ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಶನಿವಾರ ರಾತ್ರಿ ಆಯೋಜಿಸಿದ ಲಿಂ ಜಗದ್ಗುರು ಮರುಳಸಿದ್ದೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 13 ನೇ ವರ್ಷದ ಸಂಸ್ಮರಣೋತ್ಸವ.
ಉಜ್ಜಿನಿ :-ಸದಾ ಜಾತ್ಯಾತೀತ ಧರ್ಮಾತೀತವಾಗಿ ಸರ್ವರನ್ನು ಏಕಮನೋಭಾವನೆಯಿಂದ ಪರಿಗಣಿಸುತ್ತ ಬಂದಿರುವ ವೀರಶೈವ ಧರ್ಮದ ಪಂಚ ಪೀಠಗಳು ನಾಡಿನ ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ನಿರಂತರವಾಗಿ ಬೆಂಬಲವಾಗಿ ನಿಂತಿರುವುದು ಮಾದರಿತನ ಎಂದು ವಿಧಾನ ಸಭ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು. ಉಜ್ಜಿಯನಿ ಸದ್ಧರ್ಮ ಪೀಠದಲ್ಲಿ ಶನಿವಾರ ರಾತ್ರಿ ಆಯೋಜಿಸಿದ ಲಿಂ ಜಗದ್ಗುರು ಮರುಳಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 13 ನೇ ವರ್ಷದ ಸಂಸ್ಮರಣೋತ್ಸವ ಮತ್ತು ಶ್ರೀ ಸ್ವಾಮಿಯ ಲಕ್ಷದೀಪೋತ್ಸವದ ಧರ್ಮ ಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು .
ಲಿಂಗೈಕ್ಯ ಜಗದ್ಗುರು ಸದಾ ಭಕ್ತರ ಪ್ರೇಮಿಯಾಗಿ ಸದ್ದರ್ಮ ಪೀಠವನ್ನು ಅವರ ಅಭಿವೃದ್ದಿಗೆ ಮೀಸಲಾಗಿದ್ದರು . ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಜಯ ಎಂಬ ಸಂದೇಶ ಸಾರಿರುವುದು ಪಂಚ ಪೀಠಚಾರ್ಯರ ಸಮಾಜದ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದರು.
ಸರ್ವರಲ್ಲಿ ಸಮಾತ ಭಾವ ಹೊಂದಿ ಎಲ್ಲಾರನ್ನು ಸದಾ ಜೊತೆಯಲ್ಲಿ ಕರೆದುಕೊಂಡು ಹೋಗುವ ಧರ್ಮವಾಗಿರುವ ವೀರಶೈವ ಧರ್ಮ ನಾಡಿನ ಶೈಕ್ಷಣಿಕ ಮತ್ತು ಅನ್ನದಾಸೋಹಕ್ಕೆ ಹೊಸ ಭಾಷ್ಯೆ ಬರೆದಿದೆ ಎಂದು ಹೊಗಳಿದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವುದರ ಜೊತೆಗೆ ಅಜ್ಞಾನವನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಪಸರಿಸುವುದೇ ಲಕ್ಷದೀಪೋತ್ಸವದ ಸಂದೇಶ ಎಂದರು .
ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ ಮಾತನಾಡಿ ಪಂಚ ಪೀಠಗಳಿಗೆ ಸಂಬಂದಿಸಿದಂತೆ ನಾಲ್ಕು ಮಠಗಳು ಹೊನ್ನಾಳಿ ಕ್ಷೇತ್ರದಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ ಸರ್ವರ ಬದುಕಿನಲ್ಲಿ ಬದಲಾವಣೆಯ ಮಹಾ ಪರ್ವ ಬರುತ್ತೆ ಇದಕ್ಕೆ ಸ್ವಾಮೀಜಿಗಳ ಆರ್ಶೀವಾದ ಮುಖ್ಯ ಉತ್ತಮ ಅವಕಾಶ ಬಂದಾಗ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು .
ಕಲ್ಯಾಣ ಸ್ವಾಮೀಜಿ , ಪ್ರಶಾಂತ ಸಾಗರ ಶಿವಾಚಾರ್ಯ , ವರಸದೋಜಾತ , ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿದರು 20ಕ್ಕೂ ಹೆಚ್ಚು ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕಾರ್ಯಕ್ರಮದ ಸಾನ್ನಿಧ್ಯವನ್ನು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ
ಸಹಕಾರ ರತ್ನ ಪ್ರಶಸ್ತಿ ವಿಜೇತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ತಿಪ್ಪೇಸ್ವಾಮಿ , ಉಪಾಧ್ಯಕ್ಷ ಐ ದಾರುಕೇಶ್, ಕೊಟ್ಟೂರು ಪಪಂ ಮಾಜಿ ಉಪಾದ್ಯಕ್ಷ ಸಿದ್ದಲಿಂಗನಗೌಡ, ಮತ್ತಿತರರನ್ನು ಸನ್ಮಾನಿಸಿ,
ಮುಖಂಡರುಗಳಾದ ಎಂ ಗುರುಸಿದ್ದನಗೌಡ, ಉಜ್ಜಿನಿ ಲೋಕಪ್ಪ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಮತ್ತಿತರರ ಸದಸ್ಯರು
ಅರವಿಂದ ಬಸಾಪುರ ಇದ್ದರು.
ಉಜ್ಜಿನಿ 15 :-ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ,ಕಲ್ಯಾಣ ಸ್ವಾಮೀಜಿ, ಪ್ರಶಾಂತ ಸಾಗರ ಶಿವಾಚಾರ್ಯ, ವರಸದೋಜಾತ, ನಂದಿಪುರ ಮಹೇಶ್ವರ ಸ್ವಾಮೀಜಿ, ಜಗಳೂರು ಶಾಸಕ ದೇವೇಂದ್ರಪ್ಪ ,ವಿಧಾನ ಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ, ಹೊನ್ನಾಳಿ ಶಾಸಕ ಡಿ ಜಿ ಶಾಂತನಗೌಡ. ಉಜ್ಜಯಿನಿ ಗ್ರಾಪಂ ಅಧ್ಯಕ್ಷೆ ನಿಂಗಮ್ಮ .ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ತಿಪ್ಪೇಸ್ವಾಮಿ , ಉಪಾಧ್ಯಕ್ಷ ಐ ದಾರುಕೇಶ್, ಇದ್ದಾರೆ..
ವರದಿ ಎಂ ಮಲ್ಲಿಕಾರ್ಜುನ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030