ಕೂಡ್ಲಿಗಿ:ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ರು – ಇಬ್ಬರ ಬಂಧನ ಸಾಮಾಗ್ರಿ ಜಪ್ತಿ…!!!

Listen to this article

ಕೂಡ್ಲಿಗಿ:ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ರು – ಇಬ್ಬರ ಬಂಧನ ಸಾಮಾಗ್ರಿ ಜಪ್ತಿ-ವಿಜಯನಗರ ಜಿಲ್ಲೆ ಕೂಡ್ಲಿಗಿ:ನ30_ ತಾಲೂಕಿನ ಈಚಲಬೊಮ್ಮನಹಳ್ಳಿ ಹೊರವಲಯದಲ್ಲಿರುವ, ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಕಳ್ಳತನ ಪ್ರಕರಣವನ್ನು. ಕೂಡ್ಲಿಗಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಬಂಧಿತರು ಕಳ್ಳತನ ಮಾಡಿದ್ದ, ಒಟ್ಟು 1.95.839ರೂ ಬೆಲೆಯ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಸಂಬಂಧಿಸಿದಂತೆ ಪೊಲೀಸ್ ಠಾಣಾಧಿಕಾರಿ ಸಿಪಿಐ ಸುರೇಶ ತಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳ್ಳತನ ಮಾಡಿದ್ದ ಹೂವಿಹಡಗಲಿ ತಾಲೂಕಿನ, ಕೆಂಚಮಲ್ಲನಹಳ್ಳಿ ಯ ಹಡಪದ ವೀರೇಶ. ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯ, ಹನುಮಂತಪ್ಪ ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣ ನ 23 ರಂದು ರಾತ್ರಿ ಜರುಗಿರುವುದಾಗಿ, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾವೆ ದಾಖಲಾಗಿತ್ತು. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಬಿ.ಎಲ್. ಹರಿಬಾಬು, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾದಿಕಾರಿ ಸಲೀಂ ಪಾಷ ರವರ ಸೂಚನೆಯ ಮೇರೆಗೆ. ಕೂಡ್ಲಿಗಿ ಡಿವೈಎಸ್ಪಿ, ಮಲ್ಲೇಶಪ್ಪ ವಿ ಮಲ್ಲಾಪುರವರ ಮಾರ್ಗದರ್ಶನದಲ್ಲಿ. ಸಿಪಿಐ ಸುರೇಶ ಹೆಚ್ ತಳವಾರ ರವರ ನೇತೃತ್ವದಲ್ಲಿ, ಕೂಡ್ಲಿಗಿ ಪಿಎಸ್ಐ ಸಿ.ಪ್ರಕಾಶರವರು. ಅಪರಾಧ ನಿಗ್ರಹ ಹಾಗೂ ಅಪರಾಧಿಗಳ ಪತ್ತೆ ದಳ ಸಿಬ್ಬಂದಿಯವರು, ಕಳ್ಳರ ಪತ್ತೆ ಕಾರ್ಯಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯವರಾದ ಪೊಲೀಸ್ ಪೇದೆಗಳಾದ ಅಂಜಿನಪ್ಪ, ಹಸನುಲ್ಲಾ, ಜಿ.ಹಂಪಣ್ಣ, ಬಂಡೇ ರಾಘವೇಂದ್ರ, ಪ್ರವೀಣಕುಮಾರ, ಶಿವಕುಮಾರ ರವರು ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಪತ್ರಿಕಾ ಪ್ರಕಟಣೆ ಸಂದರ್ಭದಲ್ಲಿ, ಎಎಸ್ಐ ಮೋಹನ್ ಕುಮಾರ್ ಉಪಸ್ಥಿತರಿದ್ದರು….

ವರದಿ, ಅನಿಲ್ ಕುಮಾರ್ ಹುಲಿಕುಂಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend