ಜರ್ಮಲಿ ದುರ್ಗಾದೇವತೆಯ ಆಶೀರ್ವಾದ ಪಡೆದು ಕ್ಷೇತ್ರದ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿದ – ದೊಡ್ಡ ಮನೆ ಕುಟುಂಬ…
ಜರ್ಮಲಿ ಪಾಳೆಯಗಾರರ ಹೆಣ್ಣು ಮಗಳು ಯುದ್ಧದ ವೇಳೆ ಬಲಿಯಾಗಿರುವ ಕಾರಣಕ್ಕಾಗಿ, ಆತ್ಮ ಶಾಂತಿಗಾಗಿ ಏಳೂರು ಗುಡ್ಡದ ಭಾಗದಲ್ಲಿ ನಾಡದೇವತೆಯಾಗಿ ಜರ್ಮಲಿ ದುರ್ಗಾದೇವಿಯತೆಯೂ ಆರಾಧನೆಗೆ ಒಳಪಡುತ್ತಿರುವುದು ಇದೆ. ಜರ್ಮಲಿ, ಕಾಟ್ರಹಳ್ಳಿ, ಗೆದ್ದಲಗಟ್ಟೆ, ನರಸಿಂಹಗಿರಿ, ಹರವದಿ, ದಿಬ್ಬದಹಳ್ಳಿ, ಮಾಕನಡಕು, ಕೊಟ್ಟೂರು, ಕಾತ್ರಿಕೆಹಟ್ಟಿ ಇನ್ನೂ ಮುಂತಾದ ಹಳ್ಳಿಗಳಲ್ಲಿ ಉತ್ಸವ ರೀತಿಯಲ್ಲಿ ಶ್ರೀ ಜರ್ಮಲಿ ದುರ್ಗಾದೇವಿಯ ಜಾತ್ರೆಯನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಂಗಳವಾರ ದಿ, 11-03-2025 ರಂದು ಏಳೂರು ಗುಡ್ಡ ಎಂದೂ ಕರೆಯಲ್ಪಡುವ ನರಸಿಂಹಗಿರಿ ಗ್ರಾಮದ ದೊಡ್ಡ ಮನೆ ಕುಟುಂಬದ ವತಿಯಿಂದ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರ ಧರ್ಮ ಪತ್ನಿಯಾದ ಶ್ರೀಮತಿ ಓಬಮ್ಮ, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎನ್. ಟಿ. ಶ್ರೀನಿವಾಸ್, ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಸಮಾಜ ಸೇವಕರಾದ ತಮ್ಮಣ್ಣ ಎನ್. ಟಿ ಅವರು, ಕುಟುಂಬದ ಸರ್ವ ಸದಸ್ಯರು ಸೇರಿ ಶ್ರೀ ಜರ್ಮಲಿ ದುರ್ಗಾದೇವತೆಯ ಆಶೀರ್ವಾದ ಪಡೆದು, ಕ್ಷೇತ್ರದ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿ, ಭಕ್ತಿ – ಭಾವದಿಂದ ಪ್ರಾರ್ಥಿಸಿದರು. ಈ ವೇಳೆ ದೊಡ್ಡ ಮನೆ ಕುಟುಂಬ ಬಂಧುಗಳು, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030