಂದ, ಸೇವಾಶ್ರಮ ಗುರುಗಳಿಂದ, ಕಲಾವಿದರಿಂದ, ರಾಜಕಾರಣಿಗಳಿಂದ, ಹಿರಿಯರಿಂದ ತುಂಬಿ ತುಳುಕುವಂತಾಗಿದ್ದೂ ನ ಭೂತೋ…ನ ಭವಿಷ್ಯತೆ ಎನ್ನುವಂತಾಗಿತ್ತು. ತಾವರೆನಾಡು, ಕೆಂಪಯ್ಯಸ್ವಾಮಿಯ ಬೀಡು ಎಂದು ಹಿರೇಹೆಗ್ಡಾಳ್ ಜಗಜನಿತ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ವಾಹನ ದಟ್ಟಣೆಗಳಿಂದ ತುಂಬಿ ಹೋಗಿತ್ತು. ದೂರದ ಬಿಜಾಪುರ, ಗಜೇಂದ್ರಗಡ, ಬೆಂಗಳೂರು, ಗದಗ, ಸಿಂಧನೂರು ಸೇರಿದಂತೆ ಗಡಿನಾಡು ಕರ್ನಾಟಕದ ಸಂತೆ ಕುಡ್ಗೂರು ನಿಂದ ಹರ, ಗುರು, ಚರ ಮೂರ್ತಿಗಳ ಜೊತೆಯಲ್ಲಿ ಸಂತ ಮಹಂತರು ಬಣಕಾರ ಮೂಗಪ್ಪನ ಹೃದಯಪೂರ್ವಕ ಕರೆಯೋಲೆ ಕರೆತಂದಿತ್ತು. ಗ್ರಾಮೀಣ ಪರಿಸರದ ಹಿನ್ನೆಲೆಯನ್ನು ಬಹು ಸೂಕ್ಷ್ಮವಾಗಿ ಗಮನಿಸಿದ ಮಹನೀಯರು, ಮೂಗಪ್ಪನಲ್ಲಿ ಅಡಗಿರುವ ಸದುದ್ದೇಶವನ್ನೂ ಮನಸ್ಸಿನಲ್ಲಿಟ್ಟುಕೊಂಡು ಮನಃಪೂರ್ವಕವಾಗಿ ಅರ್ಶೀವದಿಸಿದರು.
ತುಲಾಭಾರ ಕಾರ್ಯಕ್ರಮ: ಲಿಂ. ಪಂಡಿತ ಪುಟ್ಟರಾಜ ಗವಾಯಿಗಳವರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರಿಗೆ, ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ, ಡಾ. ಶ್ರೀಶರಣಬಸವ ಮಹಾಸ್ವಾಮಿಗಳು, ತಳ್ಳಿಹಾಳ ಸಂಸ್ಥಾನ ಕೋಡಿಮಠ, ಗಜೇಂದ್ರಗಡ ಇವರಿಗೆ ತುಲಾಭಾರ ನಡೆಸುವ ಅಭೂತ ಕಾರ್ಯಕ್ರಮಕ್ಕೂ ವೇದಿಕೆ ಸಾಕ್ಷಿಯಾಯಿತು. ಬಣಕಾರ ಮೂಗಪ್ಪ ಓರ್ವಕಲಾವಿದನಾದರೂ, ಅಷ್ಟೇ ಭಕ್ತಿ, ಭಾವನೆಗಳಿರುವ ಭಕ್ತನಾಗಿದ್ದಾನೆ ಎಂದು ಸ್ವಯಂ ಕಲ್ಲಯ್ಯಜ್ಜನವರೇ ಅರ್ಶೀವಚನದಲ್ಲಿ ಶುಭಹಾರೈಸಿದರು. ಕಲಾವಿದನಾಗಿ ಇನ್ನೊಬ್ಬರ ಕಲೆಯನ್ನು ಮತ್ಸರದಿಂದ ನೋಡುವ ಈ ಜಗತ್ತಿನಲ್ಲಿ ಇಂಥವರು ಬಹು ಅಪರೂಪವಾಗಿದ್ದಾರೆ ಎಂದರು. ತುಲಭಾರದ ಕಾಣಿಕೆಯಿಂದಾಗಿ ಅಂಧ, ಅನಾಥ ಮಕ್ಕಳಿಗೂ ಆಸರೆಯಾಗುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಕಾಲಜ್ಞಾನ ಶಿವಯೋಗಿಗಳಾದ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು ಆರ್ಶೀವಾದದಲ್ಲಿ ವಿನಯವಂತಿಕೆಯ ಗುಣದಿಂದಾಗಿ, ಎಲ್ಲರೂ ಗಮನಿಸುವಂತೆ ಮಾಡುವುದು ಬಣಕಾರ ಮೂಗಪ್ಪನಿಗೆ ಸಿದ್ಧಿಸಿದೆ ಎಂದರು. ಮೂಗಪ್ಪ ಎಂಬ ನಾಮಧೇಯವಿದ್ದರೂ, ಇತರರನ್ನು ಮೂಕರನ್ನಾಗಿ ಮಾಡುವ ಚಣಾಕ್ಷಮತಿಯಾಗಿದ್ದಾನೆಂದು ಪ್ರಶಂಸಿದರು. ಮಾಜಿ ಸಚಿವ ಶ್ರೀರಾಮುಲು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ, ಇದೊಂದು ಭಾವಕೈತೆಯ ಸಮಾವೇಶವಾಗಿ ಗೋಚರಿಸುತ್ತದೆ ಎಂದು ಪ್ರಶಂಸಿದರು.

ಸರ್ವಧರ್ಮ ಸಮನ್ವಯದ ಒಡ್ಡೋಲಗದಂತೆ, ೧೨ನೇ ಶತಮಾನದ ಅನುಭಾವಿ ಶರಣರ ಸಂಗಮದ ಅನುಭವ ಮಂಟಪದಂತಿದೆ ಎಂದು ಕಾರ್ಯಕ್ರಮದ ಗುಣಗಾನ ಮಾಡಿದರು. ಹೀಗೆ, ಅನೇಕ ಅರಿವಿನ ವಿಷಯಗಳ ಅನಾವರಣಕ್ಕೆ ಸಾನಿಧ್ಯವಹಿಸಿದ ಕೂಡ್ಲಿಗಿ ಹಿರೇಮಠದ ವೇ.ಮೂ. ಚಿದಾನಂದ ಸ್ವಾಮಿಗಳು, ಎಂ.ಬಿ. ಅಯ್ಯನಹಳ್ಳಿಯ ವೇದಬ್ರಹ್ಮ ವಿಜಯಾನಂದ ಸ್ವಾಮಿ ಸಾರಂಗ ಮಠ, ಬೆಂಗಳೂರಿನ ಪ್ರಖ್ಯಾತ ಮೊಬೈಲ್ ಸಂಖ್ಯಾ ಶಾಸ್ತ್ರತಜ್ಞರಾದ ಡಾ. ಶ್ರೀ ಅಭಯ ಬಿ.ಆರ್. ದೇವರಾಜ್ ಗುರೂಜಿ, ಸಿಂಧನೂರಿನ ವಿಶ್ವಕರ್ಮ ಆಸ್ರಮ ಈಜಿ ಬೊಮ್ಮನಾಳು ಶ್ರೀ ಕಾಳಪ್ಪ ತಾತನವರು, ಗಡಿನಾಡು ಕರ್ನಾಟಕದ ಸಂತೆ ಕುಡ್ಗೂರ್, ಅದೋನಿ ಸರ್ವಧರ್ಮ ಸೇವಾಶ್ರಮದ ಸೂಫಿ ಡಾ. ಮಸ್ತಾನ್ ವಿ ಖಾದ್ರಿ, ಸೂಫಿ ಮೊಹಮದ್ ಅಲಿ, ಚಳ್ಳಕೆರೆಯ ರೇಖಲಗೆರೆ ಕಾವಲ್‌ನ ಶ್ರೀ ದೇನಾ ಭಗತ್ ಗುರೂಜಿ ರಾಜಯೋಗ ವಿದ್ಯಾಶ್ರಮ ನೇತೃತ್ವವನ್ನು ವಹಿಸಿಕೊಂಡು ಶುಭಹಾರೈಸಿದರು.
ಆದರ್ಶ ದಂಪತಿಗಳು: ತಾಲೂಕಿನಾಧ್ಯಂತ ಭಾಗವಹಿಸಿದ ೩೧ಜೋಡಿಗಳು ಆದರ್ಶ ದಂಪತಿಗಳ ಅವಾರ್ಡ-೨೦೨೪ನೇ ಸಾಲಿಗಾಗಿ ನೀಡಲಾಯಿತು. ಈ ಜೋಡಿಗಳಿಗೆ ವೇದಿಕೆಯಲ್ಲಿರುವ ಹರ,ಗುರು, ಚರಮೂರ್ತಿಗಳ ಕೃಪಾರ್ಶೀವಾದ ದೊರಕಿರುವುದು ಅಪೂರ್ವಕ್ಷಣವಾಗಿದೆ ಎಂದು ದಂಪತಿಗಳು ಭಾವದುಂಬಿ ಮೂಗಪ್ಪ ಇವರ ಸಾರ್ಥಕ ಕೆಲಸವನ್ನು ಕೊಂಡಾಡಿದರು. ಲೋಕ ಕಲ್ಯಾಣಾರ್ಥವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹೀಗೆ, ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ಮನೋರಂಜನೆ: ವಿಜಯಪುರ ಜಿಲ್ಲೆ ಕು.ಲಕ್ಷ್ಮೀ ತೇರದಾಳ ಮಠ, ಎಸ್.ಜಿ. ಮತ್ತು ಸಂಗಡಿಗರು, ವಿನೂತ ಮತ್ತು ಸಂಗಡಿಗರು ಸಮೂಹ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಿರುತೆರೆಯ ಕಲಾವಿದರಾದ ಮಿಲ್ಟ್ರೀ ಮಂಜು ಸೇರಿದಂತೆ ಇನ್ನಿತರ ರಂಗಭೂಮಿ, ಹವ್ಯಾಸಿ ರಂಗ ಕಲಾವಿದರಿಂದ ಕಾರ್ಯಕ್ರಮಗಳು ಜರುಗಿದವು. ಹಿರೇಹೆಗ್ಡಾಳ್ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಸಂತೋಷ್ ಕುಮಾರ್ ಐ.ವೈ. ಶ್ರೀ ವೀರಮಾತ ಟ್ರಸ್ಟ್ ಅಧ್ಯಕ್ಷರು ಬಳ್ಳಾರಿ ಇವರ ಘನ ಅಧ್ಯಕ್ಷತೆಯಲ್ಲಿ ಕಲಾಭಾರತಿ ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷ ಬಣಕಾರ ಮೂಗಪ್ಪ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಗಣ್ಯಮಾನ್ಯರನ್ನು, ಕಲಾವಿದರನ್ನು ಗೌರವಿಸಿದರು…

ವರದಿ, ಎಂ, ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend