ಕೂಡ್ಲಿಗಿ:ಮಾಲ್ ಗಳಲ್ಲಿ ರೈತರಿಗೆ ಆಧ್ಯತೆ ನೀಡಿ-ಭಜರಂಗದಳ ದುರುಗೇಶ ಒತ್ತಾಯ…!!!

Listen to this article

ಕೂಡ್ಲಿಗಿ:ಮಾಲ್ ಗಳಲ್ಲಿ ರೈತರಿಗೆ ಆಧ್ಯತೆ ನೀಡಿ-ಭಜರಂಗದಳ ದುರುಗೇಶ ಒತ್ತಾಯ…

ವಿಜಯನಗರ ಜಿಲ್ಲೆ ಕೂಡ್ಲಿಗಿ: ನಮ್ಮ ದೇಶದ ರೈತ ಆತನಿಗೆ, ಮಾಲ್ ಗಳಲ್ಲಿ ಆಧ್ಯತೆ ನೀಡಬೇಕಿದೆ. ರೈತರು ಬೆಳೆದ ಬೆಳಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕೆಂದು, ಭಜರಂಗ ದಳದ ತಾಲೂಕು ಸಂಯೋಜಕರಾ ಬಿ.ಜಿ.ದುರುಗೇಶ ಒತ್ತಾಯಿಸಿದ್ದಾರೆ. ಅವರು ಮಾತನಾಡಿ, ನಾಡಿನ ಹಾಗೂ ದೇಶದ ಯಾವುದೇ ಮಾಲ್ ಗಳಲ್ಲಿ, ನಾವು ತಿನ್ನುವ ಅನ್ನ ಬೆಳೆಯುವ ರೈತನಿಗೆ ಪ್ರಥಮ ಆಧ್ಯತೆ ನೀಡಬೇಕು. ಈ ಮೂಲಕ ರೈತರಿಗೆ ಉತ್ತೇಜನ ನೀಡಬೇಕು, ರೈತರನ್ನು ಗೌರವಿಸಬೇಕು ಅಂದಾಗ ಮಾತ್ರ ಅನ್ನದಾತನ ಋಣ ತೀರಿಸಲು ಸಾಧ್ಯ ಎಂದರು. ಡಿಸಂಬರ್ 23 ರಂದು ರೈತರ ದಿನಾಚರಣೆ ಇರುತ್ತದೆ, ಈ ಸಂದರ್ಭದಲ್ಲಿ ಏರ್ಪಡಿಸುವ ಮಾಲ್ ಗಳಲ್ಲಿ. ರೈತರಿಗೆ ಅನುಕೂಲಕರವಾದ ಮಾಹಿತಿ ಒದಗಿಸುವಂತಹ, ಹಾಗೂ ರೈತರು ಉತ್ಪಾದಿಸುವ ದವಸ ಧಾನ್ಯಗಳ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಈ ನಿಟ್ಟಿನಲ್ಲಿ ಅಗತ್ಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕಿದೆ. ಇದರಿಂದಾಗಿ ಮಕ್ಕಳಲ್ಲಿ ಯುವಕರಲ್ಲಿ, ರೈತರ ಬಗ್ಗೆ ರೈತರು ಬೆಳೆವ ಪ್ರತಿ ಬೆಳೆಯ ಬಗ್ಗೆ ಸಾಮಾನ್ಯ ಜ್ಞಾನ ಇಮ್ಮಡಿಯಾಗಲು ಸಾಧ್ಯ ಎಂದರು. ವಿದೇಶಿ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಪದಾರ್ಥಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ, ಅದು ನಿಲ್ಲಬೇಕು ನಮ್ಮ ಭಾರತೀಯರ ಬೆನ್ನೆಲುಬಾದ ಅನ್ನದಾತನ ಹಿತಕಾಯುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರು. ಡಿಸಂಬರ್ 25ರಂದು ಕ್ರಿಸ್ ಮಸ್ ದಿನವನ್ನು ವಿದೇಶಿ ಸಂಸ್ಕೃತಿಯಲ್ಲಿ ಆಚರಿಸುವ ಬದಲಾಗಿ, ನಮ್ಮ ಸ್ವದೇಶಿಯ ಸಂಸ್ಕೃತಿಯಂತೆ ಹಬ್ಬ ಆಚರಿಸಬೇಕಾಗಿದೆ. ವಿದೇಶೀ ಸಿಹಿ ಖಾಧ್ಯಗಳನ್ನು ಬಳಸಿ, ಪರಿಸರಕ್ಕೆ ಎತೇಚ್ಚವಾದ ಕಸ ತ್ಯಾಜ್ಯ ಎಸೆದು ಪರಿಸರ ಹಾನಿ ಮಾಡಬಾರದು. ಬದಲಿಗೆ ಸ್ವದೇಶಿಯ ರೈತರು ತಯಾರಿಸಿದ ಬೆಲ್ಲದ ಸಿಹಿ ಖಾಧ್ಯಗಳನ್ನು ಬಳಸಬೇಕಿದೆ, ಸಸಿಗಳನ್ನು ಕಿತ್ತು ಬೊಕ್ಕೆ ಮಾಡೋ ಬದಲು ಪ್ರತಿಯೊಬ್ಬರು ಸಸಿ ನೆಟ್ಟು ಹಬ್ಬ ಆಚರಿಬೇಕು. ಈ ಮೂಲಕ ಪರಿಸರ ಕಾಳಜಿ ತೋರಬೆೇಕು, ಹಾಗೂ ಪ್ರತಿಯೊಬ್ಬರೂ ರೈತರ ಬಗ್ಗೆ ಗೌರವ ತಾಳ ಬೇಕು. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸರ್ಕಾರಗಳು, ಮಾಲ್ ಗಳಲ್ಲಿ ಸ್ವದೇಶಿ ಆಹಾರ ಖಾದ್ಯಗಳಿಗೆ ಉತ್ತೇಜನ ನೀಡಬೇಕಿದೆ. ರೈತರು ಉತ್ಪಾದಿಸುವ ಆಹಾರೋತ್ಪನ್ನಗಳಿಗೆ ಆಧ್ಯತೆ ನೀಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದುರುಗೇಶ ಈ ಮೂಲಕ ಒತ್ತಾಯಿಸಿದ್ದಾರೆ….

 

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend