ಕೂಡ್ಲಿಗಿ:ವಕೀಲರ ಆಶಯಗಳನ್ನು ಸದಾ ಆಲಿಸಿ ಸ್ಪಂಧಿಸುವೆ-ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಭರವಸೆ- ವಿಜಯನಗರ ಜಿಲ್ಲೆ
ಕೂಡ್ಲಿಗಿ: ಕೂಡ್ಲಿಗಿ ವಕೀಲರ ಆಶಯಗಳನ್ನು, ತಾವು ಸದಾ ಆಲಿಸಿ ಸ್ಪಂಧಿಸುವುದಾಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ಭರವಸೆ ನೀಡಿದರು. ಅವರು ಡಿ4ರಂದು, ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಹೊಂದಿಕೊಂಡಿರುವ ನಿವೇಶನದಲ್ಲಿ. ವಕೀಲರ ಭವನಕ್ಕೆ ನೂತನ ಕಟ್ಟಡ ನಿರ್ಮಾಣ (150 ಲಕ್ಷರೂ ವೆಚ್ಚದ)ಕಾಮಗಾರಿಗೆ, ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರದ ಉನ್ನತ ಮಟ್ಟದಲ್ಲಿ , ವಕೀಲರ ಸಂಘದ ಜೊತೆಗೂಡಿ ವಕೀಲರ ವಿಶ್ರಾಂತಿ ಭವನ ನಿರ್ಮಾಣಕ್ಕಾಗಿ. ಲೋಕೋಪಯೋಗಿ ಸಚಿವರಾದ, ಸತೀಶ್ ಜಾರಕಿಹೊಳಿಯವರಲ್ಲಿ ಮನವಿ ಸಲ್ಲಿಸಲಾಯಿತು. ಅವರು ಸಂತೋಷದಿಂದ ಒಪ್ಪಿ ಅನುಮೋದನೆ ನೀಡಿದರು, ಹಿಂದುಳಿದ ಕೂಡ್ಲಿಗಿ ಕ್ಷೇತ್ರದ ಬಡವರಿಗೆ, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ. ಸುಸಜ್ಜಿತವಾದ ವಕೀಲರ ಭವನ ನಿರ್ಮಿಸಲು, ಲೋಕೋಪಯೋಗಿ ಇಲಾಖಾ ಸಚಿವಾರದ ಸತೀಶ ಜಾರಕೀ ಹೊಳಿ ಸಹಕಾರ ಕೊಟ್ಟಿರುವರು ಎಂದು ಶಾಸಕರು ಸ್ಮರಿಸಿದರು. ಮತ್ತು ಅವರನ್ನು ಭೇಟಿಯಾದ ಸಂಗತಿಯನ್ನು, ಶಾಸಕರು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಂಡು ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ನಮ್ಮಲ್ಲಿ ಕಪ್ಪು ಮತ್ತು ಬಿಳೆ ಕೋಟುಗಳು ಸಮಾಜದಲ್ಲಿ, ಒಂದು ನಾಣ್ಯದ ಎರಡು ಮುಖಗಳು. ವಕೀಲರು ಮತ್ತು ವೈದ್ಯರು ಸಮಾಜದಲ್ಲಿ, ಬಡವರ ಪರ ನ್ಯಾಯ ಯುತವಾಗಿ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲು ಸಾಧ್ಯವಾಗುತ್ತದೆ ಎಂದರು. ವಕೀಲರ ಭವನದ ಕಟ್ಟಡವು ಸುಸಜ್ಜಿತವಾದ ರೀತಿಯಲ್ಲ, ಮತ್ತು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ನಂತರ ಹಿರಿಯ ಸಿವಿಲ್ ನ್ಯಾಯಧೀಶರಾದ, ಜೆ.