ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಡೇಕೋಟೆ ಗ್ರಾಮದ ಚಂದ್ರಯ್ಯ (20) ತಂದೆ ಹನುಮಯ್ಯ ಅವರು ರೈತರಾಗಿದ್ದು, ಒಂದು ತಿಂಗಳ ಹಿಂದೆಯೇ ಹಾವು ಕಚ್ಚಿ ಸಾವನ್ನಪ್ಪಿರುವುದು ಇದೆ. ಚಂದ್ರಯ್ಯ ಅವರಿಗೆ ಒಬ್ಬ ಮಗ, ಒಬ್ಬ ಮಗಳು ಮತ್ತು ಪತ್ನಿ, ಕುಟುಂಬಸ್ಥರು ಇದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ನಂತರ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಸ್ಥಳೀಯ ಮುಖಂಡರೊಂದಿಗೆ ತೆರಳಿ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿ ನೆರವು ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಕೃಷ್ಣ, ಮುಖಂಡರಾದ ರಾಘು ಸ್ವಾಮಿ, ತಮ್ಮಣ್ಣ ಎನ್.ವಿ, ಪೇಯಿಂಟ್ ತಿಪ್ಪೇಸ್ವಾಮಿ, ಕೆ.ಇಬಿ ಗೋವಿಂದಪ್ಪ, ಶಿವರಾಜದೊರೆ, ನಾರಾಯಣಪ್ಪ, ಬಂಗಾಳಿ ಓಬಯ್ಯ ಇನ್ನೂ ಮುಂತಾದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ, ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030