ಕೂಡ್ಲಿಗಿ 68ನೇ ಮಹಾ ಪರಿ ನಿಬ್ಬಾಣ ದಿನದ ಬೆಳಕಿನ ಮೆರವಣಿಗೆ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದಲ್ಲಿ ದಿ; 06-12-2024 ರಂದು, ಸಂಜೆ ವೇಳೆ, ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ, ಕರ್ನಾಟಕ ಮಾದಿಗ ದಂಡೋರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ( ಡಿ.ಜಿ.ಸಾಗರ ಬಣ), ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ, ( ಎನ್. ಮೂರ್ತಿ ಬಣ) ವತಿಯಿಂದ ವಿಶ್ವ ಜ್ಞಾನಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿದಾತ ಡಾ. ಬಿ. ಆರ್. ಅಂಬೇಡ್ಕರ್ ಸಾಹೇಬ ರವರ 68 ನೇ ಮಹಾ ಪರಿ ನಿಬ್ಬಾಣ ದಿನದ ಪ್ರಯುಕ್ತ ಬೆಳಕಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯಿಂದ ಬಸವ ವೃತ್ತದಿಂದ – ಗಾಂಧಿ ಚಿತಾ ಭಸ್ಮದ ಆದಿಯಾಗಿ ಪಟ್ಟಣ ಕಡೆ ಸಾಗಿತ್ತು. ಈ ಕಾರ್ಯಕ್ರಮದಲ್ಲಿ ಮೇಣದ ಬತ್ತಿಯ ಬೆಳಕಿನ ದೀಪವನ್ನು ಇಡಿದ ಪಟ್ಟಣದ ಎಲ್ಲಾ ವಸತಿ ನಿಲಯಗಳ ವಿದ್ಯಾರ್ಥಿಗಳು ಸಾಲು ಸಾಲಾಗಿ ಕತ್ತಲಿನಿಂದ ಬೆಳಕಿನ ಎಡೆಗೆ ಸಾಗುವ ನಿಟ್ಟಿನಲ್ಲಿ ಭಾಗವಹಿಸಿದ್ದರು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ .ಎನ್. ಟಿ ಅವರು ಪಾಲ್ಗೊಂಡು, ಸಂವಿಧಾನ ಶಿಲ್ಪಿಯಾದ ಡಾ. ಬಿ. ಆರ್. ಅಂಬೇಡ್ಕರ್ ಅವರು ನಮ್ಮ ಭವ್ಯ ಭಾರತಕ್ಕೆ ಸಂವಿಧಾನವನ್ನು ರಚಿಸಿ ಪ್ರತಿಯೊಬ್ಬರು ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಗುವ ನಿಟ್ಟಿನಲ್ಲಿ ಒಂದು ಒಳ್ಳೆಯ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಹೀಗಾಗಿ ನಾವು ಇವತ್ತು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಭೌತಿಕವಾಗಿ ಕಳೆದುಕೊಂಡಿರಬಹುದು. ಆದರೆ ಬೌದ್ಧಿಕವಾಗಿ ನಮ್ಮಲ್ಲಿ ಅವರು ಪ್ರತಿ ನಿಮಿಷ, ಪ್ರತಿ ಗಂಟೆ, ಪ್ರತಿ ದಿನ, ಹೊಸ ರೀತಿಯ ಹೊಸ ಬದಕಿಗೆ ಕಾರಣರಾಗುತ್ತಾರೆ ಎಂದರು. ಅವರು ನಮ್ಮ ರಾಷ್ಟ್ರವನ್ನು ಕಟ್ಟಿದ ಮಹಾನ್ ಶಿಲ್ಪಿ. ಹೀಗಾಗಿ ಇಂತಹ ಮಹಾನ್ ನಾಯಕರನ್ನು ಇಂತಹ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ದಾರಿಯಲ್ಲಿ ನಾವು ಮುನ್ನಡೆಯುತ್ತಾ, ಅವರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಾ, ಸಾಮಾಜಿಕ ಪ್ರಗತಿಯ ಕಡೆ ಹೆಜ್ಜೆ ಹಾಕೋಣ ಎಂದರು. ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್. ಟಿ ಅವರು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಸಿಪಿಐ ಸುರೇಶ ತಳವಾರ್ ಮತ್ತು ಸಿಬ್ಬಂದಿ ವರ್ಗ, ದಲಿತ ಸಂಘರ್ಷ ಸಮಿತಿಯ ಸಂಘಟನೆಯಕಾರರು, ಮುಖಂಡರಾದ ವಕೀಲ ದುರು
ಗೇಶ, ಹಿರೇಕುಂಬಳಕುಂಟೆ ಉಮೇಶ, ಕಾಂಗ್ರೆಸ್ ವಕ್ತಾರ ಜಿಲಾನ್, ಸಾರ್ವಜನಿಕರು, ಪತ್ರಕರ್ತರು, ಸಾರ್ವಜನಿಕರು, ವಸತಿ ನಿಲಯ ಪಾಲಕರು ಇನ್ನೂ ಮುಂತಾದವರು ಉಪಸ್ಥಿತರಿದ್ದರು. ..
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030