ಯೋಗೀಶ ರವರು ವೇದಿಕೆಯನ್ನುದ್ಧೇಶಿಸಿ ಮಾತನಾಡಿದರು. ವಕೀಲರ ವಿಶ್ರಾಂತಿ ಭವನದ, ನೂತನ ಕಟ್ಟ ನಿರ್ಮಾಣಕ್ಕೆ. ಅಗತ್ಯ ಅನುದಾನದ ಮೊತ್ತವನ್ನು, ಮತ್ತಷ್ಟು ದುಪ್ಪಟ್ಟು ಹೆಚ್ಚಿಸಲು ಸಲಹೆ ನೀಡಿದರು. ಗೌರವಾನ್ವಿತ ಕಿರಿಯ ಸಿವಿಲ್ ನ್ಯಾಯಧೀಶರಾದ, ಶ್ರೀಮತಿ ಸಿ.ಮಹಾಲಕ್ಷ್ಮಿ, ಅಪರ ಸರ್ಕಾರಿ ವಕೀಲರಾದ ಜಿ.ಪಿ ಶಿವಪ್ರಸಾದ್, ಸರ್ಕಾರಿ ಸಹಾಯಕ ಅಭಿಯೋಜಕರಾದ ವೈ.ಶಿಲ್ಪಾ ವೇದಿಕೆಯಲ್ಲಿದ್ದರು. ಹಿರಿಯ ವಕೀಲರಾದ ಹೋ ಮ ಪಂಡಿತರಾಧ್ಯ, ಎಂ. ಗುರುಸಿದ್ದನಗೌಡ, ಟಿ.ಓಂಕಾರಪ್ಪ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲಿ ಶಿವಪ್ಪನಾಯಕ, ಹಾಗೂ ವಿವಿದ ವಾರ್ಡಗಳ ಸದಸ್ಯರು. ವಿವಿದ ಜನಪ್ರತಿನಿಧಿಗಳು. ಲೋಕೋಪಯೋಗಿ ಇಲಾಖಾ ಅಧಿಕಾರಿಗಳು, ಹಾಗೂ ನ್ಯಾಯಾಲಯ ಇಲಾಖೆಯ ಕೆಲ ಸಿಬ್ಬಂದಿ ಹಾಜರಿದ್ದರು. ಹಿರಿಯ ವಕೀಲರು, ನೂರಾರು ಯುವ ವಕೀಲರು. ಮುಖಂಡರಾದ ಮಾದಿಹಳ್ಳಿ ನಜೀರ್ ಸಾಬ್, ಬಣವಿಕಲ್ಲು ಯರ್ರಿಸ್ವಾಮಿ, ಚಿರತಗುಂಡು ಟೈಲರ್ ಬಸವರಾಜ, ಹಾಲಸಾಗರ ಸಣ್ಣ ತಿಪ್ಪೇಸ್ವಾಮಿ, ಜರ್ಮಲಿ ಗಂಗಣ್ಣ, ನೂರಾರು ಕಕ್ಷಿದಾರರು. ನಾಗರೀಕರು ಉಪಸ್ಥಿತರಿದ್ದರು. ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಮ್.ಶೈಲಜಾರವರು, ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥಿಸಿದರು. ವಕೀಲರಾದ ಸಿ.ವಿರುಪಾಕ್ಷಪ್ಪ ಸ್ವಾಗತಿಸಿ ನಿರೂಪಿಸಿದರು, ವಕೀಲರಾದ ಜಿ.ಎಮ್.ಮಲ್ಲಿಕಾರ್ಜುನ ಸ್ವಾಮಿ ವಂದಿಸಿದರು. ಹಿರಿಯ ವಕೀಲರಾದ ಎಲ್.ಎಸ್. ಬಷೀರ್ ಅಹಮದ್, ಹಾಗೂ ವಕೀಲ ರಾಮಣ್ಣ ಸೇರಿದಂತೆ ಹಿರಿಯ ವಕೀಲರು. ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯಮಾನ್ಯರಾದ, ಹಿರಿಯ ಶ್ರೇಣಿ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರನ್ನು. ಶಾಸಕರನ್ನು ಅಭಿನಂದಿಸಿ ಗೌರವಿಸಿ ಸನ್ಮಾನಿಸಿದರು….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030