ವಕೀಲರ ಭವನದ ಕಾಮಗಾರಿಯ ಸ್ಥಳ ಪರಿಶೀಲನೆ ಮಾಡಿದ ಲೋಕೋಪಯೋಗಿ ಸಚಿವ – ಶ್ರೀಯುತ ಸತೀಶ್ ಜಾರಕಿಹೊಳಿ…!!!

Listen to this article

ವಕೀಲರ ಭವನದ ಕಾಮಗಾರಿಯ ಸ್ಥಳ ಪರಿಶೀಲನೆ ಮಾಡಿದ ಲೋಕೋಪಯೋಗಿ ಸಚಿವ – ಶ್ರೀಯುತ ಸತೀಶ್ ಜಾರಕಿಹೊಳಿ.

ಕರ್ನಾಟಕ ಘನ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀಯುತ ಶ್ರೀ ಸತೀಶ್ ಜಾರಕಿಹೊಳಿ ಅವರು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ ಸೌಹಾರ್ದಯುತವಾಗಿ ದಿ; 07-12-2024 ರಂದು ಭೇಟಿ ನೀಡಿದ ಹಿನ್ನೆಲೆಯಲ್ಲಿ, ಮಾನ್ಯ ಸಚಿವರನ್ನೂ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕೋರಿ, ಅತ್ಯಂತ ಗೌರವದಿಂದ ಸನ್ಮಾನಿಸಿ ಬರಮಾಡಿಕೊಂಡರು. ಹಾಗೆಯೇ , ನ್ಯಾಯಾಲಯ ಆವರಣಕ್ಕೆ ನೇರವಾಗಿ ಭೇಟಿ ನೀಡಿ, ನೂತನವಾಗಿ ವಕೀಲರ ಭವನಕ್ಕೆ ಭೂಮಿಪೂಜೆ ನೆರವೇರಿಸಿರುವಂತಹ ಸ್ಥಳ ವಿಕ್ಷಿಸಿ, ಪರಿಶೀಲನೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ನಿಘಮದ ಅಧ್ಯಕ್ಷರಾದ ಡಾ‌‌. ಯೋಗೇಶ ಬಾಬು, ಉಪತಹಶೀಲ್ದಾರರಾದ ನೇತ್ರಾವತಿ, ಸಿಪಿಐ ಸುರೇಶ ತಳವಾರ್ ಮತ್ತು ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸರ್ವ ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಶೂಕರ್, ಮುಖಂಡರಾದ ಜಗಳೂರು ಪಾಲಯ್ಯ, ತಮ್ಮಣ್ಣ ಎನ್. ಟಿ, ತಮ್ಮಣ್ಣ ಎನ್. ವಿ, ನಾಗರಕಟ್ಟೆ ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಶಿಧರಸ್ವಾಮಿ, ಗುಂಡುಮುಣುಗು ಮಂಜಣ್ಣ, ಹೊಸಹಳ್ಳಿ ಸೂರ್ಯಪ್ರಕಾಶ, ಶಫಿ ಇಂಜಿನಿಯರ್ ಸರ್, ಉದಯಜನ್ನು, ಗಾಣಗಟ್ಟೆ ಮಹಾಂತೇಶ, ಪಾಲನಾಯಕನಕೋಟೆ ಕಲ್ಲೇಶ ಮತ್ತು ಮಲ್ಲೇಶ, ಗುಣಸಾಗರ ಕೊಟ್ರೇಶ, ಸಿ.ಎಸ್. ಪುರ ಮಲಿಯಪ್ಪ, ಕಾಂಗ್ರೆಸ್ ವಕ್ತಾರ ಜಿಲಾನ್, ಸಿ. ಬಿ.‌ಸಿದ್ದಣ್ಣ, ಸಮಸ್ತ ವಕೀಲರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend