ಬಡಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಕಾಯಕದಲ್ಲಿ ತೊಡಗಿಸಿಕೊಂಡ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ.ಅವರು ದಿ; 05-12-2024 ಹಾಗೂ 06-12-2024 ರಂದು ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ತಮ್ಮ ಕ್ಷೇತ್ರದ ಬಡವರ ಕಣ್ಣಿನ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಈ ಬಾರಿ ಎಂದಿನಂತೆ ಸುಮಾರು 47 ಜನರಿಗೆ ತಮ್ಮ ವೈಯಕ್ತಿಕ ಖರ್ಚಿನಿಂದ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅವಕಾಶಮಾಡಿಕೊಟ್ಟು ಜನರ ಪ್ರೀತಿ ಮತ್ತು ಅಭಿಮಾನದ ಮೆಚ್ಚುಗೆಗೆ ಪಾತ್ರರಾದರು. ಹೀಗೆ ಪ್ರತಿ ಗಂಟೆ, ಪ್ರತಿ ದಿನ, ಪ್ರತಿವಾರ ಕೂಡ್ಲಿಗಿ ಕ್ಷೇತ್ರದ ನೂರಾರು ಖಾಯಿಲೆಗಳಿಗೆ ಸಂಬಂಧಿಸಿದಂತೆ, ಸಮಸ್ಯೆಗಳನ್ನು ಹೇಳಿಕೊಂಡು ಹಾಗೂ ಸಹಾಯ ಕೇಳಿಕೊಂಡು ಬರುವ ಬಡವರಿಗೆ ಉನ್ನತ ಮಟ್ಟದಲ್ಲಿ ಗುಣಮಟ್ಟದ ಚಿಕಿತ್ಸೆಕೊಡಿಸಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರುವ ನಿಟ್ಟಿನಲ್ಲಿ ಸಾಮಾಜಿಕ ಪ್ರಗತಿಯ ಒಳಿತಿಗಾಗಿ ಹಗಲು – ಇರುಳು ಎನ್ನದೇ ಶಾಸಕರು ದುಡಿಯುತ್ತಿರುವುದು ಇದೆ. ಮಾನ್ಯ ಶಾಸಕರು, ತಮ್ಮ ಕೂಡ್ಲಿಗಿ ಕ್ಷೇತ್ರದ ಕಷ್ಟದಲ್ಲಿರುವ ಜನರ ಒಡಲಿನ ಧ್ವನಿಯಾಗಿ, ಮನೆಯ ಮಣ್ಣಿನ ಮಗನಾಗಿ, ಬಡವರ ಬಂಧುವಾಗಿ ಹಾಗೂ ಜನರ ಕಲ್ಯಾಣಕ್ಕಾಗಿ ಇಡೀ ಕ್ಷೇತ್ರವನ್ನು ಒಂದು ಕೂಡು ಕುಟುಂಬದಂತೆ ಪರಿಭಾವಿಸಿಕೊಂಡು ಅಪಾರ ಜನಪರ ಕಾಳಜಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದನ್ನು ಕಾಣಬಹುದು..
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030