ಕೂಡ್ಲಿಗಿ:ಪಂಚಮಸಾಲಿ ಪ್ರತಿಭಟನೆ:ದುರುದ್ಧೇಶ ಪೂರ್ವಕ ಲಾಠಿ ಚಾರ್ಜ್ ಖಂಡನೀಯ_ಮುಖಂಡರ ಆಕ್ರೋಶ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಬೆಳಗಾವಿಯಲ್ಲಿ, ಪಂಚಮಸಾಲಿ ಸಮಾಜದ ಜಗದ್ಗುರು ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ. ಪಂಚಮಸಾಲಿ ಸಾಲಿ ಸಮಾಜಕ್ಕೆ 2ಎ ಸ್ಥಾನ ಮಾನಕ್ಕೆ ಆಗ್ರಹಿಸಿ, ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ದುರುದ್ಧೇಶದಿಂದ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಮಾವೀಯ ರೀತಿಯಲ್ಲಿ ಲಾಠಿಚಾರ್ಜ್ ಮಾಡಿಸಿದ್ದು. ಘಟನೆಯನ್ನು ಸಮಾಜವು ತೀವ್ರ ವಾಗಿ ಖಂಡಿಸುತ್ತದೆ ಎಂದು, ಮುಖಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು. ಪಂಚಮ ಸಾಲಿ ಸಮಾಜದ, ಕೂಡ್ಲಿಗಿ ತಾಲೂಕಿನ ಹೋರಾಟಗಾರರು ಎಚ್ಚರಿಸಿದ್ದಾರೆ. ಅವರು ಬೆಳಗಾವಿಯಲ್ಲಿ ಜರುಗಿರುವ ಲಾಠಿ ಚಾರ್ಜ್ ಪ್ರಕರಣ ಖಂಡಿಸಿ, ಹಾಗೂ ಪಂಚಮ ಸಾಲಿ ಸಮಾಜಕ್ಕೆ 2ಎ ಸ್ಥಾನ ಮಾನ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ. ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ಮನವಿ ಪತ್ರವನ್ನು ಗ್ರೇಡ್ 2 ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ನೀಡಿದ್ದಾರೆ. ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಪತ್ರ ರವಾನಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮಾಜದ ಮುಖಂಡರು, ಬೆಳವಾವಿ ಲಾಠಿ ಚಾರ್ಜ ಘಟನೆಯನ್ನು ಖಂಡಿಸಿ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ಮೆರವಣಿಗೆ ನಡೆಸಿ. ಅಂತಿಮವಾಗಿ ತಹಶಿಲ್ದಾರರಿಗೆ, ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಮೊರಬ ಶಿವಣ್ಣ. ತಾಲೂಕು ಅಧ್ಯಕ್ಷ ತರಕಾರಿ ರೇವಣ್ಣ, ಕಾರ್ಯದರ್ಶಿ ಎನ್.ಜಿ.ರಮೇಶ್, ಕೋಗಳಿ ಮಂಜುನಾಥ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ. ಗುಳಿಗಿ ವೀರೇಶ್, ಟಿ.ಜಿ.ನಾಗರಾಜ ಗೌಡ, ಪತ್ರಕರ್ತ ಗುಡೇಕೋಟೆ ಎಲೆ.ನಾಗರಾಜ, ಗಿರೀಶ್, ಎಂ.ಮರುಳಸಿದ್ದಪ್ಪ, ಖಾನವಳಿ ಕೊಟ್ರೇಶ್, ಬಣಕಾರ್ ಚಿನ್ನಾಪ್ರಪ್ಪ, ಪಿ.ರಜನಿಕಾಂತ್, ಅಮಲಾಪುರ ಶರಣಪ್ಪ, ಲಕ್ಷ್ಮಿದೇವಿ, ರೇಖಾ, ಮಲ್ಲಿಕಾರ್ಜುನ, ನಂದಿ ಬಸವರಾಜ, ಜಿ.ಆರ್. ಸಿದ್ದೇಶ್, ಎರಿಸ್ವಾಮಿ, ತುಪ್ಪಳ್ಳಿ ಮೂಗಣ್ಣ ಬಣಕಾರ್ ಲೋಕೇಶ್, ಬಿ.ಉಮೇಶ್ ಸೇರಿದಂತೆ. ಅನೇಕ ಮುಖಂಡರು, ಸಮಾಜದ ನೂರಾರು ಭಾಂದವರು ಭಾಗವಹಿಸಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030