ಸುಗಮ ಸಂಚಾರಕ್ಕೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ: ಡಾ ಶ್ರೀನಿವಾಸ್ ಎನ್ ಟಿ .
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾನ್ಯ ಶಾಸಕರಾದ ಡಾll ಶ್ರೀನಿವಾಸ್ ಎನ್ ಟಿ ರವರು 05/02/2025 ರಂದು ವಿವಿಧ ಗ್ರಾಮಗಳ ಕಾಮಗಾರಿ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಕೆಲವೊಂದು ಗ್ರಾಮೀಣ ಭಾಗದ ಡಾಂಬರಿಕರಣ ಕಾಣದೇ ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಯಾವ ಒಬ್ಬ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಂದ ಹಿಡಿದು ಪ್ರಾಥಮಿಕ,ಪ್ರೌಢ, ಪದವಿಪೂರ್ವ & ಪದವಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದೇ ರೀತಿಯಾಗಿ ರೈತರ ಬದುಕು ಹಸನಾಗಲು 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಕೆಲಸ ಮುಗಿದ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಯುವಕರಿಗೆ ಉದ್ಯೋಗಕ್ಕಾಗಿ ಮಾನ್ಯ ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ ನೇತೃತ್ವದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ವಿವಿಧ ಗ್ರಾಮಗಳ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ.
ಚಿರತ ಗುಂಡು ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಸಿ ಸಿ ರಸ್ತೆ ನಿರ್ಮಾಣ (38 ಲಕ್ಷಗಳು )
ಹುರುಳಿಹಾಳು ಮೀನುಕೆರೆ ಮುಖ್ಯ ರಸ್ತೆಯಿಂದ ನಡುವಲಹಳ್ಳಿ ಕೂಡ ರಸ್ತೆ ನಿರ್ಮಾಣ (141 ಲಕ್ಷಗಳು )
ಕುಮತಿಯಿಂದ ಬೋಡಜ್ಜನ ಬಂಡೆ ರಸ್ತೆ ಡಾಂಬರೀಕರಣ(102 ಲಕ್ಷಗಳು )
ಪೂಜಾರಹಳ್ಳಿ ಪಿಚ್ಚರಟ್ಟಿ ರಸ್ತೆ ಡಾಂಬರೀಕರಣ(142.67 ಲಕ್ಷಗಳು )
ಆಲೂರು ಗ್ರಾಮದಿಂದ ಯಂಬಳಿ ವರೆಗೂ ರಸ್ತೆ ಡಂಬರೀಕರಣ (156 ಲಕ್ಷಗಳು )
ಎಕ್ಕೆಗುಂದಿ, ಪಿಚ್ಚರ ಹಟ್ಟಿ, ಯಂಬಳಿ ವಡರಹಟ್ಟಿ, ಹುಲಿಕೆರೆ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಆಯಾ ಗ್ರಾಮಗಳ ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030