ಕರ್ನಾಟಕ ಪ್ರದೇಶ ಯುವ ಕುರುಬ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ
ರಾಯಚುರು: ರಾಯಚೂರಿನಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು, ನಮ್ಮ ಹೆಮ್ಮೆಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಶ್ರೀ ಬಿ. ಎಂ . ಪಾಟೀಲ್ ಸರ್ ಎಲ್ಲರನ್ನೂ ಸಮಾನರನ್ನಾಗಿ ಕಾಣುತ್ತಾರೆ ಅಂದರೆ ಪುರುಷರಿಗೆ ಸ್ಥಾನಮಾನ ಕೊಡುವ ರೀತಿನೇ ಮಹಿಳೆಯರಿಗೂ ಒಳ್ಳೆಯ ಸ್ಥಾನಮಾನ ಗೌರವವನ್ನು ಕೊಡುತ್ತಾರೆ ಪ್ರತಿ ಮಹಿಳೆಯಲ್ಲೂ ಭುವನೇಶ್ವರಿ ತಾಯಿಯನ್ನ ಕಾಣುತ್ತಾರೆ ಇದಕ್ಕೆ ಸಾಕ್ಷಿಯಾಗಿ ರಾಯಚೂರು ಜಿಲ್ಲೆಯ ಕೆ ನಿರ್ಮಲ ಬಿಚ್ಚಾಲಿ ಅವರನ್ನು ರಾಯಚೂರು ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ಸುನೀತ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಆದೇಶ ಹೊರಡಿಸಿದ್ದಾರೆ.
ಸಮಾಜ ಸಂಘಟನೆಯ ಯುವ ನಾಯಕಿಯರು ಆದ ಶ್ರೀ ಕೆ. ನಿರ್ಮಲಾ ಬಿಚ್ಚಾಲಿ ಮತ್ತು ಉಪಾಧ್ಯಕ್ಷರಾದ ಸುನೀತ ಅವರು ರಾಯಚೂರು ಜಿಲ್ಲಾ ತುಂಬಾ ಸಂಚರಿಸಿ ನಮ್ಮ ಸಮಾಜದಲ್ಲಿ ಹೆಚ್ಚು ಸಂಘಟನೆ ಯಲ್ಲಿ ಆಸಕ್ತಿ ಇರುವಾ ಯುವತಿಯರನ್ನು ಗುರುತಿಸಿ ರಾಯಚೂರು ಜಿಲ್ಲಾ ವ್ಯಾಪಿ ಎಲ್ಲಾ ತಾಲ್ಲೂಕು ಮುಖಂಡರ ಮಾರ್ಗದರ್ಶನದಲ್ಲಿ ಮತ್ತು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳ ಸಹಕಾರದಲ್ಲಿ ಸಂಘಟನೆ ಗೆ ಪ್ರೇರಣೆಯಾಗಲೆಂದು ಈ ಮೂಲಕ ಆದೇಶಿಸುತ್ತೇನೆ ಎಂದು ಪಡೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿ ಸಮಾಜದ ದಿಟ್ಟ ಹೋರಾಟಗಾರ್ತಿಯಾಗಿ,ಸಮಾಜದ ಓರೆಕೋರೆಗಳ ಬಗ್ಗೆ ಧ್ವನಿಯಾಗುತ್ತಾ ಸದಾ ಸಮಾಜದ ಸಂಘಟನೆ,ಹೋರಾಟಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಉತ್ತಮ ಹೆಸರುಗಳಿಸಿಕೊಂಡಿರುವ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಮಂಜುಳಾ ನಾರಾಯಣ್ ಅವರು ಹೇಳಿದರು.ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘಕ್ಕೆ ಮಹಿಳೆಯರು ಹೆಚ್ಚು ಹೆಚ್ಚಾಗಿ ಸೇರ್ಪಡೆಯಾಗುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರು ಜಿಲ್ಲಾಧ್ಯಕ್ಷರು ತಾಯಿ ಹೃದಯದವರು ಮತ್ತು ಹೆಣ್ಣೆಂದರೆ ಗೌರವ ಹೆಣ್ಣು ಮಕ್ಕಳು ಪ್ರತಿಯೊಂದು ರಂಗದಲ್ಲಿ ಮುಂಚೂಣಿಯಲ್ಲಿ ಇರಬೇಕು ಹೆಣ್ಣಿನ ಮೇಲೆ ಆಗುತ್ತಿರುವ ಶೋಷಣೆಗೆ ಕಡಿವಾಣ ಹಾಕಬೇಕು ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲೇ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿನಂತೆ ನಮ್ಮ ಹೆಮ್ಮೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ರಾಹುಲ್ ಕಲ್ಲಂಗರ ಜಿಲ್ಲಾಧ್ಯಕ್ಷರಾದ ರಮೇಶ್ ಮುಡಲದಿನ್ನಿ ನಡೆದುಕೊಳ್ಳುತ್ತಾರೆ. ಇದಕ್ಕೆ ಈ ವೇದಿಕೆಯ ಸಾಕ್ಷಿ…ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಮಂಜುಳಾ ನಾರಾಯಣ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ರಾಹುಲ್ ಕಲ್ಲಂಗರ, ಜಿಲ್ಲಾಧ್ಯಕ್ಷರಾದ ರಮೇಶ್ ಮೂಡಲದಿನ್ನಿ, ಮಾಜಿ ಜಿಲ್ಲಾಧ್ಯಕ್ಷರಾದ ಗುರು ಪ್ರತಾಪ್, ಶಂಕರ ಪಾಟೀಲ್, ಬೀರಪ್ಪ ಬಲ್ಲಟಗಿ, ಮಹಾಂತೇಶ್ ನಕ್ಕುಂದಿ, ಮಾಳಿಂಗರಾಯ ಹೊಸಮನಿ, ಲಿಂಗರಾಜ್ ತಡಕಲ್, ಚೋಟು ಯದ್ಲಾಪುರ್, ನರಸಣ್ಣ ಶಾಸ್ತ್ರಿ, ಗೂಳಪ್ಪ ಬೊಮ್ಮನಾಳ, ತಿಮ್ಮಪ್ಪ ಮರ್ಚಾಟಾಳ, ಹಾಗೂ ಎಲ್ಲಾ ತಾಲೂಕಿನ ಸಂಘಟನೆಯ ಅಧ್ಯಕ್ಷರು ಸರ್ವ ಸದಸ್ಯರು, ದೇವಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಲ್ಲವಿ ಮತ್ತು ಸಮಾಜದ ಮುಕಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030