ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ರೈತರ ಬೆಳೆಗಳೆಲ್ಲ ನಾಶವಾಗಿದ್ದು ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಅಖಿಲ ಭಾರತ ರೈತ ಪಾರ್ಟಿಯ ರಾಜ್ಯಅಧ್ಯಕ್ಷ ರಾದ ಜಿ ಯಶೋದಮ್ಮ ಇವರು ಆಗ್ರಹಿಸಿದರು ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಇಡೀ ಬೆಳೆಗಳೆಲ್ಲ ನೀರುಪಾಲಾಗಿದ್ದು ರೈತರು ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ ಸರ್ಕಾರ ಕೂಡಲೇ ಒಂದು ಎಕರೆಗೆ ರೂ.40ಸಾವಿರ ರೂ ಬೆಳೆ ಪರಿಹಾರವನ್ನು ಪ್ರತಿಯೊಬ್ಬ ರೈತನಿಗೂ ವಿತರಿಸಬೇಕೆಂದು ಈ ಮೂಲಕ ಒತ್ತಾಯಿಸಿದರು ಬಗರ್ ಹುಕುಂ ಸಾಗು ಮಾಡುತ್ತಿರುವ ರೈತರಿಗೆ ಬೇಗ ಪಟ್ಟಾ ವಿತರಣೆ ಮಾಡಬೇಕೆಂದು ಅಗ್ರಹಿಸಿದರು ಈ ಸಂದರ್ಭದಲ್ಲಿ ಈರುಳ್ಳಿ ಬೆಳೆಗಾರರ ಅಧ್ಯಕ್ಷರಾದಂತಹ ಸಿದ್ದೇಶ್ ಅವರು ಶಿವಾನಂದ ಸ್ವಾಮಿ ಎಂಬಿಐನಳ್ಳಿ ಎಂ ಬಸವರಾಜ್ ಕಕ್ಕುಪ್ಪಿ ಅನೇಕ ಮಹಿಳೆಯರು ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಹೂವಿನ ಹಡಗಲಿ ತಹಸಿಲ್ದಾರರವರಿಗೆ ಮನವಿ ಸಲ್ಲಿಸುವುದರ ಮೂಲಕ ಮುಖ್ಯಮಂತ್ರಿಗಳು ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪಿ ವಿಜಯನಗರ ಜಿಲ್ಲಾ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030